ಆ್ಯಪ್ನಗರ

ಜಲಾವೃತವಾದ ಕೃಷಿ ಭೂಮಿ: ಕೃಷಿಕರ ಬದುಕು ಬೀದಿಗೆ

ಗ್ರಾಮೀಣ ಭಾಗದ ಬೆಲೆ ಬಾಳುವ ಕೃಷಿ ಜಮೀನು ಬೆಂಗಳೂರು-ಹಾಸನ ರೈಲ್ವೆ ಕಾಮಗಾರಿಯಿಂದ ಜಮೀನು ಜಲಾವೃತವಾಗಿದೆ. ಇತ್ತ ರೈಲ್ವೆ ಹಳಿ ಹಾದುಹೋಗಿರುವ ರೈತಾಪಿಗಳ ಜಮೀನಿನ ಬದಿಯಲ್ಲಿ ರೈಲ್ವೆ ಎಂಜಿನಿಯರ್‌ಗಳು ಮಾಡಿರುವ ಅವೈಜ್ಞಾನಿಕ ಕಾಮಗಾರಿಯಿಂದ ನೂರಾರು ಎಕರೆ ಕೃಷಿ ಭೂಮಿ ನೀರಿನಲ್ಲಿ ಮುಳುಗಿಹೋಗಿದೆ..!

Vijaya Karnataka 5 Sep 2018, 3:54 pm
ಮಾಗಡಿ ಗ್ರಾಮಾಂತರ: ಗ್ರಾಮೀಣ ಭಾಗದ ಬೆಲೆ ಬಾಳುವ ಕೃಷಿ ಜಮೀನು ಬೆಂಗಳೂರು-ಹಾಸನ ರೈಲ್ವೆ ಕಾಮಗಾರಿಯಿಂದ ಜಮೀನು ಜಲಾವೃತವಾಗಿದೆ. ಇತ್ತ ರೈಲ್ವೆ ಹಳಿ ಹಾದುಹೋಗಿರುವ ರೈತಾಪಿಗಳ ಜಮೀನಿನ ಬದಿಯಲ್ಲಿ ರೈಲ್ವೆ ಎಂಜಿನಿಯರ್‌ಗಳು ಮಾಡಿರುವ ಅವೈಜ್ಞಾನಿಕ ಕಾಮಗಾರಿಯಿಂದ ನೂರಾರು ಎಕರೆ ಕೃಷಿ ಭೂಮಿ ನೀರಿನಲ್ಲಿ ಮುಳುಗಿಹೋಗಿದೆ..!
Vijaya Karnataka Web aquatic agricultural land the life of the peasantry is on the street
ಜಲಾವೃತವಾದ ಕೃಷಿ ಭೂಮಿ: ಕೃಷಿಕರ ಬದುಕು ಬೀದಿಗೆ


ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ತಿಪ್ಪಸಂದ್ರ ರೈಲ್ವೆ ನಿಲ್ದಾಣದ ಸಮೀಪ ರೈಲ್ವೆ ಹಳಿಗಳ ಬದಿಯಲ್ಲಿರುವ ಗುಡ್ಡೇಗೌಡನಪಾಳ್ಯ, ಗೊರವನಪಾಳ್ಯ, ಹೊಸಲಾಯ ಗ್ರಾಮದ ರೈತರ ಭತ್ತ, ಜೋಳ, ರಾಗಿ ಬೆಳೆಯುವ 30 ಎಕರೆಗೂ ಹೆಚ್ಚು ಕೃಷಿ ಭೂಮಿಗೆ ರೈಲ್ವೆ ಹಳಿಗಳ ದಿಬ್ಬದಮೇಲಿಂದ ಹರಿದುಬಂದ ಮಳೆ ನೀರು ನುಗ್ಗಿ ರೈತರ ಕೃಷಿ ಭೂಮಿ ಅಕ್ಷ ರಃ ಜಲಾವೃತವಾಗಿ ಕೆರೆಯಾಗಿದೆ.

100 ಕ್ಕೂ ಹೆಚ್ಚು ರೈತರ ಭೂಮಿ ಇದೇ ಸ್ಥಿತಿಯಲ್ಲಿ ನೀರಿನಲ್ಲಿ ಮುಳುಗಿದ್ದು, ಕೃಷಿ ಭೂಮಿಯಲ್ಲಿ ಬೇರಾವುದೇ ಚಟುವಟಿಕೆ ಮಾಡಲು ಅಸಾಧ್ಯವಾಗಿ ರೈತರ ಬದುಕೇ ಅತಂತ್ರವಾಗಿಸಿದೆ.

ಅವೈಜ್ಞಾನಿಕ ಕಾಮಗಾರಿ ಕಾರಣ: ಭೂ ಮೇಲ್ಮೈನಿಂದ 70 ಅಡಿ ಎತ್ತರಕ್ಕೆ ಮಣ್ಣು ಹಾಕಿ ಅದರಮೇಲೆ ರೈಲ್ವೆಹಳಿಗಳ ಕಾಮಗಾರಿ ಮಾಡಿದ್ದಾರೆ. ಆದರೆ ರೈಲ್ವೆ ಹಳಿ ಹಾದುಹೋಗಿರುವ ಇಕ್ಕೆಲಗಳಲ್ಲಿ ರೈತರ ಜಮೀನಿಗೆ ಮಳೆನೀರು ಹರಿದು ಹೋಗದಂತೆ ಯಾವುದೇ ಕ್ರಮಕೈಗೊಂಡಿಲ್ಲ.

ಮಾಗಡಿ ತಾಲೂಕಿನ ಸೋಲೂರು, ತಿಪ್ಪಸಂದ್ರ, ಬಗೀನಗೆರೆ ಹಾಗೂ ರಾಮನಗರ ಜಿಲ್ಲೆಯ ರೈತರ ಸಮಸ್ಯೆ ಮಾತ್ರವಲ್ಲದೆ ನೆರೆಯ ಜಿಲ್ಲೆಗಳಾದ ತುಮಕೂರು ಜಿಲ್ಲೆಯ ಕುಣಿಗಲ್‌ ತಾಲೂಕಿನ ಗೊಟ್ಟೀಕೆರೆ, ಕಗ್ಗರೆ ಮುಖ್ಯರಸ್ತೆ ಬಳಿ ಇರುವ ರೈತರ ಜಮೀನು ಬಹುತೇಕ ಇಂತಹುದೇ ಸಮಸ್ಯೆಯ ಮೂಲದಲ್ಲಿ ಮುಳಿಗಿದೆ.

ಕೃಷಿಮಾಡಿ 4 ವರ್ಷವಾಯ್ತು: ರೈಲ್ವೆ ಕಾಮಗಾರಿಯಿಂದ ಜಲಾವೃತವಾಗಿರುವ ಕೃಷಿ ಭೂಮಿಯ ರೈತರು ತಮ್ಮ ಜಮೀನಿನಲ್ಲಿ ಬೆಳೆ ಬೆಳೆದು 4 ವರ್ಷವಾಗಿದೆ. ಜೀವನಾಧರಾದ ಭೂಮಿಯೇ ನೀರುಪಾಲಾಗಿರುವಾಗ ತುತ್ತಿನ ಚೀಲ ತುಂಬಿಸಿಕೊಳ್ಳಲು ಮುಂದೇನು ಮಾಡಬೇಕು ? ಎಂದು ದಿಕ್ಕು ತೋಚದೆ ಸಮಸ್ಯೆ ಬಗೆಹರಿಸುವಂತೆ ವಿವಿಧ ಇಲಾಖೆಗಳಿಗೆ ಅಲೆದು ಸೋತಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಬರೆದು ಕೋಟ್ಟು ರೈತರ ಬದುಕೇ ಸವೆಯುತ್ತಿದ್ದರು. ಅಧಿಕಾರಿಗಳು ಮಾತ್ರ ಜಲಾವೃತವಾಗಿರುವ ಕೃಷಿ ಭೂಮಿಯ ಸಮೀಕ್ಷೆ ಮಾಡಲು ಬಾರದಿರುವುದು ಅಕಾರಿಗಳ ನಿರ್ಲಕ್ಷ ್ಯಕ್ಕೆ ಹಿಡಿದ ಕನ್ನಡಿ.
- ದೇವರಾಜು ರೈತ, ಬಗೀನಗೆರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ