ಆ್ಯಪ್ನಗರ

ಇನ್ನೆರಡು ಡಿಸಿಎಂ ಹುದ್ದೆಗಳ ಸೃಷ್ಠಿ ಅಥವಾ ಗೊಂದಲ‌ ಮಾಧ್ಯಮಗಳ ಸೃಷ್ಟಿ: ಲಕ್ಷ್ಮಣ ಸವದಿ

ಉಪ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಸಂಪುಟ ವಿಸ್ತರಣೆ ಮಾಡಲೇಬೇಕಿದೆ. ಇದರ ಜತೆಗೆ ಮತ್ತೆರಡು ಡಿಸಿಎಂ ಹುದ್ದೆಗಳನ್ನು ಸೃಷ್ಟಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಈ ಬಗ್ಗೆ ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ.

Vijaya Karnataka Web 15 Dec 2019, 1:06 pm
ರಾಯಚೂರು: ಇನ್ನೆರಡು ಡಿಸಿಎಂ ಹುದ್ದೆಗಳ ಸೃಷ್ಟಿ ಅಥವಾ ಗೊಂದಲ‌ ಮಾಧ್ಯಮಗಳ ಸೃಷ್ಟಿ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ಅಲ್ಲದೆ, ಯಾವ ಸಚಿವರಲ್ಲೂ ಗೊಂದಲ ಇಲ್ಲ, ಇದೆಲ್ಲ ಊಹಾಪೋಹ ಅಷ್ಟೆ ಎಂದೂ ಹೇಳಿಕೆ ನೀಡಿದ್ದಾರೆ.
Vijaya Karnataka Web laxman savadi toi 11


ಉಪ ಚುನಾವಣೆ ಫಲಿತಾಂಶ ಬಳಿಕ ಇನ್ನೆರಡು ಡಿಸಿಎಂ ಹುದ್ದೆಗಳ ಸೃಷ್ಟಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಈ ಬಗ್ಗೆ ರಾಯಚೂರಿನಲ್ಲಿ ಮಾಹಿತಿ ನೀಡಿದ ಡಿಸಿಎಂ ಲಕ್ಷ್ಮಣ ಸವದಿ, ಇನ್ನೆರಡು ಡಿಸಿಎಂ ಹುದ್ದೆಗಳ ಸೃಷ್ಠಿ ಅಥವಾ ಗೊಂದಲ‌ ಮಾಧ್ಯಮಗಳ ಸೃಷ್ಟಿ. ಯಾವ ಸಚಿವರಲ್ಲೂ ಗೊಂದಲ ಇಲ್ಲ, ಇದೆಲ್ಲ ಊಹಾಪೋಹ ಅಷ್ಟೆ ಎಂದಿದ್ದಾರೆ. ಜತೆಗೆ, ಯಾವ ಸಚಿವರಲ್ಲೂ ಗೊಂದಲ ಇಲ್ಲ, ಊಹಾಪೋಹ ಅಷ್ಟೆ. ಈ ಬಗ್ಗೆ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಇನ್ನು, ರೈತರ ಆತ್ಮಹತ್ಯೆಯ ಪ್ರಕರಣಗಳು ತಗ್ಗಿಸುವ ಬಗ್ಗೆ ರೈತರಿಗೆ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಸರಕಾರ ಮಾಡುತ್ತಿದೆ. ಪೌರತ್ವ ಕಾಯ್ದೆ ಜಾರಿಗೆ ಬಂದಾಗಿದೆ. ಇದರಿಂದ ಯಾವ ಸಮುದಾಯಕ್ಕೆ ತೊಂದರೆ ಆಗದು.‌ ಕೆಲವರು ಜನರ ದಾರಿ ತಪ್ಪಿಸಿ ಗೊಂದಲ‌ ಮೂಡಿಸುತ್ತಿದ್ದಾರೆ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.

ಈ ಸುದ್ದಿ ಓದಿ: ಆಸ್ಪತ್ರೆಯಲ್ಲಿದ್ದ ಸಿದ್ದುಗೆ ಐದು ದಿನವೂ ನಾಟಿಕೋಳಿ ಸ್ಪೆಷಲ್ !

ನೆರೆಯಿಂದ ಹಾಳಾದ ಬೆಳೆ ಹಾಗೂ ಮನೆಗಳ ಹಾನಿಗೆ ಕೇಂದ್ರದ‌ 2ನೇ ಹಂತದ ಪರಿಹಾರ ಬಂದಾಕ್ಷಣ ಉಳಿದವರಿಗೆ ಜಮೆ ಮಾಡಲಾಗುವುದು. ಬೆಳೆ‌ ವಿಮೆ ಪರಿಹಾರಕ್ಕೆ ವಿಮಾ ಕಂಪನಿಗಳಿಂದ ಲಂಚದ ಬೇಡಿಕೆ ಆರೋಪ ಸುಳ್ಳು. ಬೇಗ ಪರಿಹಾರದ ವಿತರಣೆಗೆ ಸಭೆ ಮಾಡಿ ಸೂಚನೆ ನೀಡಲಾಗಿದೆ. ಅಲ್ಲದೆ, ಸಾರಿಗೆ ಇಲಾಖೆಯಿಂದ 1200 ಹೊಸ ಬಸ್ ಖರೀದಿಗೆ ಚಿಂತನೆ ಮಾಡಲಾಗಿದೆ ಎಂದೂ ರಾಯಚೂರಿನಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ- ಆಸ್ಪತ್ರೆಯಿಂದ ಡಿಸ್ಚಾರ್ಜ್‌ಗೊಂಡ ಸಿದ್ದರಾಮಯ್ಯ ಹೇಳಿಕೆ

ಬಾಂಗ್ಲಾದಿಂದ ವಲಸೆ ಬಂದವರಿಗೆ ಅನ್ಯ ರಾಜ್ಯಗಳಲ್ಲಿ ಆಶ್ರಯ ಬೇಡ - ಪೇಜಾವರ ಶ್ರೀ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ