ರಾಮನಗರ: ಬೆಂಗಳೂರಿನ ಎಚ್ಎಎಲ್ನಲ್ಲಿ ಮಿರಾಜ್ ಯುದ್ಧವಿಮಾನವೊಂದು ನೆಲಕ್ಕಪ್ಪಳಿಸಿ ಇಬ್ಬರು ಪೈಲಟ್ಗಳನ್ನು ಬಲಿ ಪಡೆದ ನೆನಪು ಮಾಡುವ ಮುನ್ನವೇ ರಾಮನಗರದಲ್ಲಿ ಸೇನಾ ಹೆಲಿಕಾಪ್ಟರ್ ಒಂದು ತಾಂತ್ರಿಕ ದೋಷಕ್ಕೀಡಾಗಿ ತುರ್ತು ಭೂಸ್ಪರ್ಶ ಮಾಡಿದೆ. ಆದರೆ ಈ ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ.
ಹೆಲಿಕಾಪ್ಟರ್ ಎಂಜಿನ್ನಲ್ಲಿತಾಂತ್ರಿಕ ದೋಷ ಕಂಡುಬಂದಿರುವುದು ಭೂಸ್ಪರ್ಶಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ. ರಾಮನಗರದ ಕನಕಪುರ ತಾಲೂಕಿನ ಕಗ್ಗಲಿಪುರ ಬಳಿಯ ತಟಗುಪ್ಪ ಬಳಿ ಸಾಗುತ್ತಿದ್ದಾಗ ಹೆಲಿಕಾಪ್ಟರ್ ಸಮಸ್ಯೆಗೆ ತುತ್ತಾಗಿದೆ.
ತಕ್ಷಣವೇ ಸಮಯಪ್ರಜ್ಞೆ ಮೆರೆದ ಪೈಲಟ್ಗಳು ತಟಗುಪ್ಪ ಹೊರವಲಯದ ಖಾಲಿ ಗದ್ದೆಯಲ್ಲಿ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ.
ತಾಂತ್ರಿಕ ದೋಷ ಕುರಿತು ಸೇನೆಯ ತಜ್ಞರು ಬಂದು ಪರಿಶೀಲಿಸಲಿದ್ದಾರೆ ಎನ್ನಲಾಗಿದೆ. ಸೇನಾ ಹೆಲಿಕಾಪ್ಟರ್ ಏಕಾಏಕಿ ಭೂಸ್ಪರ್ಷ ಮಾಡಿರುವುದು ಸ್ಥಳೀಯರಿಗೆ ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು.
ಹೆಲಿಕಾಪ್ಟರ್ ಎಂಜಿನ್ನಲ್ಲಿತಾಂತ್ರಿಕ ದೋಷ ಕಂಡುಬಂದಿರುವುದು ಭೂಸ್ಪರ್ಶಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ. ರಾಮನಗರದ ಕನಕಪುರ ತಾಲೂಕಿನ ಕಗ್ಗಲಿಪುರ ಬಳಿಯ ತಟಗುಪ್ಪ ಬಳಿ ಸಾಗುತ್ತಿದ್ದಾಗ ಹೆಲಿಕಾಪ್ಟರ್ ಸಮಸ್ಯೆಗೆ ತುತ್ತಾಗಿದೆ.
ತಕ್ಷಣವೇ ಸಮಯಪ್ರಜ್ಞೆ ಮೆರೆದ ಪೈಲಟ್ಗಳು ತಟಗುಪ್ಪ ಹೊರವಲಯದ ಖಾಲಿ ಗದ್ದೆಯಲ್ಲಿ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ.
ತಾಂತ್ರಿಕ ದೋಷ ಕುರಿತು ಸೇನೆಯ ತಜ್ಞರು ಬಂದು ಪರಿಶೀಲಿಸಲಿದ್ದಾರೆ ಎನ್ನಲಾಗಿದೆ. ಸೇನಾ ಹೆಲಿಕಾಪ್ಟರ್ ಏಕಾಏಕಿ ಭೂಸ್ಪರ್ಷ ಮಾಡಿರುವುದು ಸ್ಥಳೀಯರಿಗೆ ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು.