ಆ್ಯಪ್ನಗರ

ಶವ ಪಡೆಯಲು ನಿರಾಕರಣೆ

ಶುಕ್ರವಾರ ಬೆಳಗ್ಗೆ ರಾಜರಾಜೇಶ್ವರಿ ಆಸ್ಪತ್ರೆಯಿಂದ ಶವಗಳನ್ನು ಸಾಗಿಸುವ ವೇಳೆ ಮೃತರ ಸಂಬಂಧಿಕರು ಪ್ರತಿಭಟನೆಗೆ ಸಜ್ಜಾಗಿರುವ ಸುಳಿವು ಪಡೆದ ಪೊಲೀಸರು ಪರ್ಯಾಯ ಮಾರ್ಗಗಳ ಮೂಲಕ ಶವಗಳನ್ನು ಗ್ರಾಮಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು

Vijaya Karnataka Web 15 Dec 2018, 5:00 am
ಕನಕಪುರ:ಶುಕ್ರವಾರ ಬೆಳಗ್ಗೆ ರಾಜರಾಜೇಶ್ವರಿ ಆಸ್ಪತ್ರೆಯಿಂದ ಶವಗಳನ್ನು ಸಾಗಿಸುವ ವೇಳೆ ಮೃತರ ಸಂಬಂಧಿಕರು ಪ್ರತಿಭಟನೆಗೆ ಸಜ್ಜಾಗಿರುವ ಸುಳಿವು ಪಡೆದ ಪೊಲೀಸರು ಪರ್ಯಾಯ ಮಾರ್ಗಗಳ ಮೂಲಕ ಶವಗಳನ್ನು ಗ್ರಾಮಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು. ಬೆಂಗಳೂರಿನಿಂದ ರಾಮನಗರ ಮಾರ್ಗವಾಗಿ ಶವಗಳನ್ನು ಸಾಗಿಸುವಾಗ ಜಿಲ್ಲಾ ಎಸ್ಪಿ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಇದನ್ನರಿತ ಪೊಲೀಸರು ಬಿಡದಿಯಿಂದ ಪರ್ಯಾಯ ಮಾರ್ಗಗಳನ್ನು ಬಳಸಿ ಮುಳ್ಳಹಳ್ಳಿ ಮುಖಾಂತರ ಗ್ರಾಮಕ್ಕೆ ಕೊಂಡೊಯ್ಯುವ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ಕೂಡ ನಡೆಯಿತು. ಮುಳ್ಳಹಳ್ಳಿ ಬಳಿ ಶವವಿದ್ದ ವಾಹನವನ್ನು ತಡೆದು ನಿಲ್ಲಿಸಿದ ಪ್ರತಿಭಟನಾಕಾರರು ಆರೋಪಿಗಳನ್ನು ಬಂಧಿಸುವವರೆಗೆ ನಾವು ಶವಗಳನ್ನು ಪಡೆಯುವುದಿಲ್ಲ .ನೀವೇ ಶವ ಸಂಸ್ಕಾರ ಮಾಡಿಬಿಡಿ. ಇಲ್ಲೆ ರಸ್ತೆಯಲ್ಲೇ ಮಲಗಿಸಿ ಹೋಗಿ ಎಂದು ಪೊಲೀಸ್‌ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಕೊಲೆ ಆರೋಪಿಗಳಿಗೆ ರಾಜಕೀಯ ಪ್ರಭಾವಿಗಳ ರಕ್ಷಣೆಯಿರುವುದರಿಂದ ಪ್ರಕರಣದ ಪ್ರಾಮಾಣಿಕ ತನಿಖೆಗೆ ಪೊಲೀಸರು ಮುಂದಾಗುತ್ತಿಲ್ಲ ಎಂದು ಮೃತರ ಸಂಬಂಧಿಕರು ಆರೋಪಿಸಿದರು.
Vijaya Karnataka Web
ಶವ ಪಡೆಯಲು ನಿರಾಕರಣೆ


ಜಿಲ್ಲಾ ಎಸ್ಪಿ ಸ್ಥಳಕ್ಕೆ ಬರುವವರೆಗೆ ಶವ ಸಾಗಿಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರನ್ನು ಡಿವೈಎಸ್‌ಪಿ ಮಲ್ಲೇಶ್‌ ಹಾಗು ಇನ್ನಿತರೆ ಪೋಲಿಸ್‌ ಅಧಿಕಾರಿಗಳು ಮನವೊಲಿಸಿ ಎಸ್ಪಿಯವರು ಜಿಲ್ಲೆಯಿಂದ ಹೊರಗಡೆ ಇದ್ದು ಶಾಂತ ರೀತಿಯಲ್ಲಿ ಮುಂದಿನ ಕ್ರಮಗಳಿಗೆ ಸಹಕರಿಸುವಂತೆ ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ