ಆ್ಯಪ್ನಗರ

ನಾಲೆ ವೀಕ್ಷ ಣೆ-ಕೆರೆಗೆ ನೀರು

ಪಟ್ಟಣ ಸಮೀಪದ ಗಂಗಾನಗರ ಕ್ಯಾಂಪ್‌ (15ನೇ ವಾರ್ಡ್‌) ಹತ್ತಿರ ಹಾದು ಹೋಗಿರುವ ತುಂಗಭದ್ರಾ ನಾಲೆಗೆ ಪ.ಪಂ.ಅಧಿಕಾರಿಗಳು ಹಾಗೂ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿದರು. ಇದೇ ವೇಳೆ ಕುಡಿವ ನೀರಿನ ಕೆರೆ ವೀಕ್ಷಿಸಿದರು.

Vijaya Karnataka 30 Jul 2019, 3:29 pm
ಕವಿತಾಳ : ಪಟ್ಟಣ ಸಮೀಪದ ಗಂಗಾನಗರ ಕ್ಯಾಂಪ್‌ (15ನೇ ವಾರ್ಡ್‌) ಹತ್ತಿರ ಹಾದು ಹೋಗಿರುವ ತುಂಗಭದ್ರಾ ನಾಲೆಗೆ ಪ.ಪಂ.ಅಧಿಕಾರಿಗಳು ಹಾಗೂ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿದರು. ಇದೇ ವೇಳೆ ಕುಡಿವ ನೀರಿನ ಕೆರೆ ವೀಕ್ಷಿಸಿದರು.
Vijaya Karnataka Web water to the lake
ನಾಲೆ ವೀಕ್ಷ ಣೆ-ಕೆರೆಗೆ ನೀರು


ಕಳೆದ ಮೂರ್ನಾಲ್ಕು ತಿಂಗಳಿಂದ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ದಿನ ಬಿಟ್ಟು ದಿನ ನೀರು ಬಿಡುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಪುನಃ ನಾಲೆಗೆ ನೀರು ಬಂದ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಕುಡಿವ ನೀರಿಗೆ ತೊಂದರೆಯಾಗಬಾರದೆಂದು ಎಚ್ಚರ ವಹಿಸಿ, ಪ.ಪಂ.ಆಡಳಿತ ಕೆರೆಯನ್ನು ಸಂಪೂರ್ಣ ಭರ್ತಿ ಮಾಡಿ, ನೀರು ಕೊಡುವ ವ್ಯವಸ್ಥೆಗೆ ಮುಂದಾಗಿದೆ. ಬಳಿಕ ಕೆರೆನೀರು ಶುದ್ದೀಕರಣ ಘಟಕವು ಸರಿಯಾಗಿ ಕಾರ್ಯ ನಿರ್ವಹಿಸುತ್ತದೊ ಇಲ್ಲವೊ ಎಂಬುದನ್ನು ಪರೀಕ್ಷಿಸಲಾಯಿತು.

ಪ.ಪಂ.ಮುಖ್ಯಾಧಿಕಾರಿ ಈರಣ್ಣ ಜಗ್ಲಿ, ಜೆಇ ಮಲ್ಲಣ್ಣ, ಕವಿತಾಳ ಠಾಣೆಯ ಪಿಎಸ್‌ಐ ಅಮರೇಶ ಜಿ.ಕೆ, ಪ.ಪಂ.ಸಿಬ್ಬಂದಿ ಮಾರ್ಕ್‌, ರಮೇಶ, ಪೊಲೀಸ್‌ ಸಿಬ್ಬಂದಿ ಯಂಕನಗೌಡ, ಅಶೋಕ ಸೇರಿ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ