ಆ್ಯಪ್ನಗರ

ತಾ.ಪಂ.ಚುನಾವಣೆ: 12 ನಾಮಪತ್ರ ಸಲ್ಲಿಕೆ

ತಾಲೂಕಿನ ದಢೇಸೂಗೂರು ಹಾಗೂ ಉದ್ಬಾಳ(ಯು)ತಾ.ಪಂ.ಕ್ಷೇತ್ರಗಳಿಗೆ ನಡೆಯುತ್ತಿರುವ ಮರುಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಗುರುವಾರ 12 ನಾಮಪತ್ರ ಸಲ್ಲಿಕೆಯಾಗಿವೆ.

Vijaya Karnataka 18 May 2019, 5:00 am
ಸಿಂಧನೂರು : ತಾಲೂಕಿನ ದಢೇಸೂಗೂರು ಹಾಗೂ ಉದ್ಬಾಳ(ಯು)ತಾ.ಪಂ.ಕ್ಷೇತ್ರಗಳಿಗೆ ನಡೆಯುತ್ತಿರುವ ಮರುಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಗುರುವಾರ 12 ನಾಮಪತ್ರ ಸಲ್ಲಿಕೆಯಾಗಿವೆ.
Vijaya Karnataka Web tp election 12 filing nomination
ತಾ.ಪಂ.ಚುನಾವಣೆ: 12 ನಾಮಪತ್ರ ಸಲ್ಲಿಕೆ


ದಢೇಸುಗೂರು ತಾ.ಪಂ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ರಬ್ಬಾನಿ, ಪಾರ್ವತಿ, ಶ್ರಾವಣಿ, ಜೆಡಿಎಸ್‌ ಪಕ್ಷ ದಿಂದ ರತ್ನಮ್ಮ ಮುದುಕಪ್ಪ ಉಪ್ಪಳ, ಶೋಭಾ ಉಪ್ಪಳ, ಪಕ್ಷೇತರರಾಗಿ ಖಾಜಾಬನಿ, ಮಾಳವ್ವ, ದ್ಯಾವಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಉದ್ಬಾಳ(ಯು) ಕ್ಷೇತ್ರಕ್ಕೆ ಜೆಡಿಎಸ್‌ದಿಂದ ಸಲ್ಮಾನ್‌ರಾಜು, ಬಿಜೆಪಿಯಿಂದ ಸಿದ್ದಪ್ಪ ಹನುಮಂತಪ್ಪ, ಕಾಂಗ್ರೆಸ್‌ದಿಂದ ರಾಮಣ್ಣ ಹನುಮಂತಪ್ಪ, ಬಸವರಾಜ ಡಿ.ದುರುಗಪ್ಪ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಬಸವರಾಜ ನಂದಿಬೇವೂರು ತಿಳಿಸಿದರು. ನಾಮಪತ್ರ ಸಲ್ಲಿಕೆ ಪೂರ್ಣಗೊಂಡಿದ್ದು, ಮೇ17 ರಂದು ಪರಿಶೀಲನೆ, ಮೇ20ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನದ ಕಾಲಾವಕಾಶ ನೀಡಲಾಗಿದೆ. ಮೇ29 ರಂದು ಚುನಾವಣೆ ನಡೆಯಲಿದೆ.




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ