ಆ್ಯಪ್ನಗರ

ಶಾಸಕರೆದುರೇ ಅಧಿಕಾರಿಗೆ ತರಾಟೆ

ಪಟ್ಟಣ ಸಮೀಪದ ಉಳಿಮೇಶ್ವರ ಕೆರೆಗೆ ಭಾನುವಾರ ಭೇಟಿ ನೀಡಿದ್ದ ಶಾಸಕ ಡಿ.ಎಸ್‌.ಹೂಲಗೇರಿಯವರ ಎದುರೇ ಗ್ರಾಮಸ್ಥರು ಸಣ್ಣ ನೀರಾವರಿ ಇಲಾಖೆಯ ಎಇಇ ಶ್ಯಾಮಣ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.

Vijaya Karnataka 27 May 2019, 5:00 am
ಮುದಗಲ್‌ : ಪಟ್ಟಣ ಸಮೀಪದ ಉಳಿಮೇಶ್ವರ ಕೆರೆಗೆ ಭಾನುವಾರ ಭೇಟಿ ನೀಡಿದ್ದ ಶಾಸಕ ಡಿ.ಎಸ್‌.ಹೂಲಗೇರಿಯವರ ಎದುರೇ ಗ್ರಾಮಸ್ಥರು ಸಣ್ಣ ನೀರಾವರಿ ಇಲಾಖೆಯ ಎಇಇ ಶ್ಯಾಮಣ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.
Vijaya Karnataka Web visit to lake
ಶಾಸಕರೆದುರೇ ಅಧಿಕಾರಿಗೆ ತರಾಟೆ


ಉಳಿಮೇಶ್ವರ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಶಾಸಕರಿಗೆ ಗ್ರಾಮಸ್ಥರು ಕೆರೆ ಅಭಿವೃದ್ಧಿ ವಿಚಾರದಲ್ಲಿ ಸಣ್ಣ ನೀರಾವರಿ ಇಲಾಖೆಯವರು ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆ ವಿವರಿಸಿದರು. ಎಇಇ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಹಲವಾರು ಬಾರಿ ಕೆರೆ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಮನವಿ ಸಲ್ಲಿಸಿ, ಕೆರೆಗೆ ಭೇಟಿ ನೀಡುವಂತೆ ಒತ್ತಾಯ ಮಾಡಿದರೂ, ಬಾರದೇ ರೈತರನ್ನು ಕಡೆಗಣಿಸಿದ್ದೀರೆಂದು ಆಕ್ರೋಶ ವ್ಯಕ್ತಪಡಿಸಿದರು. ಕೆರೆಯ ವಾಲ್ವ್‌ ದುರಸ್ತಿಗೆ ಬಂದಿದ್ದು ಮಳೆಗಾಲ ಸನ್ನಿಹಿತವಾಗುತ್ತಿರುವ ಬೆನ್ನಲ್ಲೇ ಕೆರೆಯ ದುರಸ್ತಿ ಕಾರ್ಯಕ್ಕೆ ಮುಂದಾಗುವಂತೆ ಮನವಿ ಮಾಡಿದರೂ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದು ರೈತರ ಮಾತಿಗೆ ಕಿಮ್ಮತ್ತಿಲ್ಲದಂತಾಗಿದೆ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ ಶಾಸಕರು ಮಧ್ಯೆ ಪ್ರವೇಶಿಸಿ ರೈತರು ಹಾಗೂ ಅಧಿಕಾರಿಗೆ ಸಮಜಾಯಿಷಿ ನೀಡಿದರು. ರೈತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಅಧಿಕಾರಿಗೆ ತಾಕೀತು ಮಾಡಿದರು. ಕೆರೆಯ ಅವ್ಯವಸ್ಥೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಸುರೇಂದ್ರಗೌಡ ಆದಾಪೂರ, ಮಹಾಂತೇಶ ಪಾಟೀಲ್‌, ಸುರೇಶ ಸೇಠ, ತಮ್ಮಣ್ಣ ಗುತ್ತೇದಾರ, ಡಾ.ಅಯ್ಯಪ್ಪ ಬನ್ನಿಗೋಳ, ಸತೀಶ ಭೋವಿ, ಬಸವರಾಜ ಜೆಲ್ಲಿ , ವೆಂಕಟೇಶ ಉಪ್ಪಾರ ನಂದಿಹಾಳ, ಗ್ಯಾನನಗೌಡ ನಾಗಲಾಪೂರ ಸೇರಿ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ