ಆ್ಯಪ್ನಗರ

ನಿರುಪಯುಕ್ತವಾದ ಕಸಗೂಡಿಸುವ ಯಂತ್ರ

ಸ್ಥಳೀಯ ನಗರಸಭೆ ಕಚೇರಿಯ ಮೈದಾನದಲ್ಲಿಟ್ಟಿರುವ ಕಸಗೂಡಿಸುವ ಯಂತ್ರ ತಿಂಗಳುಗಳಿಂದ ನಿರುಪಯುಕ್ತವಾಗಿ ತುಕ್ಕು ಹಿಡಿದಿದೆ.

Vijaya Karnataka 4 Jul 2018, 5:00 am
ಸಿಂಧನೂರು : ಸ್ಥಳೀಯ ನಗರಸಭೆ ಕಚೇರಿಯ ಮೈದಾನದಲ್ಲಿಟ್ಟಿರುವ ಕಸಗೂಡಿಸುವ ಯಂತ್ರ ತಿಂಗಳುಗಳಿಂದ ನಿರುಪಯುಕ್ತವಾಗಿ ತುಕ್ಕು ಹಿಡಿದಿದೆ.
Vijaya Karnataka Web RAC-RCH03SND2


ನಗರದ ಹೆದ್ದಾರಿ ರಸ್ತೆಗಳಲ್ಲಿ ಧೂಳಿನ ಪ್ರಮಾಣ ಹೆಚ್ಚುತ್ತಿರುವ ನಡುವೆಯೇ ಯಂತ್ರದ ಬಳಕೆ ಸಾಧ್ಯವಾಗಿಲ್ಲ. ದುರಸ್ತಿ ಕಾರಣಕ್ಕೆ ಹಾಗೆಯೇ ಬಿಡಲಾಗಿದೆಯೋ? ಅಥವಾ ಟ್ರ್ಯಾಕ್ಟರ್‌ ಇಲ್ಲ ಎನ್ನುವುದಕ್ಕೆ ನಿರ್ಲಕ್ಷಿಸಲಾಗಿದೆಯೋ ಎಂಬುದು ಸಿಬ್ಬಂದಿಗೂ ತಿಳಿದಿಲ್ಲ.

ದಿನ ಬೆಳಗಾದರೆ ಪೌರ ಕಾರ್ಮಿಕ ಮಹಿಳೆಯರು ರಸ್ತೆಗಿಳಿದು ಕಸ ಹೊಡೆಯುತ್ತಿದ್ದಾರೆ. ಮಣ್ಣಿನ ಪ್ರಮಾಣ ಹೆಚ್ಚಿರುವುದರಿಂದ ಕಸವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಸಚಿವರು, ಪ್ರಮುಖ ಕಾರ್ಯಕ್ರಮಗಳ ಸಂದರ್ಭದಲ್ಲಷ್ಟೇ ಹೆದ್ದಾರಿ ರಸ್ತೆಗಳಲ್ಲಿ ದಿಢೀರ್‌ ಸ್ವಚ್ಚತಾ ಕಾರ್ಯ ನಡೆಯುತ್ತಿದೆ. ಉಳಿದ ದಿನಗಳಲ್ಲಿ ಈ ಬಗ್ಗೆ ಗಮನಹರಿಸುವುದು ಕಡಿಮೆ. ಹೀಗಾಗಿ ಧೂಳು ನಿವಾರಣಾ ಯಂತ್ರ ಬಳಕೆಗೆ ನಗರಸಭೆಯವರು ಮುಂದಾಗಬೇಕು ಎಂಬುದು ಜನರ ಮನವಿಯಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ