ಚನ್ನಪಟ್ಟಣ: ತಾಲೂಕಿನ ಮೋಳೆ ಗ್ರಾಮದಲ್ಲಿ ಆಕಸ್ಮಿಕವಾಗಿ ಅಗ್ನಿ ದುರಂತ ಸಂಭವಿಸಿ, ಗುಡಿಸಲು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.
ಗ್ರಾಮದ ಚಿಕ್ಕರಾಜು ಎಂಬುವರಿಗೆ ಸೇರಿದ ಗುಡಿಸಲು ಬೆಂಕಿ ಕಾಣಿಸಿಕೊಂಡು ಅದರ ಕೆನ್ನಾಲಿಗೆಗೆ ಕ್ಷ ಣಾರ್ಧದಲ್ಲಿ ಮನೆಯಲ್ಲಿದ್ದ ಎಲ್ಲ ಅಗತ್ಯ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಮನೆಯಲ್ಲಿದ್ದ ಗೋಬರ್ ಗ್ಯಾಸ್ ಲೀಕ್ನಿಂದ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದು, ಅಕ್ಕಪಕ್ಕದ ಜನರು ಬೆಂಕಿ ಆರಿಸುವಷ್ಟರಲ್ಲಿ ಗುಡಿಸಲನ್ನು ಸಂಪೂರ್ಣ ಆವರಿಸಿದ್ದರಿಂದ ಎಲ್ಲ ವಸ್ತುಗಳು ಭಸ್ಮವಾಗಿವೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ಅವಘಡ ನಡೆದಿದೆ. ಆದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಆದರೆ ಮನೆಯಲ್ಲಿದ್ದ ದವಸಧಾನ್ಯದ ಜತೆಗೆ ಬೀರುವಿನಲ್ಲಿದ್ದ ಹಣ ಮತ್ತು ಬಟ್ಟೆ ,ಪಾತ್ರೆ ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಹಾಳಾಗಿವೆ. ಈ ಬಗ್ಗೆ ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಿಲ್ಲಾ ಮತ್ತು ತಾಲೂಕು ಆಡಳಿತ ನೆರವಿಗೆ ಬಂದು ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮದ ಚಿಕ್ಕರಾಜು ಎಂಬುವರಿಗೆ ಸೇರಿದ ಗುಡಿಸಲು ಬೆಂಕಿ ಕಾಣಿಸಿಕೊಂಡು ಅದರ ಕೆನ್ನಾಲಿಗೆಗೆ ಕ್ಷ ಣಾರ್ಧದಲ್ಲಿ ಮನೆಯಲ್ಲಿದ್ದ ಎಲ್ಲ ಅಗತ್ಯ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಮನೆಯಲ್ಲಿದ್ದ ಗೋಬರ್ ಗ್ಯಾಸ್ ಲೀಕ್ನಿಂದ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದು, ಅಕ್ಕಪಕ್ಕದ ಜನರು ಬೆಂಕಿ ಆರಿಸುವಷ್ಟರಲ್ಲಿ ಗುಡಿಸಲನ್ನು ಸಂಪೂರ್ಣ ಆವರಿಸಿದ್ದರಿಂದ ಎಲ್ಲ ವಸ್ತುಗಳು ಭಸ್ಮವಾಗಿವೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ಅವಘಡ ನಡೆದಿದೆ. ಆದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಆದರೆ ಮನೆಯಲ್ಲಿದ್ದ ದವಸಧಾನ್ಯದ ಜತೆಗೆ ಬೀರುವಿನಲ್ಲಿದ್ದ ಹಣ ಮತ್ತು ಬಟ್ಟೆ ,ಪಾತ್ರೆ ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಹಾಳಾಗಿವೆ. ಈ ಬಗ್ಗೆ ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಿಲ್ಲಾ ಮತ್ತು ತಾಲೂಕು ಆಡಳಿತ ನೆರವಿಗೆ ಬಂದು ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.