ಆ್ಯಪ್ನಗರ

ಪೊಲೀಸ್‌ ದಾಳಿ: ಮಹಿಳೆಯ ಸಾವು

ಅಕ್ರಮವಾಗಿ ಸಿಎಚ್ ಪೌಡರ್ ಸಾಗಣೆ ಮಾಡುತ್ತಿದ್ದ ವೇಳೆ ಅಬಕಾರಿ ಪೊಲೀಸರು ದಾಳಿ ನಡೆಸುವಾಗ ಮಹಿಳೆ ಕುಸಿದುಬಿದ್ದು ಮೃತಪಟ್ಟಿದ್ದಾರೆ.

Vijaya Karnataka Web 17 Jan 2018, 11:54 am
ರಾಯಚೂರು: ಅಕ್ರಮವಾಗಿ ಸಿಎಚ್ ಪೌಡರ್ ಸಾಗಣೆ ಮಾಡುತ್ತಿದ್ದ ವೇಳೆ ಅಬಕಾರಿ ಪೊಲೀಸರು ದಾಳಿ ನಡೆಸುವಾಗ ಮಹಿಳೆ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಪಾರ್ವತಮ್ಮ(45) ಮೃತಪಟ್ಟ ಮಹಿಳೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅಬಕಾರಿ ಇಲಾಖೆಯ ಪೇದೆಗಳನ್ನು ಬಂಧಿಸಲಾಗಿದೆ.
Vijaya Karnataka Web woman died during police raid
ಪೊಲೀಸ್‌ ದಾಳಿ: ಮಹಿಳೆಯ ಸಾವು


ರಾಯಚೂರು ರೈಲು ನಿಲ್ದಾಣದ ಬಳಿ ಘಟನೆ ನಡೆದಿದೆ. ಪಾರ್ವತಮ್ಮ ಹಾಗೂ ಆಕೆಯ ಪುತ್ರ ಮಲ್ಲಪ್ಪ ಕಲಬೆರಕೆ ಹೆಂಡ ತಯಾರಿಸಲು ಅಕ್ರಮವಾಗಿ ಸಿಎಚ್ ಪೌಡರ್ ಸಾಗಣೆ ಮಾಡುತ್ತಿದ್ದರು.

ತೆಲಂಗಾಣದಿಂದ ತಂದಿದ್ದ ಅಕ್ರಮ ಸಿಎಚ್ ಪೌಡರ್ ವಶಪಡಿಸಲು ದಾಳಿ ನಡೆಸಿದ ವೇಳೆ ಪೊಲೀಸರು ಮಹಿಳೆಯನ್ನು ತಳ್ಳಿದ್ದರಿಂದ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಪೇದೆಗಳಾದ ಅಮರೇಶ್, ಚಂದ್ರಶೇಖರ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ