ಆ್ಯಪ್ನಗರ

ಬೇಕಾಬಿಟ್ಟಿ ವಿದ್ಯುತ್‌ ಪೂರೈಕೆ: ರೈತರ ಪ್ರತಿಭಟನೆ

ಕುದೂರು, ತಿಪ್ಪಸಂದ್ರ ಹೋಬಳಿ ವ್ಯಾಪ್ತಿಯ ಗ್ರಾಮಗಳಿಗೆ ಬೇಕಾಬಿಟ್ಟಿಯಾಗಿ ವಿದ್ಯುತ್‌ ಪೂರೈಕೆ ಮಾಡುತ್ತಿರುವುದನ್ನು ಖಂಡಿಸಿ ಮಾಗಡಿ ತಾಲೂಕು ಘಟಕದ ...

Vijaya Karnataka 12 Mar 2019, 5:00 am
ಕುದೂರು: ಕುದೂರು, ತಿಪ್ಪಸಂದ್ರ ಹೋಬಳಿ ವ್ಯಾಪ್ತಿಯ ಗ್ರಾಮಗಳಿಗೆ ಬೇಕಾಬಿಟ್ಟಿಯಾಗಿ ವಿದ್ಯುತ್‌ ಪೂರೈಕೆ ಮಾಡುತ್ತಿರುವುದನ್ನು ಖಂಡಿಸಿ ಮಾಗಡಿ ತಾಲೂಕು ಘಟಕದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಕುದೂರು ಬೆಸ್ಕಾಂ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಯಿತು.
Vijaya Karnataka Web attachment power supply farmers protest
ಬೇಕಾಬಿಟ್ಟಿ ವಿದ್ಯುತ್‌ ಪೂರೈಕೆ: ರೈತರ ಪ್ರತಿಭಟನೆ


ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಮಾಗಡಿ ತಾಲ್ಲೂಕು ಅಧ್ಯಕ್ಷ ಗೋವಿಂದರಾಜು, ಬೆಸ್ಕಾಂ ಹೊಣೆಗೇಡಿತನದಿಂದ ರೈತರು ತಾವು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಹೆಣಗಾಡುವಂತಾಗಿದೆ. ಅಸಮರ್ಪಕ ವಿದ್ಯುತ್‌ ಪೂರೈಕೆ ಬಗ್ಗೆ ಗಮನಕ್ಕೆ ತಂದರೂ ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಟಿಸಿ ಕೆಟ್ಟು ಹೋದರೆ ಅದರ ದುರಸ್ತಿಗೆ ರೈತರಿಂದ 5ರಿಂದ 6 ಸಾವಿರ ರೂ. ಹಣ ವಸೂಲಿ ಮಾಡಲಾಗುತ್ತಿದೆ ಎಂದು ದೂರಿದರು.

ಉಗ್ರ ಹೋರಾಟದ ಎಚ್ಚರಿಕೆ: ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ನಿಗದಿತ ವೇಳಾಪಟ್ಟಿಯಂತೆ ವಿದ್ಯುತ್‌ ಪೂರೈಸಬೇಕು ತಪ್ಪಿದರೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.

ಕ್ರಮದ ಭರವಸೆ: ರೈತರಿಂದ ಮನವಿ ಸ್ವೀಕರಿಸಿದ ಮಾಗಡಿ ಕಾರ್ಯನಿರ್ವಹಕ ಇಂಜಿನಿಯರ್‌ ಚಿಕ್ಕೇಗೌಡ ಅವರು, ವಿದ್ಯುತ್‌ ಸಮಸ್ಯೆಯನ್ನು ಶೀಘ್ರ ಬಗೆಹರಿಸುವುದಾಗಿ ಭರವಸೆ ನೀಡಿದರು.

ಬೆಸ್ಕಾಂ ಆಧಿಕಾರಿಗಳಾದ ಠಾಕ್ರನಾಯಕ್‌, ಸುಧಾಕರ್‌ ಕುದೂರು ಪಿಎಸೈ ಕಿರಣ್‌, ತಿಪ್ಪಸಂದ್ರ ಹೋಬಳಿ ಅಧ್ಯಕ್ಷ ನಾಗರಾಜು, ರೈತ ಸಂಘದ ಗಿರೀಶ್‌, ರಂಗಸ್ವಾಮಯ್ಯ, ಆನಂದ್‌, ಬೆಟ್ಟೇಗೌಡ, ಸಂಕೀಘಟ್ಟ ಚಂದ್ರಯ್ಯ, ನಾರಾಯಣಿಪುರ ಶಿವಣ್ಣ, ಮುನಿಸ್ವಾಮಿ, ತಾಳೇಕೆರೆ ಬೆಟ್ಟೇಗೌಡ, ಹನುಮಯ್ಯ, ಹನುಮಯ್ಯ, ಶಿವರಾಜು, ಗಂಗಪ್ಪ ಕುದೂರು ಹಾಗೂ ತಿಪ್ಪಸಂದ್ರ ವ್ಯಾಪ್ತಿಯ ರೈತರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ