ಕನಕಪುರ: ಮನೋವೈಕಲ್ಯ ಹಾಗೂ ದೇಹದ ಮೇಲೆ ಸ್ವಾಧೀನ ಇಲ್ಲದ ವಿಶೇಷ ಚೇತನ ಹೆಣ್ಣು ಮಗುವನ್ನು ಬಾವಿಗೆಸೆದು ಕೊಂದ ಯಡಮಾರನಹಳ್ಳಿಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಂಗ ವೈಕಲ್ಯ ಹಾಗೂ ಮಾನಸಿಕ ವೈಕಲ್ಯದಿಂದ ಬಳಲುತ್ತಿದ್ದ ಎರಡು ವರ್ಷದ ಮಗು ಯಶಸ್ವಿನಿ ಅಲಿಯಾಸ್ ಮಹಾದೇವಿ ಎಂಬ ಎರಡು ವರ್ಷದ ಮಗುವನ್ನು ಅಜ್ಜಿಯರಾದ ರತ್ನಮ್ಮ(55), ಭದ್ರಮ್ಮ(70), ಪೋಷಕರಾದ ಶಂಕರ್(32), ಮಾನಸ ಒಟ್ಟು ಸೇರಿ ಬಾವಿಗೆ ಎಸೆದು ಕೊಂದಿದ್ದರು.
ನಾನಾ ರೀತಿಯ ಆರೋಗ್ಯ ಸಮಸ್ಯೆಯಿಂದ ಮಗುವಿಗೆ ವೈದ್ಯರ ಬಳಿ ಎರಡು ವರ್ಷಗಳಿಂದ ಚಿಕಿತ್ಸೆ ಕೊಡಿಸುತ್ತಿದ್ದ ಬಡ ಪೋಷಕರು, ಅದರಿಂದ ಗುಣವಾಗದ್ದರಿಂದ ಬೇಸತ್ತು ಮಗುವನ್ನು ಕೊಲ್ಲಲು ನಿರ್ಧರಿಸಿದ್ದರು. ಅದರಂತೆ ಮಗುವಿನ ಅಜ್ಜಿಯರನ್ನು ಕರೆದು ಮಗುವನ್ನು ಎಲ್ಲಾದರೂ ಎಸೆದು ಬರುವಂತೆ ಸೂಚಿಸಿದ್ದರು.
ಇಬ್ಬರೂ ಅಜ್ಜಿಯರು ಸೇರಿ ಯಡಮಾರನಹಳ್ಳಿ ಸಿದ್ದಪ್ಪಾಜಿ ಅವರ ತೋಟದ ಬಾವಿಗೆ ಮಗುವನ್ನು ಎಸೆದು ಬಂದಿದ್ದರು. ಬಾವಿಯಲ್ಲಿ ಮಗುವಿನ ಶವ ತೇಲುತ್ತಿರುವುದನ್ನು ಕಂಡ ಬಾವಿಯ ಮಾಲೀಕರ ಸಿದ್ದಪ್ಪಾಜಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಮಗುವಿನ ಪೋಷಕರು ಮತ್ತು ಅಜ್ಜಿಯರು ಸೇರಿ ಕೊಂದಿರುವುದು ದೃಢಪಟ್ಟಿತ್ತು. ಈಗ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ.
ನಾನಾ ರೀತಿಯ ಆರೋಗ್ಯ ಸಮಸ್ಯೆಯಿಂದ ಮಗುವಿಗೆ ವೈದ್ಯರ ಬಳಿ ಎರಡು ವರ್ಷಗಳಿಂದ ಚಿಕಿತ್ಸೆ ಕೊಡಿಸುತ್ತಿದ್ದ ಬಡ ಪೋಷಕರು, ಅದರಿಂದ ಗುಣವಾಗದ್ದರಿಂದ ಬೇಸತ್ತು ಮಗುವನ್ನು ಕೊಲ್ಲಲು ನಿರ್ಧರಿಸಿದ್ದರು. ಅದರಂತೆ ಮಗುವಿನ ಅಜ್ಜಿಯರನ್ನು ಕರೆದು ಮಗುವನ್ನು ಎಲ್ಲಾದರೂ ಎಸೆದು ಬರುವಂತೆ ಸೂಚಿಸಿದ್ದರು.
ಇಬ್ಬರೂ ಅಜ್ಜಿಯರು ಸೇರಿ ಯಡಮಾರನಹಳ್ಳಿ ಸಿದ್ದಪ್ಪಾಜಿ ಅವರ ತೋಟದ ಬಾವಿಗೆ ಮಗುವನ್ನು ಎಸೆದು ಬಂದಿದ್ದರು. ಬಾವಿಯಲ್ಲಿ ಮಗುವಿನ ಶವ ತೇಲುತ್ತಿರುವುದನ್ನು ಕಂಡ ಬಾವಿಯ ಮಾಲೀಕರ ಸಿದ್ದಪ್ಪಾಜಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಮಗುವಿನ ಪೋಷಕರು ಮತ್ತು ಅಜ್ಜಿಯರು ಸೇರಿ ಕೊಂದಿರುವುದು ದೃಢಪಟ್ಟಿತ್ತು. ಈಗ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ.