ಆ್ಯಪ್ನಗರ

ಪ್ರವಾಸೋದ್ಯಮಕ್ಕೆ 5 ಎಕರೆ ಭೂಮಿ ಮೀಸಲು: ಸಚಿವ ಮಹೇಶ್‌

ನಮ್ಮ ಇಲಾಖೆಯಿಂದ ಕಣ್ವದ 5 ಎಕರೆ ಪ್ರದೇಶವನ್ನು ಪ್ರವಾಸೋದ್ಯಮಕ್ಕೆ ಮೀಸಲಿಡಲಾಗಿದೆ. ಇದಕ್ಕೆ 10 ಕೋಟಿ ರೂ.ಗಳ ಪ್ರಸ್ತಾವನೆಯಲ್ಲಿ 8 ಕೋಟಿ ರೂ ಬಿಡುಗಡೆ ಮಾಡಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್‌ ತಿಳಿಸಿದರು.

Vijaya Karnataka 19 Jun 2019, 5:03 pm
ರಾಮನಗರ: ನಮ್ಮ ಇಲಾಖೆಯಿಂದ ಕಣ್ವದ 5 ಎಕರೆ ಪ್ರದೇಶವನ್ನು ಪ್ರವಾಸೋದ್ಯಮಕ್ಕೆ ಮೀಸಲಿಡಲಾಗಿದೆ. ಇದಕ್ಕೆ 10 ಕೋಟಿ ರೂ.ಗಳ ಪ್ರಸ್ತಾವನೆಯಲ್ಲಿ 8 ಕೋಟಿ ರೂ ಬಿಡುಗಡೆ ಮಾಡಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್‌ ತಿಳಿಸಿದರು.
Vijaya Karnataka Web 5 acres of land reserve for tourism minister mahesh
ಪ್ರವಾಸೋದ್ಯಮಕ್ಕೆ 5 ಎಕರೆ ಭೂಮಿ ಮೀಸಲು: ಸಚಿವ ಮಹೇಶ್‌


ಚನ್ನಪಟ್ಟಣ ತಾಲೂಕಿನ ಕಣ್ವ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ಕಣ್ವದಲ್ಲಿ ಮಾಡಬೇಕಿರುವ ಮಕ್ಕಳ ಉದ್ಯಾನಕ್ಕೆ 2 ಕೋಟಿ ರೂ, ಸಾಲುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗುವುದು,'' ಎಂದು ಹೇಳಿದರು.

''ರೇಷ್ಮೆಯನ್ನು ಹೊರ ದೇಶಗಳಿಂದ ಕೇಂದ್ರ ಸರಕಾರ ಆಮದು ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಹಿಂದಿನ ಕೇಂದ್ರ ರೇಷ್ಮೆ ಸಚಿವರ ಬಳಿ ಮಾತನಾಡಲಾಗಿದೆ. ರೇಷ್ಮೆ ಬೆಲೆ ಕುಸಿತಕ್ಕೆ ಕೇಂದ್ರವೇ ಕಾರಣ. ರೇಷ್ಮೆ ಬೆಲೆ ಹೆಚ್ಚಿಸಲು ರೇಷ್ಮೆಯ ಹದಿನೈದು ಉಪ ಉತ್ಪನ್ನಗಳ ತಯಾರಿಗೆ ಸಿದ್ಧತೆ ನಡೆಸಲಾಗುತ್ತಿದೆ. ಮುಂದಿನ ವಾರದಲ್ಲಿ ಈ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ,'' ಎಂದರು.

''ರೇಷ್ಮೆ ಸೀರೆ ಸಂಬಂಧ ಚನ್ನಪಟ್ಟಣದಲ್ಲಿನ ಹಳೆ ಕಟ್ಟಡಗಳ ನವೀಕರಣ ಜತೆಗೆ ಒಂದು ಲಕ್ಷ ಸೀರೆ ತಯಾರಿಕೆಗೆ ಆದ್ಯತೆ ನೀಡಲಾಗುವುದು. ಮೈಸೂರಿನಲ್ಲಿಯು ಹೊಸ ಕಟ್ಟಡಗಳನ್ನು ಸಿದ್ಧಪಡಿಸಲಾಗುವುದು. ಇದಕ್ಕೆ 100 ಕೋಟಿ ಮೀಸಲಿಡಲಾಗುವುದು. ಮುಖ್ಯವಾಗಿ ರೇಷ್ಮೆ ಆಯೋಗದ ಕಾರ್ಯದರ್ಶಿಯೊಂದಿಗೆ ಮಂಗಳವಾರ ಸಂಜೆ ಸಭೆ ನಡೆಸಲಾಗುತ್ತಿದ್ದು, ರೇಷ್ಮೆ ದರ ಸಂಬಂಧ ಚರ್ಚೆ ಮಾಡಲಾಗುವುದು,'' ಎಂದರು.

''ಅನ್‌ಲೈನ್‌ ಮೂಲಕ ರೈತರಿಗೆ ಪೇಮೆಂಟ್‌ ವ್ಯವಸ್ಥೆ ಮಾಡಲಾಗಿದೆ. ಆದರೆ, ಸಂಜೆಯೊಳಗೆ ಪೇಮೆಂಟ್‌ಗೆ ತೊಡಕಾಗಿದೆ. ರೇಷ್ಮೆ ಹರಾಜು ಮುನ್ನವೇ ಅಕೌಂಟ್‌ನಲ್ಲಿ ಹಣ ಇಡುವ ವ್ಯವಸ್ಥೆ ಮಾಡಲಾಗುವುದು. ರೇಷ್ಮೆ ಮಾರುಕಟ್ಟೆಯನ್ನು ಅಧುನೀಕರಣ ಮಾಡಲಾಗುವುದು,'' ಎಂದರು.

ರೈತರ ಕ್ಲಾಸ್‌: ಈ ವೇಳೆ ರೈತರೊಬ್ಬರು ಸಚಿವರೊಂದಿಗೆ ಮಾತನಾಡಿ, 6 ತಿಂಗಳಿನಿಂದ ರೇಷ್ಮೆ ಬೆಂಬಲ ಬೆಲೆ ನೀಡಿಲ್ಲ ಎಂದು ಅಸಮಾಧಾನ ಹೊರ ಹಾಕಿದ ಘಟನೆಯೂ ಜರುಗಿತು. ಇದಕ್ಕೆ ಸಮಾಧಾನದಿಂದಲೇ ಉತ್ತರಿಸಿದ ಸಚಿವರು, ಕೂಡಲೆ ಬೆಂಬಲ ಬೆಲೆ ಸಂಬಂಧ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ,'' ಎಂದರು.

-----

ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ 540 ಕೋಟಿ ವೆಚ್ಚದಲ್ಲಿ ಕೆರೆ ತುಂಬುವ ಯೋಜನೆಗೆ ಚಾಲನೆ ನೀಡಲಾಗಿದೆ.

- ಸಾ.ರಾ.ಮಹೇಶ್‌. ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ