ಆ್ಯಪ್ನಗರ

ಜಲಾಶಯದಿಂದ ನೀರು: ಸೇತುವೆ ಮುಳುಗುವ ಭೀತಿ

ಬಸವಸಾಗರ ಜಲಾಶಯದಿಂದ 1 ಲಕ್ಷ 50 ಕ್ಯೂಸೆಕ್‌ ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಹರಿಸಲಾಗಿದ್ದು, ದೇವದುರ್ಗ ತಾಲೂಕಿನ ಹೂವಿನಹೆಡಗಿ ಗ್ರಾಮದ ಹೊರವಲಯದ ಕೃಷ್ಣಾ ನದಿ ಸೇತುವೆ ಮುಳುಗಲು ಎರಡು ಅಡಿ ಬಾಕಿಯಿದೆ. ಸೇತುವೆ ಮುಳುಗಿದರೆ ರಾಯಚೂರು- ಕಲಬುರಗಿ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತವಾಗಲಿದೆ.

Vijaya Karnataka 19 Jul 2018, 5:00 am
ದೇವದುರ್ಗ : ಬಸವಸಾಗರ ಜಲಾಶಯದಿಂದ 1 ಲಕ್ಷ 50 ಕ್ಯೂಸೆಕ್‌ ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಹರಿಸಲಾಗಿದ್ದು, ದೇವದುರ್ಗ ತಾಲೂಕಿನ ಹೂವಿನಹೆಡಗಿ ಗ್ರಾಮದ ಹೊರವಲಯದ ಕೃಷ್ಣಾ ನದಿ ಸೇತುವೆ ಮುಳುಗಲು ಎರಡು ಅಡಿ ಬಾಕಿಯಿದೆ. ಸೇತುವೆ ಮುಳುಗಿದರೆ ರಾಯಚೂರು- ಕಲಬುರಗಿ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತವಾಗಲಿದೆ.
Vijaya Karnataka Web RAC-RCH18DEO04


ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಹರಿಬಿಟ್ಟಿದರಿಂದ ನದಿ ತೀರದ ಗ್ರಾಮಸ್ಥರಿಗೆ ತಾಲೂಕು ಆಡಳಿತ ಎಚ್ಚರಿಕೆ ಸಂದೇಶ ರವಾನಿಸಿದೆ. ಮುಂಜಾಗ್ರತೆ ಕ್ರಮವಾಗಿ ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮಗಳಲ್ಲಿ ನೆಲೆಸಬೇಕು. ಗ್ರಾಮಸ್ಥರು ಬಟ್ಟೆ ತೊಳೆಲು ನದಿದಡಕ್ಕೆ ತೆರಳದಂತೆ ಸೂಚಿಸುತ್ತಿದ್ದಾರೆ. ಗೂಗಲ್‌ ಕಂ ಬ್ಯಾರೇಜ್‌ನಲ್ಲಿ ತಂಗಿರುವ ಮೀನುಗಾರರಿಗೂ ನದಿ ಪ್ರವೇಶದಂತೆ ಎಚ್ಚರಿಕೆನೀಡಲಾಗಿದೆ.

''ಬಸವ ಸಾಗರ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗಿದ್ದು, ನದಿ ಪ್ರವೇಶ ನಿಷೇಧಿಸಲಾಗಿದೆ. ಪ್ರವಾಹ ಭೀತಿ ಎದುರಿಸುವ ಪ್ರದೇಶದಲ್ಲಿ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ'' ಎಂದು ತಹಸೀಲ್ದಾರ್‌ ಶಿವಶರಣಪ್ಪ ಕಟ್ಟೊಳ್ಳಿ ತಿಳಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ