ಆ್ಯಪ್ನಗರ

ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಲು ಸಲಹೆ

ಮಕ್ಕಳಿಗೆ ಶಿಸ್ತು ಬಹಳ ಮುಖ್ಯವಾಗಿದ್ದು, ಜೀವನದಲ್ಲಿ ಶಿಸ್ತನ್ನು ಆಳವಡಿಸಿಕೊಂಡು ಉತ್ತಮ ಪ್ರಜೆಗಳಾಬೇಕು ಎಂದು ವೆಂಕಟರಾಯನ ದೊಡ್ಡಿ ಗ್ರಾಮದ ಹಿರಿಯ ಮುಖಂಡ ಚಾಮೇಗೌಡ ತಿಳಿಸಿದರು.

Vijaya Karnataka 7 Feb 2019, 4:25 pm
ಕೋಡಿಹಳ್ಳಿ(ಕನಕಪುರ ತಾ): ಮಕ್ಕಳಿಗೆ ಶಿಸ್ತು ಬಹಳ ಮುಖ್ಯವಾಗಿದ್ದು, ಜೀವನದಲ್ಲಿ ಶಿಸ್ತನ್ನು ಆಳವಡಿಸಿಕೊಂಡು ಉತ್ತಮ ಪ್ರಜೆಗಳಾಬೇಕು ಎಂದು ವೆಂಕಟರಾಯನ ದೊಡ್ಡಿ ಗ್ರಾಮದ ಹಿರಿಯ ಮುಖಂಡ ಚಾಮೇಗೌಡ ತಿಳಿಸಿದರು.
Vijaya Karnataka Web advice to students on adopting discipline in life
ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಲು ಸಲಹೆ


ತಾಲೂಕಿನ ವೆಂಕಟರಾಯನ ದೊಡ್ಡಿಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮತ್ತು ಯುವ ಶಕ್ತಿ ಭಾರತ ಸಂಘಟನೆ ಹಮ್ಮಿಕೊಂಡಿದ ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಸ್‌ ಚಂದ್ರಬೋಸ್‌, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ, ದರಾ ಬೇಂದ್ರೆ ಜಯಂತ್ಯುತ್ಸವದಲ್ಲಿ ಉಚಿತ ನೋಟ್‌ ಬುಕ್‌ ವಿತರಣೆ ಕಾರ‍್ಯಕ್ರಮದಲ್ಲಿ ಮಾತನಾಡಿದರು.

''ಮಕ್ಕಳು ಗುರು ಹಿರಿಯರಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳಬೇಕು. ತಮ್ಮ ಸುತ್ತ ಮುತ್ತಲಿರುವ ಅಸಹಾಯಕರಿಗೆ ನೆರವು ನೀಡಬೇಕು. ಯಾವುದೇ ದುಶ್ಚಟಗಳಿಗೆ ದಾಸರಾಗದೇ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು. ಈ ಮಹತ್ಮರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು,'' ಎಂದು ಕರೆ ನೀಡಿದರು.

ಉಪನ್ಯಾಸಕಿ ಆರ್‌.ರತ್ನಮ್ಮ ಮಾತನಾಡಿ, ''ವಿವೇಕಾನಂದರ ಸಂದೇಶಗಳನ್ನು ಇಂದು ಇಡೀ ಜಗತ್ತೆ ಒಪ್ಪಿಕೊಂಡಿದೆ. ಇಂತಹ ಮಹಾನ್‌ ವ್ಯಕ್ತಿಗಳು ನಮ್ಮ ದೇಶದವರೆಂದು ನಾವೆಲ್ಲರೂ ಹೆಮ್ಮೆ ಪಡಬೇಕಾಗಿದೆ. ದೀನ, ದಲಿತ, ದುರ್ಬಲರ ಸೇವೆಯೇ ಪರಮಾತ್ಮನ ಸೇವೆಯೆಂದು ತಮ್ಮ ಸಿದ್ಧಾಂತಗಳಲ್ಲಿ ತಿಳಿಸಿದ್ದಾರೆ. ನಮ್ಮ ಹಿಂದೂ ಧರ್ಮದ ಸಿದ್ಧಾಂತಗಳನ್ನು ಜಗತ್ತಿನಾದ್ಯಂತ ಸಾರಿದಾರೆ. ಇವರೊಬ್ಬ ಮೇರು ಪ್ರತಿಭೆ,'' ಎಂದು ತಿಳಿಸಿದರು.

ಉಪನ್ಯಾಸಕ ಅಶೋಕ್‌ ಆರ್‌ ಮಾತನಾಡಿ, '' ಸ್ವಾಮಿ ವಿವೇಕಾನಂದರ ತತ್ವಗಳಿಂದ ಪ್ರಭಾವಿತರಾಗಿ ದೇಶದ ಸ್ವಾತಂತ್ರ ಸಂಗ್ರಾಮಕ್ಕೆ ಧುಮಿಕಿದ ನೇತಾಜಿ ಸುಭಾಸ್‌ ಚಂದ್ರಬೋಸ್‌ ಬ್ರೀಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ಇವರ ಕ್ರಾಂತಿಕಾರಕ, ಸ್ಫೂರ್ತಿದಾಯಕ ಭಾಷಣಗಳನ್ನು ಕೇಳಿ ಸಾವಿರಾರು ಯುವಕರು ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಜತೆಗೆ ತಮ್ಮದೆ ಸ್ವರಾಜ್ಯ ಪಕ್ಷ ಸ್ಥಾಪಿಸಿ ಕೆಚ್ಚೆದೆಯ ಹೋರಾಟವನ್ನು ಮಾಡಿದ ಮಹಾನ್‌ ವ್ಯಕ್ತಿ,'' ಎಂದರು.

ಪುಷ್ಪನಮನ: ಉಪನ್ಯಾಸಕ ಚಂದ್ರು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ.ಬೇಂದ್ರೆ ಮತ್ತು ಡಾ. ಶಿವಕುಮಾರ್‌ ಸ್ವಾಮೀಜಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು. ಪ್ರಗತಿಪರ ರೈತರಾದ ಸುನೀತ, ನಾರಾಯಣ್‌, ಶಾಲಾ ಶಿಕ್ಷ ಕರಾದ ರುದ್ರೇಶ್‌ ಅವರನ್ನು ಸನ್ಮಾನಿಸಲಾಯಿತು. ಗಂಗಾಧರ್‌ ಮಕ್ಕಳಿಗೆ ಮ್ಯಾಜಿಕ್‌ ಶೋ ನಡೆಸಿಕೊಟ್ಟರು.

ಮುಖ್ಯ ಶಿಕ್ಷ ಕರಾದ ಬಸವೇಗೌಡ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ಶಿಕ್ಷ ಕರಾದ ಗಂಗಾವತಿ, ರವೀಂದ್ರ, ನವೀನ್‌ಕುಮಾರ್‌, ಶ್ರುತಿ ಯುವ ಶಕ್ತಿ ಭಾರತ ಸಂಘದ ಶಶಿಕುಮಾರ್‌, ಅರುಣ್‌ ಕುಮಾರ್‌, ವಿನೋದ್‌, ವೀರಭದ್ರ, ಶಾಲಾ ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ