ಆ್ಯಪ್ನಗರ

ಸಚಿವ ನಾಡಗೌಡರಿಗೆ ಅದ್ದೂರಿ ಸ್ವಾಗತ

ಕ್ಷೇತ್ರದಿಂದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಚಿವರಾಗಿರುವ ವೆಂಕಟರಾವ್‌ ನಾಡಗೌಡರಿಗೆ ತಾಲೂಕಿನ ಧಡೇಸೂಗೂರು ಗ್ರಾಮದಲ್ಲಿ ಜೆಡಿಎಸ್‌ ಪಕ್ಷ ದ ಕಾರ್ಯಕರ್ತರು ಮಂಗಳವಾರ ಅದ್ದೂರಿ ಸ್ವಾಗತ ಕೋರಿದರು.

Vijaya Karnataka 13 Jun 2018, 5:00 am
ಸಿಂಧನೂರು : ಕ್ಷೇತ್ರದಿಂದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಚಿವರಾಗಿರುವ ವೆಂಕಟರಾವ್‌ ನಾಡಗೌಡರಿಗೆ ತಾಲೂಕಿನ ಧಡೇಸೂಗೂರು ಗ್ರಾಮದಲ್ಲಿ ಜೆಡಿಎಸ್‌ ಪಕ್ಷ ದ ಕಾರ್ಯಕರ್ತರು ಮಂಗಳವಾರ ಅದ್ದೂರಿ ಸ್ವಾಗತ ಕೋರಿದರು.
Vijaya Karnataka Web RAC-RCH12SND1


ಸಚಿವರು ಗ್ರಾಮ ಪ್ರವೇಶಿಸುತ್ತಿದ್ದಂತೆ ಮಹಿಳೆಯರು ಆರತಿ ಬೆಳಗಿ, ಕುಂಕುಮ ಹಚ್ಚಿದರು. ನಂತರ ಆಲಂಬಾಷಾ ದರ್ಗಾಕ್ಕೆ ಭೇಟಿ ನೀಡಿ ನಾಡಗೌಡರು ಪೂಜೆ ಸಲ್ಲಿಸಿದರು. ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರು ಜಯಘೋಷ ಮೊಳಗಿಸಿದರು. ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆತಿರುವುದರಿಂದ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಬೆಳಗ್ಗೆಯಿಂದಲೇ ಕಾಯ್ದು ಕುಳಿತಿದ್ದರು. ನಿಗಧಿತ ಕಾರ್ಯಕ್ರಮ 10.30ಕ್ಕೆ ಇದ್ದರೂ ಮಧ್ಯಾಹ್ನ 2.30ಕ್ಕೆ ನಾಡಗೌಡರು ಆಗಮಿಸಿದರು. ಮಾರ್ಗ ಮದ್ಯದಲ್ಲಿ ಎಲ್ಲ ಕಡೆಗಳಲ್ಲೂ ಸನ್ಮಾನ ಹಾಗೂ ದೇವಸ್ಥಾನ ಭೇಟಿ ಮಾಡಿದ್ದರಿಂದ ತಡವಾಯಿತು. ಸಾಗರದ ಮಹಿಳಾ ಡೊಳ್ಳಿನ ಕುಣಿತ ಗಮನಸೆಳೆಯಿತು.

ಸನ್ಮಾನ: ಮಾರ್ಗ ಮಧ್ಯದಲ್ಲಿ ಕನ್ನಾರಿಕ್ರಾಸ್‌, ಸಾಸಲಮರಿಕ್ಯಾಂಪ್‌, ಬೂದಿವಾಳಕ್ಯಾಂಪ್‌, ಶ್ರೀಪುರಂಜಂಕ್ಷ ನ್‌ ಸೇರಿದಂತೆ ಸಿಂಧನೂರು ನಗರಕ್ಕೆ ಆಗಮಿಸುವವರೆಗೂ ಸಚಿವರಿಗೆ ಕಾರ್ಯಕರ್ತರು ಅಭಿನಂದಿಸಿದರು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬೈಕ್‌ಗಳನ್ನು ತಂದು, ಜೆಡಿಎಸ್‌ ಧ್ವಜವನ್ನು ಪ್ರದರ್ಶಿಸಿದರು. ಹೆದ್ದಾರಿ ರಸ್ತೆಯಲ್ಲಿಯೇ ಕಾರ್ಯಕರ್ತರ ಸಂಭ್ರಮ ಹಾಗೂ ಮೆರವಣಿಗೆ ನಡೆಸಿದ್ದರಿಂದ ಟ್ರಾಫಿಕ್‌ ಸಮಸ್ಯೆ ಉಂಟಾಯಿತು. ಆಂಬ್ಯುಲೆನ್ಸ್‌ ಒಂದು ಟ್ರಾಫಿಕ್‌ನಲ್ಲಿ ಸಿಕ್ಕಿಬಿದ್ದಾಗ ಕಾರ್ಯಕರ್ತರು ಟ್ರಾಫಿಕ್‌ ಸಮಸ್ಯೆ ಸರಿಪಡಿಸಿದರು. ತೆರೆದ ವಾಹನದಲ್ಲಿ ಮೆರವಣಿಗೆ ನಡೆದಿದ್ದರಿಂದ, ಕಾರ್ಯಕರ್ತರನ್ನು ನಿಯಂತ್ರಿಸುವಷ್ಟರಲ್ಲಿ ಪೊಲೀಸರು ಹೈರಾಣಾದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ