ಆ್ಯಪ್ನಗರ

ರಂಗನಗಿರಿಯಲ್ಲಿ ಇಂದಿಗೂ ಗತ್ತು ಉಳಿಸಿಕೊಂಡ ನೂರೊಂದು ಎಡೆಸೇವೆ

ಸಾವನದುರ್ಗ, ಶಿವಗಂಗೆ ಬೆಟ್ಟಗಳ ಆನೆಗಳು ಸಂಚರಿಸುವ ಪಥದ ನಡುವೆ ಎದುರಾಗುವ ಮಾದಿಗೊಂಡನಹಳ್ಳಿ ಗುಡ್ಡದ ರಂಗನಾಥಸ್ವಾಮಿ ಗಿರಿಯಲ್ಲಿ ಸಂಕ್ರಾಂತಿ ಸುಗ್ಗಿಯಂದು ಅನಾದಿಕಾಲದ ನಡೆದುಬಂದಿರುವ ನೂರೊಂದು ಎಡೆಸೇವೆ ಪೂಜೆ ಇಂದಿಗೂ ತನ್ನ ಗತ್ತು ಉಳಿಸಿಕೊಂಡುಬಂದಿದೆ.

Vijaya Karnataka 15 Jan 2019, 5:00 am
ಕುದೂರು: ಸಾವನದುರ್ಗ, ಶಿವಗಂಗೆ ಬೆಟ್ಟಗಳ ಆನೆಗಳು ಸಂಚರಿಸುವ ಪಥದ ನಡುವೆ ಎದುರಾಗುವ ಮಾದಿಗೊಂಡನಹಳ್ಳಿ ಗುಡ್ಡದ ರಂಗನಾಥಸ್ವಾಮಿ ಗಿರಿಯಲ್ಲಿ ಸಂಕ್ರಾಂತಿ ಸುಗ್ಗಿಯಂದು ಅನಾದಿಕಾಲದ ನಡೆದುಬಂದಿರುವ ನೂರೊಂದು ಎಡೆಸೇವೆ ಪೂಜೆ ಇಂದಿಗೂ ತನ್ನ ಗತ್ತು ಉಳಿಸಿಕೊಂಡುಬಂದಿದೆ.
Vijaya Karnataka Web a hundred hundred adhesives still retained in ranganagiri
ರಂಗನಗಿರಿಯಲ್ಲಿ ಇಂದಿಗೂ ಗತ್ತು ಉಳಿಸಿಕೊಂಡ ನೂರೊಂದು ಎಡೆಸೇವೆ


ಏನಿದು ಇಲ್ಲಿನ ಎಡೆಪೂಜೆ ?

ಮಾದಿಗೊಂಡನಹಳ್ಳಿ ರಂಗನ ಬೆಟ್ಟದಲ್ಲಿ 50 ಕ್ಕೂ ಹೆಚ್ಚು ಹಳ್ಳಿಗಳ ಜನರು ಒಟ್ಟಿಗೆ ಸೇರಿ ಆಚರಿಸುವ ಸುಗ್ಗಿ ಹಬ್ಬವನ್ನು ನೂರೊಂದು ಎಡೆ ಸೇವೆ ಎಂದು ಕರೆಯಲಾಗುತ್ತದೆ.

ಔಷಧಭರಿತ ಪೊಂಗಲ್‌:


ಮಾಘಿ ಚಳಿಗೆ ದೇಹದಲ್ಲಿ ಶೀತ ಸೇರುವುದನ್ನು ನಿಯಂತ್ರಿಸಲು 15 ಬಗೆಯ ಸಾಂಬಾರ ಪದಾರ್ಥಗಳನ್ನು ಸೇರಿಸಿ ಪ್ರಸಾದ ಸಿದ್ದಪಡಿಸಲಾಗುತ್ತದೆ. ಲವಂಗ, ಮೆಣಸು, ಜೀರಿಗೆ, ಬೆಲ್ಲ, ಚಕ್ಕೆ ಮುಂತಾದವುಗಳಿಂದ ವಿಶೇಷ ಪೊಂಗಲ್‌ ತಯಾರಿಸಿ, ಶ್ರೀ ರಂಗನಾಥನಿಗೆ ನೇವೇಧ್ಯಮಾಡಿ ಭಕ್ತರಿಗೆ ಹಂಚುತ್ತಾರೆ. ಇದರೆ ಜತೆಗೆ ಪ್ರಕೃತಿದತ್ತವಾಗಿ ಸಿಗುವ ನಾನಾ ಫಲಗಳಿಂದ ಸಿದ್ದಪಡಿಸಿದ ರಸಾಯನವನ್ನು ಬೆಟ್ಟಕ್ಕೆ ಬರುವ ಭಕ್ತರಿಗೆ ಹಂಚಿಕೆ ಮಾಡುವುದು ಇಲ್ಲಿನ ಸಂಕ್ರಮಣದ ಮತ್ತೊಂದು ವಿಶೇಷ.

ಭಕ್ತರೊಂದಿಗೆ ಚಿಂತನ-ಮಂಥನ

ಈಬಾರಿ ಗುಡ್ಡದ ರಂಗನ ಗಿರಿ ಏರಿ ಬರುವ ಭಕ್ತರು ಮತ್ತು ದೇಗುಲದ ಆಡಳಿತ ಮಂಡಳಿ ಸದಸ್ಯರ ಜತೆ ವೇದಿಕೆಯಲ್ಲಿ ನೇರ ಸಂವಾದ ಮತ್ತು ಚಿಂತನ-ಮಂಥನದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಗುಡ್ಡದ ಗಿರಿಗೆ ಭಕ್ತರು ಹೆಚ್ಚುತ್ತಿದ್ದು, ದೇವಾಲಯದ ಅಭಿವೃದ್ಧಿ, ರಾಜಗೋಪುರ ನಿರ್ಮಾಣ ಹಾಗೂ ಹೊಸ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನರಿಂದ ಸಲಹೆ ಸೂಚನೆ ಪಡೆಯಲು ಚಿಂತನ-ಮಂಥನ ಕಾರ‍್ಯಕ್ರಮ ಆಯೋಜಿಸಲಾಗಿದೆ ಎಂದು ಮಾದಿಗೊಂಡನಹಳ್ಳಿ ಗುಡ್ಡದ ರಂಗನಾಥಸ್ವಾಮಿ ಟ್ರಸ್ಟ್‌ ತಿಳಿಸಿದೆ.

ಸುಗ್ಗಿ ಸೊಗಡಿನ ಪ್ರಸಾದ

ರಂಗನ ಬೆಟ್ಟದಲ್ಲಿ ಮೂಲವಿಗ್ರಹಕ್ಕೆ ಅಭಿಷೇಕ, ಮಂಗಳಾರತಿ ಆದಬಳಿಕ ದೇವಾಲಯದ ವತಿಯಿಂದ ಐದು ಸಾವಿರ ಭಕ್ತರಿಗೆ ಗ್ರಾಮೀಣ ಸೊಗಡಿನ ಇದಕಿದ ಬೇಳೆ ಸಾರು, ಮುದ್ದೆ, ರಸಾಯನ, ಬೆಲ್ಲದ ಪೊಂಗಲ್‌ ಮುಂತಾದ ಹಳ್ಳಿ ಸೊಗಡಿನ ಆಹಾರವನ್ನು ಪ್ರಸಾದವಾಗಿ ನೀಡಲಾಗುತ್ತಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

ಬೆಟ್ಟದಲ್ಲಿ ದೇವಾಲಯದ ವತಿಯಿಂದ ಶ್ರೀರಂಗ ಕಾಲನಿರ್ಣಯ ಎಂಬ ಕ್ಯಾಲೆಂಡರ್‌ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ