ಆ್ಯಪ್ನಗರ

ಫಿಲ್ಟರ್‌ ಮರಳು ಅಡ್ಡೆ ಮೇಲೆ ದಾಳಿ

ತಾಲೂಕಿನ ಕಣ್ವಾ ಹಾಗೂ ಶಿಂಷಾನದಿ ಪಾತ್ರದಲ್ಲಿರುವ ಫಿಲ್ಟರ್‌ ಮರಳು ಅಡ್ಡೆಗಳ ಮೇಲೆ ಅಕ್ಕೂರು ಪೊಲೀಸರು ದಾಳಿ ನಡೆಸಿ ಅಡ್ಡೆಗಳನ್ನು ನಾಶಪಡಿಸಿದ್ದಾರೆ.

Vijaya Karnataka Web 25 May 2019, 5:00 am
ಕಣ್ವಾ, ಶಿಂಷಾನದಿ ಪಾತ್ರದಲ್ಲಿ ಅಕ್ರಮ ಮರಳು ಸಾಗಣೆ
Vijaya Karnataka Web attack on illegal filter sand area
ಫಿಲ್ಟರ್‌ ಮರಳು ಅಡ್ಡೆ ಮೇಲೆ ದಾಳಿ


ಚನ್ನಪಟ್ಟಣ: ತಾಲೂಕಿನ ಕಣ್ವಾ ಹಾಗೂ ಶಿಂಷಾನದಿ ಪಾತ್ರದಲ್ಲಿರುವ ಫಿಲ್ಟರ್‌ ಮರಳು ಅಡ್ಡೆಗಳ ಮೇಲೆ ಅಕ್ಕೂರು ಪೊಲೀಸರು ದಾಳಿ ನಡೆಸಿ ಅಡ್ಡೆಗಳನ್ನು ನಾಶಪಡಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಮೇಶ್‌, ಪೊಲೀಸ್‌ ಉಪವಿಭಾಗಾಧಿಕಾರಿ ಟಿ.ಮಲ್ಲೇಶ್‌ ಹಾಗೂ ಗ್ರಾಮಾಂತರ ವೃತ್ತ ನಿರೀಕ್ಷ ಕ ಮಂಜುನಾಥ್‌ ಮಾರ್ಗದರ್ಶನದಲ್ಲಿ ಅಕ್ಕೂರು ಪೊಲೀಸ್‌ ಠಾಣೆಯ ಪಿಎಸೈ ಭಾಸ್ಕರ್‌, ಮುಖ್ಯ ಪೇದೆ ಪ್ರಸನ್ನ, ಸಿಬ್ಬಂದಿ ಹೊಂಬಾಳ, ಶೇಖರ್‌, ಅಯ್ಯನಗೌಡ, ಚಾಲಕ ಪ್ರಕಾಶ್‌ ದಾಳಿ ಮಾಡಿದ್ದಾರೆ.

ತೆರೆಮರೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಣೆ, ಮಣ್ಣಿನಿಂದ ಮರಳು ತಯಾರು ಮಾಡುವ ಮರಳು ಫಿಲ್ಟರ್‌ ಅಡ್ಡೆಗಳು, ನದಿಯಲ್ಲಿ ಬೋಟುಗಳ ಮುಖಾಂತರ ಮರಳು ತಗೆಯುವುದರ ಬಗ್ಗೆ ಜಾಗೃತರಾಗಿರುವ ಪೊಲೀಸರು ಅಲಾರ್ಟ್‌ ಆಗಿದ್ದು, ಶಿಂಷಾನದಿ ಪಾತ್ರದಲ್ಲಿ ಫಿಲ್ಟರ್‌ ಮರಳು ಅಡ್ಡೆಗಳ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿ, ಈ ದಾಳಿ ನಡೆಸಲಾಗಿದೆ. ಕಣ್ವಾನದಿ ಪಾತ್ರದ ಕಾಡಂಕನಹಳ್ಳಿ, ಎಲೇತೋಟದಹಳ್ಳಿ, ಶಿಂಷಾನದಿ ಪಾತ್ರದ ಗಿಜಗದಾಸನದೊಡ್ಡಿಯಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಫಿಲ್ಟರ್‌ ಅಡ್ಡೆಗಳನ್ನು ಜೆಸಿಬಿ ಮುಖಾಂತರ ಹೊಡೆದು ನಾಶಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ