ಆ್ಯಪ್ನಗರ

ನೆರಳು ನೀಡುತ್ತಿದ್ದ ಮರಕ್ಕೆ ಕೊಡಲಿ: ವಿದ್ಯಾರ್ಥಿಗಳ ಆಕ್ರೋಶ

ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನೆರಳು ನೀಡುತ್ತಿದ್ದ ಸುಮಾರು 25 ವರ್ಷ ಹಳೆ ಮರವನ್ನು ಅನಾಮಧೇಯ ವ್ಯಕ್ತಿಗಳು ವಿನಾಕಾರಣ ಕಡಿದು ಹಾಕಿದ್ದು, ಈ ಬಗ್ಗೆ ಹಿರಿಯ ವಿದ್ಯಾರ್ಥಿಗಳು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

Vijaya Karnataka 5 May 2018, 4:28 pm
ಚನ್ನಪಟ್ಟಣ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನೆರಳು ನೀಡುತ್ತಿದ್ದ ಸುಮಾರು 25 ವರ್ಷ ಹಳೆ ಮರವನ್ನು ಅನಾಮಧೇಯ ವ್ಯಕ್ತಿಗಳು ವಿನಾಕಾರಣ ಕಡಿದು ಹಾಕಿದ್ದು, ಈ ಬಗ್ಗೆ ಹಿರಿಯ ವಿದ್ಯಾರ್ಥಿಗಳು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.
Vijaya Karnataka Web
ನೆರಳು ನೀಡುತ್ತಿದ್ದ ಮರಕ್ಕೆ ಕೊಡಲಿ: ವಿದ್ಯಾರ್ಥಿಗಳ ಆಕ್ರೋಶ


ಪಟ್ಟಣದ ಸಾರಿಗೆ ಬಸ್‌ ನಿಲ್ದಾಣದ ಬಳಿಯ ಹೃದಯ ಭಾಗದಲ್ಲಿರುವ ಕಾಲೇಜಿನ ಕಾಂಪೌಂಡ್‌ಗೆ ಹೊಂದಿಕೊಂಡಂತಿದ್ದ ಬೃಹತ್‌ ಕಾಡುಬಾಗೆ ಮರವನ್ನು ಕಡಿಯುತ್ತಿದ್ದ ವೇಳೆ ಅಲ್ಲಿಗಾಗಮಿಸಿದ ವಿದ್ಯಾರ್ಥಿಗಳು ಈ ಬಗ್ಗೆ ಪ್ರಶ್ನಿಸಿದಾಗ, ಪ್ರಿನ್ಸಿಪಾಲ್‌ ಮರ ಕಡಿಯಲು ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ವಿದ್ಯಾರ್ಥಿಗಳ ವಿರೋಧ ಹೆಚ್ಚಿದಾಗ ಮರ ಕಡಿಯುತ್ತಿದ್ದ ಐದಾರು ಮಂದಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆದರೆ ನಾನು ಮರ ಕಡಿಯಲು ಯಾರಿಗೂ ಹೇಳಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ನೂರಾರು ವಿದ್ಯಾರ್ಥಿಗಳಿಗೆ ನೆರಳು ನೀಡುತ್ತಿದ್ದ ಇಂಥ ಬೃಹತ್‌ ಮರ ಕಡಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು, ಮರಗಿಡ ನೆಟ್ಟು ಪರಿಸರ ರಕ್ಷ ಣೆ ಮಾಡಬೇಕಾದವರೆ ಮರ ಕಡಿದು ಹಾಕಲು ಮುಂದಾಗಿರುವುದು ದುರಂತದ ಸಂಗತಿ ಎಂದು ನೋವು ತೋಡಿಕೊಂಡಿದ್ದಾರೆ.

ಕಾಲೇಜು ಅವರಣದಲ್ಲಿ 1994- 95ನೇ ಸಾಲಿನಲ್ಲಿ ಎನ್ನೆಸ್ಸೆಸ್‌ ವಿದ್ಯಾರ್ಥಿಗಳಾದ ನಾವುಗಳು ಶ್ರಮದಾನದ ಮೂಲಕ ನೆಟ್ಟು ಪೋಷಿಸಿದ ಮರ ತುಂಡಾಗಿ ಬಿದ್ದಿರುವುದು ನೋವಿನ ಸಂಗತಿ. ಸರಕಾರದ್ದು ಒಂದೆಡೆ ಪರಿಸರ ಕಾಳಜಿ ಪ್ರದರ್ಶನವಾದರೆ, ಮತ್ತೊಂದೆಡೆ ಮರಗಳ ಹನನ ಕಾರ್ಯ ಎಗ್ಗಿಲ್ಲದೆ ಸಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಂಡು ತಪ್ಪಿತಸ್ಥರನ್ನು ಶಿಕ್ಷಿಸಲಿ. ಮಿಕ್ಕುಳಿದ ಮರಗಳನ್ನು ರಕ್ಷಿಸಬೇಕು ಎಂದು ಹಿರಿಯ ವಿದ್ಯಾರ್ಥಿ ವಿಜಯ್‌ ರಾಂಪುರ ಮನವಿ ಮಾಡಿದ್ದಾರೆ.

ತಕ್ಷ ಣ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು, ನಾಲ್ಕು ಮಂದಿಯನ್ನು ಬಂಧಿಸಿ, ಅವರ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಅನುಮತಿ ಪಡೆಯದೆ ಮರ ಕಡಿಯಲು ಅವಕಾಶ ನೀಡಿದ ಕಾಲೇಜಿನ ಪ್ರಿನ್ಸಿಪಾಲರಿಗೆ ನೋಟೀಸ್‌ ನೀಡಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ