ಆ್ಯಪ್ನಗರ

ವಿವೇಕಾನಂದರ ಆದರ್ಶಗಳು ಸ್ಫೂರ್ತಿ

ಚಿಕಾಗೋದಲ್ಲಿ ಐದು ನಿಮಿಷದ ಭಾಷಣದಿಂದ ವಿಶ್ವವಿಖ್ಯಾತಿಗಳಿಸಿದ ಸ್ವಾಮಿ ವಿವೇಕಾನಂದರ ಆದರ್ಶಗಳು ಯುವ ಜನಾಂಗಕ್ಕೆ ಸ್ಫೂರ್ತಿಯಾಗಿವೆ ಎಂದು ವಿವೇಕ ಶಿಕ್ಷ ಣ ವಾಹಿನಿ ಸಂಸ್ಥಾಪಕ ನಿತ್ಯಾನಂದ ವಿವೇಕವಂಶಿ ಹೇಳಿದರು.

Vijaya Karnataka 12 Oct 2018, 5:00 am
ಸಿಂಧನೂರು : ಚಿಕಾಗೋದಲ್ಲಿ ಐದು ನಿಮಿಷದ ಭಾಷಣದಿಂದ ವಿಶ್ವವಿಖ್ಯಾತಿಗಳಿಸಿದ ಸ್ವಾಮಿ ವಿವೇಕಾನಂದರ ಆದರ್ಶಗಳು ಯುವ ಜನಾಂಗಕ್ಕೆ ಸ್ಫೂರ್ತಿಯಾಗಿವೆ ಎಂದು ವಿವೇಕ ಶಿಕ್ಷ ಣ ವಾಹಿನಿ ಸಂಸ್ಥಾಪಕ ನಿತ್ಯಾನಂದ ವಿವೇಕವಂಶಿ ಹೇಳಿದರು.
Vijaya Karnataka Web RAC-RCH11SND2


ನಗರದ ಸತ್ಯಾಗಾರ್ಡನ್‌ನಲ್ಲಿ ಗುರುವಾರ ಯುವ ಬ್ರಿಗೇಡ್‌ ಸಿಂಧನೂರು, ಸೋದರಿ ನಿವೇದಿತಾ ಪ್ರತಿಷ್ಠಾನದಿಂದ ನಡೆದ 'ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ' ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತ ದೇಶದ ಜನತೆ ಬಗ್ಗೆ ಕೀಳು ಮನೋಭಾವ ಹೊಂದಿದ್ದ ಕಾಲದಲ್ಲಿ ವಿವೇಕಾನಂದರ ಭಾಷಣ ಬದಲಾವಣೆಗೆ ಪೂರಕವಾಯಿತು. ಯುವ ಜನಾಂಗವು ಸಹ ಪದವಿಗಳಿಕೆಗಷ್ಟೇ ಒಳಗಾಗದೆ, ದೇಶಕ್ಕಾಗಿ ಕೊಡುಗೆ ನೀಡಬೇಕು ಎಂದರು.

ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ನಗರಕ್ಕೆ ಆಗಮಿಸಿದ ದಿಗ್ವಿಜಯ ರಥಯಾತ್ರೆಗೆ ಯುವ ಬ್ರಿಗೇಡ್‌ ನೇತೃತ್ವದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಎಪಿಎಂಸಿ ಗಣೇಶ ದೇವಸ್ಥಾನ ಸತ್ಯಾಗಾರ್ಡನ್‌ವರೆಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ತಹಸೀಲ್ದಾರ್‌ ಸಂತೋಷ ಕಾಮಗೌಡ ಮೆರವಣಿಗೆಗೆ ಚಾಲನೆ ನೀಡಿದರು. ಸಚಿವ ವೆಂಕಟರಾವ್‌ ನಾಡಗೌಡ, ಸಂಸದ ಕರಡಿ ಸಂಗಣ್ಣ, ಪ್ರಮುಖರಾದ ಆರ್‌.ಬಸನಗೌಡ ತುರುವಿಹಾಳ, ಡಾ.ಚನ್ನನಗೌಡ ಪಾಟೀಲ್‌, ಆರ್‌.ಸಿ.ಪಾಟೀಲ್‌. ಸತ್ಯನಾರಾಯಣಶ್ರೇಷ್ಠಿ, ಅನಿಲ್‌ರಾಜ್‌, ನಗರಸಭೆ ಸದಸ್ಯರಾದ ಹನುಮೇಶ ಉಪ್ಪಾರ, ಚಂದ್ರು ಮೈಲಾರ ಸೇರಿದಂತೆ ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯರು, ಯದ್ದಲದೊಡ್ಡಿಯ ಮಹಾಲಿಂಗ ಸ್ವಾಮೀಜಿ, ಡಾ.ಚನ್ನನಗೌಡ ಪಾಟೀಲ್‌ ಇದ್ದರು. ಕಳಕಪ್ಪ ಗಡದ ಪ್ರಾಸ್ತಾವಿಕ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ