ಕುದೂರು: ನಮ್ಮ ಜಾನಪದ ಕಲೆ ಹಾಗೂ ನೃತ್ಯ ಪ್ರಕಾರಗಳು ಇಡೀ ಪ್ರಪಂಚದಲ್ಲೇ ಗಮನ ಸೆಳೆದಿವೆ ಎಂದು ಅವಿಘ್ನಾ ಕಲಾ ತಂಡದ ಶಿಕ್ಷ ಕಿ ಶಾಂತಲಾ ಕಿರಣ್ ಅಭಿಪ್ರಾಯಪಟ್ಟರು.
ಕುದೂರಿನ ವೈನತೇಯ ಆರ್ಕೇಡ್ನಲ್ಲಿ ಅವಿಘ್ನಾ ಕಲಾ ತಂಡದಿಂದ ನಡೆದ ಮಕ್ಕಳ ಭರತನಾಟ್ಯ ಪ್ರದರ್ಶನದ ವೇಳೆ ಮಾತನಾಡಿ, ''ಭಾರತೀಯ ಸಂಸ್ಕೃತಿ ಹಾಗೂ ಕಲಾ ಪ್ರಕಾರಗಳಿಗೆ ವಿಶ್ವದೆಲ್ಲೆಡೆ ಮಾನ್ಯತೆ ಇದೆ. ಈ ಕಲೆಯನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ಇಂದಿನ ಯುವ ಸಮುದಾಯದ ಮೇಲಿದೆ. ಇಂದು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ನಮ್ಮ ಪುರಾತನ ಪರಂಪರೆಯನ್ನು ಮೂಲೆಗುಂಪು ಮಾಡುತ್ತಿರುವುದು ಸರಿಯಲ್ಲ. ನಮ್ಮ ಜಾನಪದ ನೃತ್ಯಕಲೆಯನ್ನು ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹಿಸಬೇಕು. ಅದರಲ್ಲೂ ಭರತನಾಟ್ಯ ಕಲಿಯುವುದು ಸವಾಲಿನ ಸಂಗತಿಯೇ ಸರಿ. ಎಲ್ಲಾ ಮಕ್ಕಳು ಉತ್ಸಾಹದಿಂದ ಕಲಿತು ಉತ್ತಮ ಪ್ರದರ್ಶನ ನೀಡಿದ್ದು ತೃಪ್ತಿ ನೀಡಿದೆ,'' ಎಂದರು.
ಲಕ್ಷ್ಮೀ ವೆಂಕಟೇಶ್ ಮಾತನಾಡಿ, ''ಮಕ್ಕಳ ಭರತನಾಟ್ಯ ಪ್ರದರ್ಶನ ನಿಜಕ್ಕೂ ಉತ್ತಮ ಮುದ ನೀಡಿತು. ಚಿಕ್ಕ ವಯಸ್ಸಿನ ಈ ಮಕ್ಕಳ ಕಲೆ ಸಾರ್ವಜನಿಕರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ಎಲ್ಲರೂ ಸ್ವಯಂಪ್ರೇರಿತರಾಗಿ ಪಾಲ್ಗೊಂಡು ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿದ್ದಾರೆ,'' ಎಂದರು.
ಇದೇ ವೇಳೆ ವಿವಿಧ ಬಗೆಯ ನೃತ್ಯಗಳನ್ನು ಮಕ್ಕಳು ಪ್ರದರ್ಶಿಸಿದರು. ಗ್ರಾಮಸ್ಥರು ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕುದೂರಿನ ವೈನತೇಯ ಆರ್ಕೇಡ್ನಲ್ಲಿ ಅವಿಘ್ನಾ ಕಲಾ ತಂಡದಿಂದ ನಡೆದ ಮಕ್ಕಳ ಭರತನಾಟ್ಯ ಪ್ರದರ್ಶನದ ವೇಳೆ ಮಾತನಾಡಿ, ''ಭಾರತೀಯ ಸಂಸ್ಕೃತಿ ಹಾಗೂ ಕಲಾ ಪ್ರಕಾರಗಳಿಗೆ ವಿಶ್ವದೆಲ್ಲೆಡೆ ಮಾನ್ಯತೆ ಇದೆ. ಈ ಕಲೆಯನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ಇಂದಿನ ಯುವ ಸಮುದಾಯದ ಮೇಲಿದೆ. ಇಂದು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ನಮ್ಮ ಪುರಾತನ ಪರಂಪರೆಯನ್ನು ಮೂಲೆಗುಂಪು ಮಾಡುತ್ತಿರುವುದು ಸರಿಯಲ್ಲ. ನಮ್ಮ ಜಾನಪದ ನೃತ್ಯಕಲೆಯನ್ನು ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹಿಸಬೇಕು. ಅದರಲ್ಲೂ ಭರತನಾಟ್ಯ ಕಲಿಯುವುದು ಸವಾಲಿನ ಸಂಗತಿಯೇ ಸರಿ. ಎಲ್ಲಾ ಮಕ್ಕಳು ಉತ್ಸಾಹದಿಂದ ಕಲಿತು ಉತ್ತಮ ಪ್ರದರ್ಶನ ನೀಡಿದ್ದು ತೃಪ್ತಿ ನೀಡಿದೆ,'' ಎಂದರು.
ಲಕ್ಷ್ಮೀ ವೆಂಕಟೇಶ್ ಮಾತನಾಡಿ, ''ಮಕ್ಕಳ ಭರತನಾಟ್ಯ ಪ್ರದರ್ಶನ ನಿಜಕ್ಕೂ ಉತ್ತಮ ಮುದ ನೀಡಿತು. ಚಿಕ್ಕ ವಯಸ್ಸಿನ ಈ ಮಕ್ಕಳ ಕಲೆ ಸಾರ್ವಜನಿಕರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ಎಲ್ಲರೂ ಸ್ವಯಂಪ್ರೇರಿತರಾಗಿ ಪಾಲ್ಗೊಂಡು ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿದ್ದಾರೆ,'' ಎಂದರು.
ಇದೇ ವೇಳೆ ವಿವಿಧ ಬಗೆಯ ನೃತ್ಯಗಳನ್ನು ಮಕ್ಕಳು ಪ್ರದರ್ಶಿಸಿದರು. ಗ್ರಾಮಸ್ಥರು ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.