ಆ್ಯಪ್ನಗರ

ವಾರದಿಂದ ನೀರು ಪೂರೈಕೆ ಸ್ಥಗಿತ

ಕೃಷ್ಣಾ ನದಿಯ ಭೀಕರ ಪ್ರವಾಹ, ಪಟ್ಟಣದ ನೀರು ಪೂರೈಕೆ ಮೇಲೂ ಪರಿಣಾಮ ಬೀರಿದೆ. ನದಿ ದಡದಲ್ಲಿರುವ ಜಾಕ್ವೆಲ್‌ ನೀರಿನಲ್ಲಿ ಮುಳುಗಿದ್ದರೆ, ಪೈಪ್‌ಗಳು ಜಖಂಗೊಂಡಿವೆ. ಕಳೆದ ಒಂದು ವಾರದಿಂದ ಪಟ್ಟಣಕ್ಕೆ ನೀರು ಪೂರೈಕೆ ಸ್ಥಗಿತವಾಗಿದೆ.

Vijaya Karnataka 15 Aug 2019, 5:00 am
ಹಟ್ಟಿಚಿನ್ನದಗಣಿ : ಕೃಷ್ಣಾ ನದಿಯ ಭೀಕರ ಪ್ರವಾಹ, ಪಟ್ಟಣದ ನೀರು ಪೂರೈಕೆ ಮೇಲೂ ಪರಿಣಾಮ ಬೀರಿದೆ. ನದಿ ದಡದಲ್ಲಿರುವ ಜಾಕ್ವೆಲ್‌ ನೀರಿನಲ್ಲಿ ಮುಳುಗಿದ್ದರೆ, ಪೈಪ್‌ಗಳು ಜಖಂಗೊಂಡಿವೆ. ಕಳೆದ ಒಂದು ವಾರದಿಂದ ಪಟ್ಟಣಕ್ಕೆ ನೀರು ಪೂರೈಕೆ ಸ್ಥಗಿತವಾಗಿದೆ.
Vijaya Karnataka Web RAC-RCH14HGM P2


ನೀರಿನ ರಭಸಕ್ಕೆ ಪೈಪ್‌ಲೈನ್‌, ನೀರೆತ್ತುವ ಮೋಟಾರ್‌ಗಳು ಹಾಳಾಗಿ ನೀರು ಪೂರೈಕೆ ನಿಂತು ಹೋಗಿದೆ. ನದಿಯಲ್ಲಿ ಸದ್ಯ 5ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿಯುತ್ತಿದೆ. ಈ ಪ್ರಮಾಣ 1ಲಕ್ಷ ಕ್ಯೂಸೆಕ್‌ ಒಳಗೆ ಬಂದಾಗ ಮಾತ್ರ ಜಾಕ್ವೆಲ್‌ ಬಯಲಿಗೆ ಬಂದು ದುರಸ್ತಿ ಕೈಗೊಳ್ಳಲು ಸಾಧ್ಯವೆಂಬುದು ಪಟ್ಟಣ ಪಂಚಾಯಿತಿ ಸಿಬ್ಬಂದಿಯ ಹೇಳಿಕೆಯಾಗಿದೆ.

ಪಟ್ಟಣಕ್ಕೆ ನೀರು ಪೂರೈಕೆ ಸಂಪೂರ್ಣ ಸ್ಥಗಿತವಾಗಿದ್ದರಿಂದ ಜನತೆ ಕುಡಿವ ನೀರಿಗಾಗಿ ಖಾಸಗಿ ಶುದ್ಧ ನೀರಿನ ಘಟಕಗಳನ್ನು ಆಶ್ರಯಿಸುವಂತಾಗಿದೆ. ದುಬಾರಿ ಬೆಲೆ ತೆತ್ತು ನೀರು ಖರೀದಿಸುವಂತಾಗಿದೆ. ದಿನಬಳಕೆಗಾಗಿ ಪಟ್ಟಣ ಪಂಚಾಯಿತಿ, ಸ್ಥಳೀಯವಾಗಿ ದೊರಕುವ ಬೋರ್‌ವೆಲ್‌ಗಳ ನೀರಿನ ಪೂರೈಕೆ ಆರಂಭಿಸಿದೆ. ಗಣಿ ಕಂಪನಿಯ ಜಾಕ್ವೆಲ್‌ ಸಹ ಸ್ಥಗಿತವಾಗಿದ್ದರಿಂದ ಕ್ಯಾಂಪ್‌ ಪ್ರದೇಶದಲ್ಲೂ ನೀರು ಸಿಗದಂತಾಗಿದೆ.

............

ಕೃಷ್ಣಾ ನದಿಯಲ್ಲಿ ಪ್ರವಾಹ ಬಂದಿದ್ದರಿಂದ ಜಾಕ್ವೆಲ್‌ ಹಾಳಾಗಿ ನೀರು ಪೂರೈಕೆ ನಿಂತಿದೆ. ಪರ್ಯಾಯ ನೀರು ಪೂರೈಕೆ ಉದ್ದೇಶದೊಂದಿಗೆ ಕೋಠಾ ಗ್ರಾಮದ ಮುಂದೆ ಹಾದು ಹೋಗಿರುವ ಎನ್‌ಆರ್‌ಬಿಸಿ ಮುಖ್ಯನಾಲೆಯಿಂದ ನೀರು ಹರಿಸಿಕೊಳ್ಳಲು ಅನುಮತಿ ಕೋರಿ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅನುಮತಿ ಸಿಕ್ಕ ನಂತರ ಕಾಮಗಾರಿ ಕೈಗೊಳ್ಳುವಂತೆ ಕರ್ನಾಟಕ ನಗರ ನೀರು ಸರಬರಾಜು ಇಲಾಖೆಗೂ ಪತ್ರ ಬರೆಯಲಾಗಿದೆ.

-ದುರುಗಪ್ಪ ಹಗೇದಾಳ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ, ಹಟ್ಟಿಚಿನ್ನದಗಣಿ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ