ಆ್ಯಪ್ನಗರ

‘ನೋಟಾದಿಂದ ರಾಜಕೀಯ ಪಕ್ಷ ಗಳಲ್ಲಿ ನಡುಕ’

ಕಳೆದ 10 ವರ್ಷಗಳಿಂದ ಚುನಾವಣೆಗಳಲ್ಲಿ ನೋಟಾ ಚಲಾವಣೆ ಹೆಚ್ಚಾಗಿರುವುದು ರಾಜಕೀಯ ಪಕ್ಷ ಗಳಿಗೆ ನಡುಕ ಶುರುವಾಗಿದೆ. ಈ ಪ್ರಕ್ರಿಯೆ ಹೀಗೆ ಮುಂದುವರಿದಲ್ಲಿ ಜನಪ್ರತಿನಿಧಿಗಳನ್ನು ಬದಲಾಯಿಸುವ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುತ್ತದೆ ಎಂದು ಪ್ರಜಾಪ್ರಭುತ್ವ ಸುಧಾರಣೆ ಸಂಸ್ಥೆಯ ಮುಖ್ಯಸ್ಥ ಡಾ.ತ್ರಿಲೋಕಚಂದ್ರ ಶಾಸ್ತ್ರಿ ಹೇಳಿದರು.

Vijaya Karnataka 24 Apr 2018, 5:00 am
ರಾಯಚೂರು : ಕಳೆದ 10 ವರ್ಷಗಳಿಂದ ಚುನಾವಣೆಗಳಲ್ಲಿ ನೋಟಾ ಚಲಾವಣೆ ಹೆಚ್ಚಾಗಿರುವುದು ರಾಜಕೀಯ ಪಕ್ಷ ಗಳಿಗೆ ನಡುಕ ಶುರುವಾಗಿದೆ. ಈ ಪ್ರಕ್ರಿಯೆ ಹೀಗೆ ಮುಂದುವರಿದಲ್ಲಿ ಜನಪ್ರತಿನಿಧಿಗಳನ್ನು ಬದಲಾಯಿಸುವ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುತ್ತದೆ ಎಂದು ಪ್ರಜಾಪ್ರಭುತ್ವ ಸುಧಾರಣೆ ಸಂಸ್ಥೆಯ ಮುಖ್ಯಸ್ಥ ಡಾ.ತ್ರಿಲೋಕಚಂದ್ರ ಶಾಸ್ತ್ರಿ ಹೇಳಿದರು.
Vijaya Karnataka Web RAC-RCH23HD04


ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಮದ್ಯ ನಿಷೇಧ ಆಂದೋಲನ ನಡೆಸುತ್ತಿರುವ 71ದಿನಗಳ ನಿರಂತರ ಧರಣಿ ಸೋಮವಾರ 63ನೇ ದಿನ ಪೂರೈಸಿದ್ದು, ಈ ಹೋರಾಟಕ್ಕೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.

ಅಂದು ಸುಭಾಷ್‌ ಚಂದ್ರ ಬೋಸರು ನನಗೆ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಹೇಳಿದ್ದರು. ಆದರೆ, ಇಂದಿನ ರಾಜಕಾರಣಿಗಳು ನಮಗೆ ವೋಟು ಕೊಡಿ, ನಾವು ನೋಟು ನೀಡುತ್ತೇವೆ ಎಂಬ ಆಮಿಷವೊಡ್ಡುತ್ತಿರುವುದು ದುರಂತವೇ ಸರಿ. ಪ್ರಸಕ್ತ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಕ್ರಿಮಿನಲ್‌ ಮೊಕದ್ದಮೆಯುಳ್ಳ ಅಭ್ಯರ್ಥಿಗಳು ಕಣದಲ್ಲಿದ್ದು, ಜನರು ಪ್ರಶ್ನಿಸದ ಹೊರತು ಬದಲಾವಣೆ ಅಸಾಧ್ಯ. ಮೈಸೂರು, ಕೊಡರಿನಲ್ಲಿ ಮತದಾನದ ಕುರಿತು ಜಾಗೃತಿ ಕಾರ್ಯ ಕೈಗೊಂಡಿದ್ದು, ಹಣ, ಹೆಂಡ ಬೇಡ ಉದ್ಯೋಗ ನೀಡಿ, ನಮ್ಮ ಮತ ಮಾರಾಟಕ್ಕಿಲ್ಲ ಎಂಬ ಘೋಷ ವಾಕ್ಯದಡಿ ಪ್ರಚಾರ ಕಾರ್ಯ ನಡೆಸಲಾಗಿದೆ ಎಂದರು.

ಮೋಕ್ಷ ಮ್ಮ, ವಿದ್ಯಾ, ರೇಣುಕಾ, ಹುಲಿಗೆಮ್ಮ, ಮಾಳಮ್ಮ ಸೇರಿ ಇತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ