ಆ್ಯಪ್ನಗರ

ಬಿಜೆಪಿ ಗೆಲುವು : ಕಾಂಗ್ರೆಸ್‌ ಮುಖಂಡರಿಂದ ವಿಜಯೋತ್ಸವ

ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಗೆಲುವು ಸಾಧಿಸಿದ್ದಕ್ಕೆ ಪಟ್ಟಣದಲ್ಲಿ ಕಾಂಗ್ರೆಸ್‌ ಮುಖಂಡರು ಗುರುವಾರ ರಾತ್ರಿ ವಿಜಯೋತ್ಸವ ಆಚರಿಸಿದರು.

Vijaya Karnataka 25 May 2019, 5:00 am
ಲಿಂಗಸುಗೂರು : ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಗೆಲುವು ಸಾಧಿಸಿದ್ದಕ್ಕೆ ಪಟ್ಟಣದಲ್ಲಿ ಕಾಂಗ್ರೆಸ್‌ ಮುಖಂಡರು ಗುರುವಾರ ರಾತ್ರಿ ವಿಜಯೋತ್ಸವ ಆಚರಿಸಿದರು.
Vijaya Karnataka Web victory celebration
ಬಿಜೆಪಿ ಗೆಲುವು : ಕಾಂಗ್ರೆಸ್‌ ಮುಖಂಡರಿಂದ ವಿಜಯೋತ್ಸವ


ಕಾಂಗ್ರೆಸ್‌ ಹಿರಿಯ ಮುಖಂಡ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಖಾದರಪಾಶಾ ನೇತೃತ್ವದಲ್ಲಿ ಅನೇಕ ಮುಖಂಡರು ಪಟ್ಟಣದ ಗಡಿಯಾರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ನಂತರ ಮಾತನಾಡಿದ ಖಾದರಪಾಶಾ, ರಾಜಾ ಅಮರೇಶ್ವರ ನಾಯಕ ಅವರು ನನಗೆ ರಾಜಕೀಯ ಗುರುಗಳು. ಅವರು ಇಲ್ಲಿ ಶಾಸಕ ಹಾಗೂ ಸಚಿವರಿದ್ದಾಗ ನನ್ನನ್ನು ಆಶ್ರಯ ಸಮಿತಿಗೆ ತಾಲೂಕು ಅಧ್ಯಕ್ಷ ಸ್ಥಾನ ನೀಡಿದ್ದಲ್ಲದೆ ಪುರಸಭೆ ಸದಸ್ಯನಾಗಲು, ಅಧ್ಯಕ್ಷ ನಾಗಲು ಅವರೇ ಕಾರಣರು. ಈಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದೇನೆ. ನಮಗೆ ವ್ಯಕ್ತಿ ಮುಖ್ಯ ಪಕ್ಷ ಮುಖ್ಯವಲ್ಲ. ಮುಂದೆ ಪಕ್ಷ ದಲ್ಲಿ ಯಾವುದೇ ಸ್ಥಾನಮಾನ ನೀಡಿದರೆ ಬಿಜೆಪಿಗೆ ಬರಲು ನಾನು ಸಿದ್ಧವೆಂದರು.

ಮುಖಂಡರಾದ ಎಕ್ಬಾಲ್‌, ನವಾಬ್‌, ಪ್ರಭು ಗಸ್ತಿ, ಖಾಲಿದ್‌ ಟಿ, ಕರವೇ ಅಧ್ಯಕ್ಷ ಜಿಲಾನಿ ಪಾಶಾ, ಅಲ್ಲಾವುದ್ದೀನ್‌ ಪಟೇಲ್‌, ಸೈಯದ್‌, ಅನ್ವರ್‌, ಶಿವರಾಜ್‌ ನಾಯಕ, ಬಸವರಾಜ ನಾಯಕ, ಡಾ.ಜಲಾಲುದ್ದೀನ್‌ ಅಕ್ಬರ್‌ ಸೇರಿದಂತೆ ಇನ್ನಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ