ಆ್ಯಪ್ನಗರ

ಕೆಳಮೈಯಿಂದ ಮೇಲ್ಮೈಗೆ ವರ್ಗಾವಣೆ: ಪ್ರತಿಭಟನೆ

ಸ್ಥಳೀಯ ಚಿನ್ನದಗಣಿ ಕಂಪನಿಗೆ ಇತ್ತೀಚೆಗಷ್ಟೇ ನೇಮಕಗೊಂಡ ಕೆಲವು ಯುವ ಕಾರ್ಮಿಕರನ್ನು ಭೂಕೆಳಮೈ ವಿಭಾಗದಿಂದ ಮೇಲ್ಮೈ ವಿಭಾಗಕ್ಕೆ ಗಣಿ ಆಡಳಿತ ವರ್ಗಾವಣೆ ಮಾಡಿದ್ದನ್ನು ಖಂಡಿಸಿ ಸೇವಾ ಹಿರಿತನ ಹೊಂದಿದ ಸೆಂಟ್ರಲ್‌ ಶಾಫ್ಟ್‌ನ ಬೆಳಗಿನ ಪಾಳಿಯ ಕಾರ್ಮಿಕರು ಕೆಲಸಕ್ಕೆ ಹೋಗದೇ ಸೋಮವಾರ ಮೂರು ತಾಸು ಪ್ರತಿಭಟನೆ ನಡೆಸಿದರು.

Vijaya Karnataka 17 Jul 2018, 5:00 am
ಹಟ್ಟಿಚಿನ್ನದಗಣಿ ; ಸ್ಥಳೀಯ ಚಿನ್ನದಗಣಿ ಕಂಪನಿಗೆ ಇತ್ತೀಚೆಗಷ್ಟೇ ನೇಮಕಗೊಂಡ ಕೆಲವು ಯುವ ಕಾರ್ಮಿಕರನ್ನು ಭೂಕೆಳಮೈ ವಿಭಾಗದಿಂದ ಮೇಲ್ಮೈ ವಿಭಾಗಕ್ಕೆ ಗಣಿ ಆಡಳಿತ ವರ್ಗಾವಣೆ ಮಾಡಿದ್ದನ್ನು ಖಂಡಿಸಿ ಸೇವಾ ಹಿರಿತನ ಹೊಂದಿದ ಸೆಂಟ್ರಲ್‌ ಶಾಫ್ಟ್‌ನ ಬೆಳಗಿನ ಪಾಳಿಯ ಕಾರ್ಮಿಕರು ಕೆಲಸಕ್ಕೆ ಹೋಗದೇ ಸೋಮವಾರ ಮೂರು ತಾಸು ಪ್ರತಿಭಟನೆ ನಡೆಸಿದರು.
Vijaya Karnataka Web RAC-RCH16HGM P1


ಗಣಿ ಕಂಪನಿಗೆ ಕೆಲಸಕ್ಕೆ ಸೇರಿ ವರ್ಷ ಅಥವಾ ಎರಡು ವರ್ಷ ಕಳೆದಿಲ್ಲ. ಅಂಥವರನ್ನು ಭೂಕೆಳಮೈ ವಿಭಾಗದಿಂದ ಭೂಮೇಲ್ಮೈ ವಿಭಾಗಕ್ಕೆ ವರ್ಗಾವಣೆ ಮಾಡಿರುವುದು ಸರಿಯಲ್ಲ. ಮೇ 25 ರಂದು 25 ಕಾರ್ಮಿಕರನ್ನು ಭೂಕೆಳಮೈಯಿಂದ ಭೂಮೇಲ್ಮೈಗೆ ವರ್ಗಾವಣೆ ಮಾಡಲಾಗಿತ್ತು. ಆಗ ಕಾರ್ಮಿಕರು ಇದರ ಬಗ್ಗೆ ಯಾವ ಪ್ರಶ್ನೆ ಮಾಡಿರಲಿಲ್ಲ. ಇದು ಇಷ್ಟಕ್ಕೆ ನಿಲ್ಲದೇ ಜು.11 ರಂದು ಮತ್ತೆ 9 ಕಾರ್ಮಿಕರನ್ನು ಭೂಮೇಲ್ಮೈ ವಿಭಾಗಕ್ಕೆ ವರ್ಗಾವಣೆ ಮಾಡಿದ್ದು, ಉಳಿದ ಕಾರ್ಮಿಕರನ್ನು ಕೆರಳಿಸುವಂತೆ ಮಾಡಿದೆ. ಜು.11ರಂದು ಮಾಡಿದ ವರ್ಗಾವಣೆಯಲ್ಲಿ ಇನ್ನು ಪ್ರೊಬೇಷನರಿ ಅವಧಿಯೂ ಮುಗಿದಿಲ್ಲದ ಇಬ್ಬರು ಕಾರ್ಮಿಕರನ್ನು ವರ್ಗಾವಣೆ ಮಾಡಿದ್ದರು. ವರ್ಗಾವಣೆ ಖಂಡಿಸಿ ಇತ್ತೀಚೆಗಷ್ಟೇ ಪ್ರತಿಭಟನೆ ನಡೆಸಲಾಗಿತ್ತು. ಕಂಪನಿ ಅಧಿಕಾರಿಗಳು ನೀಡಿದ ಭರವಸೆ ಈಡೇರದಿದ್ದರಿಂದ ಸೋಮವಾರ ಪುನಃ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಕಂಪನಿ ಅಧಿಕಾರಿಗಳು ಗಣಿ ವ್ಯವಸ್ಥಾಪಕರು ರಜೆ ಮೇಲಿದ್ದು, ಅವರು ಬಂದ ನಂತರ ಸೂಕ್ತ ಉತ್ತರ ನೀಡಲಿದ್ದಾರೆಂದು ತಿಳಿಸಿದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆದು ಕೆಲಸಕ್ಕೆ ಹಾಜರಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ