ಆ್ಯಪ್ನಗರ

ಕೋಠಾ ಗ್ರಾಮಕ್ಕೆ ಕಾಶಿ ಜಗದ್ಗುರುಗಳ ಭೇಟಿ

ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಹಮ್ಮಿಕೊಂಡಿರುವ 'ಜಗದ್ಗುರುಗಳ ನಡೆ ರೈತರ ಕಡೆ' ಜಾಥಾ, ಶುಕ್ರವಾರ ಕೋಠಾ ಗ್ರಾಮ ತಲುಪಿತು. ಈ ವೇಳೆ ಜಗದ್ಗುರುಗಳು, ಗ್ರಾಮದ ರೈತರಿಗೆ ಆತ್ಮಸ್ಥೈರ್ಯ ತುಂಬಿದರು.

Vijaya Karnataka 18 Aug 2018, 5:00 am
ಹಟ್ಟಿಚಿನ್ನದಗಣಿ : ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಹಮ್ಮಿಕೊಂಡಿರುವ 'ಜಗದ್ಗುರುಗಳ ನಡೆ ರೈತರ ಕಡೆ' ಜಾಥಾ, ಶುಕ್ರವಾರ ಕೋಠಾ ಗ್ರಾಮ ತಲುಪಿತು. ಈ ವೇಳೆ ಜಗದ್ಗುರುಗಳು, ಗ್ರಾಮದ ರೈತರಿಗೆ ಆತ್ಮಸ್ಥೈರ್ಯ ತುಂಬಿದರು.
Vijaya Karnataka Web RAC-RCH17HGM P2


ಇದಕ್ಕೂ ಮೊದಲು ಜಗದ್ಗುರುಗಳನ್ನು ಗ್ರಾಮಸ್ಥರು ಎತ್ತಿನ ಬಂಡಿಯಲ್ಲಿ ಭವ್ಯ ಮೆರವಣಿಗೆ ನಡೆಸಿದರು. ಆಂಜನೇಯ ದೇವಸ್ಥಾನದ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಶ್ರೀಗಳು, ''ರೈತರು ಎಂಥದೇ ಸಮಸ್ಯೆ ಬಂದರೂ ಎದೆಗುಂದಬಾರದು. ಇಂದಲ್ಲ ನಾಳೆ ಸಾಲ ತೀರಿಸುವೆ ಎಂಬ ಮನೋಸ್ಥೈರ್ಯ ಹೊಂದಬೇಕು. ಆತ್ಮಹತ್ಯೆಯಿಂದ ಯಾವ ಪ್ರಯೋಜನವೂ ಇಲ್ಲ. ರೈತರ ಸಾಲ, ಬಡ್ಡಿ ಮನ್ನಾ ಹಾಗೂ ಕೃಷಿಗೆ ಸಂಬಂಧಿಸಿದಂತೆ ಸರಕಾರಗಳು ನೆರವಿಗೆ ಬರುತ್ತಿವೆ. ಬೆಳೆ ವಿಮೆ, ಸಬ್ಸಿಡಿ ಸೇರಿ ಇತರ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಮುಂದೆ ಬರಲು ಪ್ರಯತ್ನಿಸಬೇಕು'' ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಅಮರೇಶ್ವರದ ಅಭಿನವ ಗಜದಂಡ ಶ್ರೀಗಳು, ಮುಖಂಡರಾದ ಶಿವಣ್ಣ ನಾಯಕ, ಅಮರೇಗೌಡ ಪಾಟೀಲ್‌, ಶಂಕ್ರಪ್ಪ, ರಂಗಪ್ಪ ನಾಯಕ ಸೇರಿ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ