ಆ್ಯಪ್ನಗರ

ಎಪಿಎಂಸಿ ಕಾರ್ಮಿಕರ ಕ್ವಾಟ್ರಸ್‌ ಜಲಾವೃತ

ಪಟ್ಟಣದಲ್ಲಿಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಎಪಿಎಂಸಿ ಕಾರ್ಮಿಕರ ಕ್ವಾಟ್ರಸ್‌ ಜಲಾವೃತಗೊಂಡಿದೆ. ಜನರು ಮನೆಯಿಂದ ಹೊರಬರಲಾಗದೇ ಪರದಾಡುತ್ತಿದ್ದಾರೆ.

Vijaya Karnataka 24 Sep 2019, 3:36 pm
ಚನ್ನಪಟ್ಟಣ: ಪಟ್ಟಣದಲ್ಲಿಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಎಪಿಎಂಸಿ ಕಾರ್ಮಿಕರ ಕ್ವಾಟ್ರಸ್‌ ಜಲಾವೃತಗೊಂಡಿದೆ. ಜನರು ಮನೆಯಿಂದ ಹೊರಬರಲಾಗದೇ ಪರದಾಡುತ್ತಿದ್ದಾರೆ.
Vijaya Karnataka Web apmc workers quattrus watercourse
ಎಪಿಎಂಸಿ ಕಾರ್ಮಿಕರ ಕ್ವಾಟ್ರಸ್‌ ಜಲಾವೃತ


ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲೇ ಇರುವ ಈ ಬಡಾವಣೆಯಲ್ಲಿಎಪಿಎಂಸಿ ಮಾರುಕಟ್ಟೆಯ ಕೂಲಿ ಕಾರ್ಮಿಕರಿಗೆ ಮನೆಕಟ್ಟಿಕೊಡಲಾಗಿದೆ. ಕಳೆದ 18 ವರ್ಷದಿಂದಲೂ ಸಹ ಇವರೆಲ್ಲರುವ ಇಲ್ಲೇ ವಾಸವಾಗಿದ್ದು, ಸುಮಾರು 50ಕ್ಕೂ ಹೆಚ್ಚು ಮನೆಗಳಿರುವ ಈ ಬಡಾವಣೆಯಲ್ಲಿಮೂಲಭೂತ ಸೌಕರ್ಯಗಳೇ ಇಲ್ಲದಂತಾಗಿದೆ.

ಅದರಲ್ಲೂಮಳೆ ಬಂದರೆ ಸಾಕು ಪಕ್ಕದ ಹನುಮಂತನಗರ, ಟಿಪುತ್ರ್ಪನಗರ, ಮಕ್ಕಾನ್‌ ಬಡಾವಣೆ ಸೇರಿದಂತೆ ಪಟ್ಟಣದಲ್ಲಿನ ದೊಡ್ಡಮೋರಿಗಳ ನೀರೆಲ್ಲಇಲ್ಲಿಗೆ ಬಂದು ಮನೆಗಳಿಗೆ ನುಗ್ಗುತ್ತದೆ. ಈ ಬಗ್ಗೆ ಚನ್ನಪಟ್ಟಣ ನಗರಸಭೆಗೆ ಸಾಕುಷ್ಟು ದೂರು ನೀಡಿ ಮನವಿ ಮಾಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲಎಂದು ಸ್ಥಳೀಯ ನಿವಾಸಿಗಳು ಬೇಸರವ್ಯಕ್ತಪಡಿಸಿದ್ದಾರೆ.

ಇಲ್ಲಿರುವ ಪ್ರತಿಯೊಂದು ಮನೆಯಲ್ಲೂಚಿಕ್ಕಮಕ್ಕಳಿವೆ. ಮಳೆ ಬಂದರೆ ಮನೆಯೊಳಗೆ ಕೊಳಚೆ ನೀರು ತುಂಬಿಕೊಳ್ಳುವುದರಿಂದ ಮಕ್ಕಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಜೋರು ಮಳೆ ಬಂದಾಗಲೆಲ್ಲಈ ಕ್ವಾಟ್ರಸ್‌ ಜಲಾವೃತಗೊಳ್ಳುತ್ತದೆ.

ಸಮಸ್ಯೆ ತಲೆದೋರಿಗಾಗಲೆಲ್ಲಾಸ್ಥಳಕ್ಕೆ ಭೇಟಿ ನೀಡಿ ಪರಿಹರಿಸುವ ಭರವಸೆ ನೀಡಿ ಹೋಗುವ ಅಧಿಕಾರಿಗಳು ಮತ್ತೆ ಇತ್ತ ತಲೆ ಹಾಕುತ್ತಲೇ ಇಲ್ಲ. ಇದರಿಂದ ಸಮಸ್ಯೆ ಬಗೆಹರಿಯುತ್ತಲೇ ಇಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ