ಆ್ಯಪ್ನಗರ

ಪಾರ್ಟಿ ಮಾಡಲು ಕೆರೆದಂಡೆಗೆ ತೆರಳಿದ್ದ ಯುವಕ ನೀರು ಪಾಲು

ಪಾರ್ಟಿಮಾಡಲು ನಾಲ್ವರು ಸ್ನೇಹಿತರೊಂದಿಗೆ ಮರಳವಾಡಿ ರಾವೊತ್ತನಹಳ್ಳ ಕೆರೆಗೆ ತೆರಳಿದ್ದ ವ್ಯಕ್ತಿಯೊಬ್ಬರು ನೀರು ಪಾಲಾಗಿದ್ದಾರೆ.

Vijaya Karnataka 4 Feb 2019, 5:00 am
ಹಾರೋಹಳ್ಳಿ (ಕನಕಪುರ ತಾ.): ಪಾರ್ಟಿಮಾಡಲು ನಾಲ್ವರು ಸ್ನೇಹಿತರೊಂದಿಗೆ ಮರಳವಾಡಿ ರಾವೊತ್ತನಹಳ್ಳ ಕೆರೆಗೆ ತೆರಳಿದ್ದ ವ್ಯಕ್ತಿಯೊಬ್ಬರು ನೀರು ಪಾಲಾಗಿದ್ದಾರೆ.
Vijaya Karnataka Web a young man sunk in lake who went with friends
ಪಾರ್ಟಿ ಮಾಡಲು ಕೆರೆದಂಡೆಗೆ ತೆರಳಿದ್ದ ಯುವಕ ನೀರು ಪಾಲು


ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ವ್ಯಕ್ತಿ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿ ಗುಳಗನಹಳ್ಳಿ ಗ್ರಾಮದ ಮೃತ ಮುತ್ತುರಾಜು (42) ಎಂದು ತಿಳಿದುಬಂದಿದೆ. ಮೃತನು ಎಳನೀರು ಮಾರಾಟ, ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸ್ನೇಹಿತರಾದ ಕುಮಾರ, ವಿಜಿ, ರಾಜು, ಸುಕುಮಾರ್‌ ಜತೆ ಬೆಂಗಳೂರಿನ ಬನಶಂಕರಿಯಲ್ಲಿ ವಾಸವಾಗಿದ್ದ ಮುತ್ತುರಾಜು, ಇತ್ತೀಚೆಗಷ್ಟೇ ಶಬರಿಮಲೆ ಯಾತ್ರೆ ಮುಗಿಸಿ ಮರಳಿದ್ದರು. ರಜಾ ದಿನವಾದ ಭಾನುವಾರ ರಾವೋತ್ತನಹಳ್ಳಿ ಕೆರೆ ದಂಡೆಯಲ್ಲಿ ಪಾರ್ಟಿ ಮಾಡಲು ಐದು ಮಂದಿ ಸ್ನೇಹಿತರು ತೆರಳಿದ್ದರು. ಪಾರ್ಟಿ ವೇಳೆ ಮುತ್ತುರಾಜ್‌ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಈ ಸಂಬಂಧ ಮೃತನ ಸಹೋದರ ರುದ್ರಪ್ಪ ಹಾರೋಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ಶವಕ್ಕಾಗಿ ಶೋಧ:

ರಾವೊತ್ತನಹಳ್ಳ ಕೆರೆಯು ದೊಡ್ಡದಾಗಿದ್ದು, ಆಳವಾದ ಕೆರೆಯಲ್ಲಿ ಶವ ಮುಳುಗಿದೆ. ಶವಕ್ಕಾಗಿಹಾರೋಹಳ್ಳಿ ಸಬ್‌ಇನ್ಸ್‌ಪೆಕ್ಟರ್‌ ಧರ್ಮೇಗೌಡ ಮತ್ತವರ ಸಿಬ್ಬಂದಿ, ಅಗ್ನಿಶಾಮಕ ದಳ ಮತ್ತು ಮೀನುಗಾರರ ನೆರವಿನೊಂದಿಗೆ ಶೋಧ ಕಾರ‍್ಯ ನಡೆಸಲಾಗುತ್ತಿದೆ. ರಾತ್ರಿ 7 ಗಂಟೆಯವರೆಗೂ ಶವ ಸಿಕ್ಕಿದ ಕಾರಣ ಸೋಮವಾರ ಬೆಳಿಗ್ಗೆಯಿಂದ ಮತ್ತೆ ಶವ ಪತ್ತೆಗಾಗಿ ಶೋಧ ಮುಂದುವರೆಸುವುದಾಗಿ ಎಸ್‌.ಐ. ಧರ್ಮೇಗೌಡ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ