ಮರಳವಾಡಿ ಹೋಬಳಿ ಮಟ್ಟದ ರೈತ ಜಾಗೃತಿ ಸಭೆ
ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಕಲ್ಲನಕುಪ್ಪೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತಸಂಘ, ಹಸಿರುಸೇನೆ ಸಹಯೋಗದೊಂದಿಗೆ ಮರಳವಾಡಿ ಮಟ್ಟದ ರೈತರಿಗೆ ಜಾಗೃತಿ ಸಭೆ ಏರ್ಪಡಿಸಲಾಗಿತ್ತು.
Vijaya Karnataka 29 May 2019, 4:48 pm
ಮರಳವಾಡಿ: ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಕಲ್ಲನಕುಪ್ಪೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತಸಂಘ, ಹಸಿರುಸೇನೆ ಸಹಯೋಗದೊಂದಿಗೆ ಮರಳವಾಡಿ ಮಟ್ಟದ ರೈತರಿಗೆ ಜಾಗೃತಿ ಸಭೆ ಏರ್ಪಡಿಸಲಾಗಿತ್ತು.
ಕೃಷಿ ಇಲಾಖೆ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಕೃಷಿ ಇಲಾಖೆಯಿಂದ ರೈತರಿಗೆ ಕೃಷಿಭಾಗ್ಯ ಯೋಜನೆಯಿಂದ ಮಳೆ ಅನಿಶ್ಚಿತವಾದರೆ ರೈತರ ಭದ್ರತೆ ದೃಷ್ಟಿಯಿಂದ ಜಾರಿಗೆ ತರಲಾಗಿದೆ. ಕೃಷಿಹೊಂಡ ಮಾಡುವುದರಿಂದ ರೈತರ ಖಾತೆಗೆ ಹಣವನ್ನು ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಅಲ್ಲದೇ ಕೃಷಿ ಪ್ರಶಸ್ತಿ ಯೋಜನೆ ಅಂದರೆ, ರಾಗಿಬೆಳೆಯನ್ನು ಹೆಚ್ಚು ಬೆಳೆಯುವ ರೈತರು ರು ನೊಂದಾಯಿಸಿಕೊಂಡಿದ್ದಲ್ಲಿ ಕಟಾವು ಮಾಡುವ ಸಮಯದಲ್ಲಿ ಗುರುತಿಸಿ ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಅಯ್ಕೆ ಮಾಡಲಾಗುವುದು ಎಂದರು.
ಕೃಷಿ ಚಟುವಟಿಕೆ ನಡೆಯವ ಸಂದರ್ಭದಲ್ಲಿ ಹಾವು ಕಡಿತದಿಂದ ಮೃತಪಟ್ಟರೆ 2 ಲಕ್ಷ ರೂ. ಪರಿಹಾರ ಅವಲಂಬಿತರಿಗೆ ನೀಡಲಾಗುವುದು. ಅದೇ ರೀತಿ ಫಸಲು ಭೀಮಾಯೋಜನೆ ಮಳೆ ವೈಪರೀತ್ಯದಿಂದ ಬೆಳೆ ನಾಶವಾದರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡಿ ಪರಿಹಾರ ನೀಡಲು ಸಾಧ್ಯ. ರಾಷ್ಟ್ರೀಯ ಕೃಷಿಯಾತ್ರೀಕರಣ ಯೋಜನೆಯಡಿ ಯಂತ್ರಗಳ ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಕೃಷಿ ಅಧಿಕಾರಿ ಮಂಜುಳಾ, ಜಿಲ್ಲಾ ರೈತ ಸಂಘದ ಕಾರ್ಯಧ್ಯಕ್ಷ ಚೀಲೂರು ಮುನಿರಾಜು, ತಾಲೂಕು ಅಧ್ಯಕ್ಷ ಶಶಿಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜು, ಮರಳವಾಡಿ ಹೋಬಳಿ ರೈತ ಪದಾಧಿಕಾರಿಗಳು ಭಾಗವಹಿಸಿದ್ದರು.
ಕೃಷಿ ಇಲಾಖೆ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಕೃಷಿ ಇಲಾಖೆಯಿಂದ ರೈತರಿಗೆ ಕೃಷಿಭಾಗ್ಯ ಯೋಜನೆಯಿಂದ ಮಳೆ ಅನಿಶ್ಚಿತವಾದರೆ ರೈತರ ಭದ್ರತೆ ದೃಷ್ಟಿಯಿಂದ ಜಾರಿಗೆ ತರಲಾಗಿದೆ. ಕೃಷಿಹೊಂಡ ಮಾಡುವುದರಿಂದ ರೈತರ ಖಾತೆಗೆ ಹಣವನ್ನು ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಅಲ್ಲದೇ ಕೃಷಿ ಪ್ರಶಸ್ತಿ ಯೋಜನೆ ಅಂದರೆ, ರಾಗಿಬೆಳೆಯನ್ನು ಹೆಚ್ಚು ಬೆಳೆಯುವ ರೈತರು ರು ನೊಂದಾಯಿಸಿಕೊಂಡಿದ್ದಲ್ಲಿ ಕಟಾವು ಮಾಡುವ ಸಮಯದಲ್ಲಿ ಗುರುತಿಸಿ ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಅಯ್ಕೆ ಮಾಡಲಾಗುವುದು ಎಂದರು.
ಕೃಷಿ ಚಟುವಟಿಕೆ ನಡೆಯವ ಸಂದರ್ಭದಲ್ಲಿ ಹಾವು ಕಡಿತದಿಂದ ಮೃತಪಟ್ಟರೆ 2 ಲಕ್ಷ ರೂ. ಪರಿಹಾರ ಅವಲಂಬಿತರಿಗೆ ನೀಡಲಾಗುವುದು. ಅದೇ ರೀತಿ ಫಸಲು ಭೀಮಾಯೋಜನೆ ಮಳೆ ವೈಪರೀತ್ಯದಿಂದ ಬೆಳೆ ನಾಶವಾದರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡಿ ಪರಿಹಾರ ನೀಡಲು ಸಾಧ್ಯ. ರಾಷ್ಟ್ರೀಯ ಕೃಷಿಯಾತ್ರೀಕರಣ ಯೋಜನೆಯಡಿ ಯಂತ್ರಗಳ ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಕೃಷಿ ಅಧಿಕಾರಿ ಮಂಜುಳಾ, ಜಿಲ್ಲಾ ರೈತ ಸಂಘದ ಕಾರ್ಯಧ್ಯಕ್ಷ ಚೀಲೂರು ಮುನಿರಾಜು, ತಾಲೂಕು ಅಧ್ಯಕ್ಷ ಶಶಿಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜು, ಮರಳವಾಡಿ ಹೋಬಳಿ ರೈತ ಪದಾಧಿಕಾರಿಗಳು ಭಾಗವಹಿಸಿದ್ದರು.