ಆ್ಯಪ್ನಗರ

ಜಿಲ್ಲೆಯ ಹಲವೆಡೆ ಅಕ್ರಮ ಫಿಲ್ಟರ್‌ ಮರಳು ಅಡ್ಡೆಗಳ ಮೇಲೆ ದಾಳಿ

ಚನ್ನಪಟ್ಟಣ ತಾಲೂಕಿನ ಎಲೆತೋಟದಹಳ್ಳಿ, ಕಾಡಂಕನಹಳ್ಳಿ, ಗಿಜಗನದಾಸನಹಳ್ಳಿ, ಕೊಂಡಾಪುರ, ಮಾದಾಪುರ ಮತ್ತು ಕಣ್ವ ನದಿಪಾತ್ರದ ಸರ್ವೆ ಜಮೀನುಗಳಲ್ಲಿ ಅಕ್ರಮ ಮರಳು ಫಿಲ್ಟರ್‌ಗಳ ಮೇಲೆ ದಾಳಿ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು 15ಕ್ಕೂ ಹೆಚ್ಚು ಫಿಲ್ಟರ್‌ ಮರಳು ತೊಟ್ಟಿಗಳನ್ನು ನಾಶಪಡಿಸಿದ್ದಾರೆ.

Vijaya Karnataka 15 Feb 2019, 5:00 am
ರಾಮನಗರ/ ಹಾರೋಹಳ್ಳಿ: ಚನ್ನಪಟ್ಟಣ ತಾಲೂಕಿನ ಎಲೆತೋಟದಹಳ್ಳಿ, ಕಾಡಂಕನಹಳ್ಳಿ, ಗಿಜಗನದಾಸನಹಳ್ಳಿ, ಕೊಂಡಾಪುರ, ಮಾದಾಪುರ ಮತ್ತು ಕಣ್ವ ನದಿಪಾತ್ರದ ಸರ್ವೆ ಜಮೀನುಗಳಲ್ಲಿ ಅಕ್ರಮ ಮರಳು ಫಿಲ್ಟರ್‌ಗಳ ಮೇಲೆ ದಾಳಿ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು 15ಕ್ಕೂ ಹೆಚ್ಚು ಫಿಲ್ಟರ್‌ ಮರಳು ತೊಟ್ಟಿಗಳನ್ನು ನಾಶಪಡಿಸಿದ್ದಾರೆ.
Vijaya Karnataka Web attacks on illegal filter sands across the district
ಜಿಲ್ಲೆಯ ಹಲವೆಡೆ ಅಕ್ರಮ ಫಿಲ್ಟರ್‌ ಮರಳು ಅಡ್ಡೆಗಳ ಮೇಲೆ ದಾಳಿ


ಈ ವೇಳೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಡಾ.ಲಕ್ಷ ್ಮಮ್ಮ ಮಾತನಾಡಿ, ಅಕ್ರಮ ಮರಳು ತೊಟ್ಟಿಗಳು ಪತ್ತೆಯಾದ ಸಂಬಂಧಪಟ್ಟ ಜಮೀನುಗಳ ಪಟ್ಟಿದಾರರ ವಿಳಾಸ ಪತ್ತೆ ಹಚ್ಚಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ 8 ಕಡೆ ಚೆಕ್‌ಪೋಸ್ಟ್‌ ನಿರ್ಮಾಣ ಮಾಡಿ ಹೋಮ್‌ಗಾರ್ಡ್‌ಗಳನ್ನು 3 ಪಾಳಿಗಳಲ್ಲಿ ಕಾರ್ಯ ನಿರ್ವಹಿಸಲು ನಿಯೋಜನೆಗೊಳಿಸುವಂತೆ ಪೊಲೀಸ್‌ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ವಿಜಿಲೆನ್ಸ್‌ ತಂಡ ರಚನೆ:

ಚನ್ನಪಟ್ಟಣ ತಾಲೂಕಿನಲ್ಲಿ ಅಕ್ರಮ ಮರಳು ಸಾಗಣೆ ತಡೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷ ತೆಯ ಟಾಸ್ಕ್‌ ಫೋರ್ಸ್‌ನಿಂದ ವಿಜಿಲೆನ್ಸ್‌ ತಂಡವನ್ನು ರಚನೆ ಮಾಡಿದ್ದಾರೆ. ಇದರಲ್ಲಿ ಭೂವಿಜ್ಞಾನಿ, ಪಿಡಿಒ, ಪೊಲೀಸ್‌ ಮುಂತಾದ ಇಲಾಖೆಗಳ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ ಎಂದು ಹೇಳಿದರು.

ಪ್ರಾಕೃತಿಕ ನಷ್ಟದ ಬಗ್ಗೆ ಅರಿವು:

ಹಾರೋಹಳ್ಳಿ, ಮರಳವಾಡಿ ಹೋಬಳಿಯ ಕಗ್ಗಲಹಳ್ಳಿ, ಗಬಾಡಿ, ಗೋದೂರು, ತೋಕಸಂದ್ರ, ಮರಸರಹಳ್ಳಿ ಕಡಸಿಕೊಪ್ಪ, ಸಿದ್ದೇನಹಳ್ಳಿ,ಪಿಚ್ಚನಕೆರೆ ಗ್ರಾಮಗಳಲ್ಲಿ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಲಾಗಿದೆ. ಜತೆಗೆ ಗ್ರಾಮಗಳಲ್ಲಿ ಗ್ರಾಮಸ್ಥರ ಸಭೆ ನಡೆಸಿ ಸಾರ್ವಜನಿಕರಲ್ಲಿ ಮರಳು ಗಣಿಗಾರಿಕೆಯಿಂದ ಉಂಟಾಗುವ ಪ್ರಕೃತಿ ನಾಶದ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಹೇಳಿದರು.

ಹಾರೋಹಳ್ಳಿ ಹೋಬಳಿಯ ಸಿಂಗಸಂದ್ರ ಗ್ರಾಮದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಒಂದು ಜೆಸಿಬಿ ಮತ್ತು ಮತ್ತು ಲಾರಿಯನ್ನು ವಶಪಡಿಸಿಕೊಂಡು ಕನಕಪುರ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪಿಸಿಆರ್‌ ದಾಖಲಿಸಿದೆ ಎಂದರು.

ಕಾರ್ಯಾಚರಣೆಯಲ್ಲಿ ತಾಲೂಕು ಭೂವಿಜ್ಞಾನಿ ರಾಮಲಿಂಗಯ್ಯ ಪೊಲೀಸ್‌ ಇಲಾಖೆ, ಕಂದಾಯ ಇಲಾಖೆ ಸಿಬ್ಬಂದಿ ಮುಂತಾದವರು ಭಾಗವಹಿಸಿದ್ದರು.

-----

ಜಿಲ್ಲೆಯಲ್ಲಿ ನಡೆಯುವ ಅಕ್ರಮ ಮರಳು ಗಣಿಗಾರಿಕೆ ತಡೆಗೆ ಜನರು ಅಧಿಕಾರಿಗಳ ಜತೆ ಸಹಕರಿಸಬೇಕು. ಕಣ್ವ ನದಿ ಪಾತ್ರ ಸಹಿತ ಚನ್ನಪಟ್ಟಣ ಹಾಗೂ ಕನಕಪುರ ತಾಲೂಕುಗಳ ಹಲವೆಡೆ ಈಗಾಗಲೇ ಅಕ್ರಮ ಫಿಲ್ಟರ್‌ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಲಾಗಿದೆ. ದಂಧೆಯಲ್ಲಿ ತೊಡಗಿದ್ದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

- ಡಾ.ಲಕ್ಷ್ಮಮ್ಮ, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ