ಆ್ಯಪ್ನಗರ

ಕನ್ನಾಳ ಪಂಚಾಯಿತಿಗೆ ಭೇಟಿ: ಪರಿಶೀಲನೆ

ಪಟ್ಟಣ ಸಮೀಪದ ಕನ್ನಾಳ ಗ್ರಾಪಂಗೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಹ್ಮದ್‌ ಯೂಸುಫ್‌ ಸಾಬ್‌ ಶುಕ್ರವಾರ ಭೇಟಿ ನೀಡಿ ವೈಯಕ್ತಿಕ ಶೌಚಾಲಯ ಕಾಮಗಾರಿಗಳನ್ನು ಪರಿಶೀಲಿಸಿದರು.

Vijaya Karnataka 14 Jul 2018, 5:00 am
ಮುದಗಲ್‌ : ಪಟ್ಟಣ ಸಮೀಪದ ಕನ್ನಾಳ ಗ್ರಾಪಂಗೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಹ್ಮದ್‌ ಯೂಸುಫ್‌ ಸಾಬ್‌ ಶುಕ್ರವಾರ ಭೇಟಿ ನೀಡಿ ವೈಯಕ್ತಿಕ ಶೌಚಾಲಯ ಕಾಮಗಾರಿಗಳನ್ನು ಪರಿಶೀಲಿಸಿದರು.
Vijaya Karnataka Web visit to kannala panchayat verification
ಕನ್ನಾಳ ಪಂಚಾಯಿತಿಗೆ ಭೇಟಿ: ಪರಿಶೀಲನೆ


ನಂತರ ಮಾತನಾಡಿ, ಲಿಂಗಸುಗೂರು ತಾಲೂಕು ಸ್ವಚ್ಛಭಾರತ್‌ ಮಿಷನ್‌ ಯೋಜನೆ ಅನುಷ್ಠಾನಗೊಳಿಸುವಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಮಾವಿನಭಾವಿ, ಕನ್ನಾಳ , ಹಲ್ಕಾವಟಗಿ ಹಾಗೂ ಮಾರಲದಿನ್ನಿ ಗ್ರಾಪಂಗಳಿಗೆ ಭೇಟಿ ನೀಡಿ ಶೌಚಾಲಯ ನಿರ್ಮಾಣದ ಪ್ರಗತಿ ಪರಿಶೀಲಿಸಲಾಗುತ್ತಿದೆ ಎಂದರು. ಜನಪ್ರತಿನಿಧಿಗಳು ಸ್ವಚ್ಛಭಾರತ್‌ ಮಿಷನ್‌ ಅನುಷ್ಠಾನಕ್ಕೆ ಸಹಕಾರ ನೀಡಬೇಕು, ಶೌಚಾಲಯ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ತಕ್ಷ ಣವೇ ಸರಕಾರದ ಸಹಾಯಧನ ಒದಗಿಸುವ ಕಾರ್ಯ ಇಲಾಖೆಯಿಂದ ನಡೆಯುತ್ತಿದೆ ಎಂದರು. ಶೌಚಾಲಯ ನಿರ್ಮಿಸಿಕೊಂಡರೂ ಕಾಮಗಾರಿ ಆದೇಶ ಬರುತ್ತಿಲ್ಲ, ತಾಂತ್ರಿಕ ತೊಂದರೆ ಎಂದು ಹೇಳುತ್ತಿರುವುದಾಗಿ ಕೆಲವು ಫಲಾನುಭವಿಗಳು ಅಧಿಕಾರಿ ಮುಂದೆ ಅಳಲು ತೋಡಿಕೊಂಡರು. ಆಹಾರ ಪಡಿತರ ಚೀಟಿ ಸಂಖ್ಯೆ ಈಗಾಗಲೆ ಬಳಕೆಯಾಗಿದ್ದರಿಂದ ಈ ಸಮಸ್ಯೆ ಎದುರಾಗಿದ್ದು, ಸಮಸ್ಯೆಬಗೆಹರಿಸುವದಾಗಿ ಹೇಳಿದರು. ಎಲ್ಲ ಗ್ರಾಪಂಗಳು ಆಗಸ್ಟ್‌ 15ರೊಳಗಾಗಿ ಶೌಚಾಲಯ ಗುರಿಮುಟ್ಟಬೇಕಿದೆ ಎಂದರು.

ತಾಪಂ ನರೇಗಾ ಸಹಾಯಕ ನಿರ್ದೇಶಕ ಅಮರೇಶ ಯಾದವ್‌, ಕನ್ನಾಳ ಗ್ರಾಪಂ ಅಧ್ಯಕ್ಷ ತಿಪ್ಪಣ್ಣ ರಾಠೋಡ, ಪಿಡಿಒ ಮಂಜುನಾಥ ಜಾವೂರ, ಗ್ರಾಪಂ ಸದಸ್ಯರು, ಗ್ರಾಮದ ಮುಖಂಡರು ಪಂಚಾಯಿತಿ ಸಿಬ್ಬಂದಿ ವರ್ಗ ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ