ಆ್ಯಪ್ನಗರ

ಶಾಸಕ ಹೂಲಗೇರಿಗೆ ತಟ್ಟಿದ ಟ್ರಾಫಿಕ್‌ ಸಮಸ್ಯೆ

ಪಟ್ಟಣದಲ್ಲಿನ ಟ್ರಾಫಿಕ್‌ ಸಮಸ್ಯೆಯ ಬಿಸಿ ಲಿಂಗಸುಗೂರು ಕ್ಷೇತ್ರದ ಶಾಸಕ ಡಿ.ಎಸ್‌. ಹೂಲಗೇರಿಯವರಿಗೆ ಸೋಮವಾರ ತಟ್ಟಿತು.

Vijaya Karnataka 6 Nov 2019, 2:39 pm
ಮುದಗಲ್‌ : ಪಟ್ಟಣದಲ್ಲಿನ ಟ್ರಾಫಿಕ್‌ ಸಮಸ್ಯೆಯ ಬಿಸಿ ಲಿಂಗಸುಗೂರು ಕ್ಷೇತ್ರದ ಶಾಸಕ ಡಿ.ಎಸ್‌. ಹೂಲಗೇರಿಯವರಿಗೆ ಸೋಮವಾರ ತಟ್ಟಿತು.
Vijaya Karnataka Web traffic heated to mla hulegare
ಶಾಸಕ ಹೂಲಗೇರಿಗೆ ತಟ್ಟಿದ ಟ್ರಾಫಿಕ್‌ ಸಮಸ್ಯೆ


ಪಟ್ಟಣದಲ್ಲಿಯ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ, ಜನತೆಯ ಸಮಸ್ಯೆ ಆಲಿಸಲು ಶಾಸಕರು ಆಗಮಿಸಿದ್ದರು. ಈ ಸಂದರ್ಭ ತರಕಾರಿ ಮಾರುಕಟ್ಟೆಯಲ್ಲಿಯ ಖಾಸಗಿ ವಾಹನಗಳ ದಟ್ಟಣೆಯಿಂದ ಶಾಸಕರ ವಾಹನವನ್ನು ತಿರುಗಿಸಿಕೊಳ್ಳಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಯಿತು. ರಾಯಚೂರು-ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿಯೂ ಟ್ರಾಫಿಕ್‌ ಸಮಸ್ಯೆ ಆಗಿರುವುದನ್ನು ಕಂಡು ವಾಹನವನ್ನೇರದೇ ನಡೆದುಕೊಂಡು ಹೋದರು.

ಶಾಸಕರ ಆಪ್ತ ಕಾರ್ಯದರ್ಶಿ ಠಾಣೆಗೆ ಮಾತನಾಡಿದ ಬಳಿಕ ಎಎಸ್‌ಐ ಮೌಲಾಸಾಬ್‌ ಆಗಮಿಸಿದರೂ ಟ್ರಾಫಿಕ್‌ ಸಮಸ್ಯೆ ಮಾತ್ರ ನಿವಾರಣೆಯಾಗಲಿಲ್ಲ. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದಾವೂದ್‌ಸಾಬ್‌, ಮುಖಂಡರಾದ ಸುರೇಂದ್ರಗೌಡ ಆದಾಪೂರ, ಮಹಾಂತೇಶ ಪಾಟೀಲ, ಪುರಸಭೆ ಸದಸ್ಯರಾದ ಶೇಖ ಅಜಮೀರ, ತಮ್ಮಣ್ಣ, ಕೇಶವರಡ್ಡಿ, ಮುಖ್ಯಾಧಿಕಾರಿ ಎನ್‌. ಮೂರ್ತಿ ಸೇರಿ ಮುಂತಾದವರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ