ಆ್ಯಪ್ನಗರ

ದರೋಡೆಗೆ ಯತ್ನ, ವಿಫಲ

ತಾಲೂಕಿನ ಸಂತೆಮೊಗಳ್ಳಿ ಅಡ್ಡರಸ್ತೆಯಲ್ಲಿದರೋಡೆಕೋರರ ಗುಂಪು ವಕೀಲರ ಕಾರನ್ನು ಅಡ್ಡಹಾಕಿ ದರೋಡೆಗೆ ಯತ್ನಿಸಿ, ವಿಫಲವಾಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ...

Vijaya Karnataka 21 Sep 2019, 3:15 pm
ಚನ್ನಪಟ್ಟಣ: ತಾಲೂಕಿನ ಸಂತೆಮೊಗಳ್ಳಿ ಅಡ್ಡರಸ್ತೆಯಲ್ಲಿದರೋಡೆಕೋರರ ಗುಂಪು ವಕೀಲರ ಕಾರನ್ನು ಅಡ್ಡಹಾಕಿ ದರೋಡೆಗೆ ಯತ್ನಿಸಿ, ವಿಫಲವಾಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
Vijaya Karnataka Web attempted robbery unsuccessful
ದರೋಡೆಗೆ ಯತ್ನ, ವಿಫಲ


ದರೋಡೆ ಯತ್ನಕ್ಕೆ ಒಳಗಾಗಿದ್ದ ವಕೀಲರು ವಸಂತ್‌ಕುಮಾರ್‌ ಎಂದು ತಿಳಿದು ಬಂದಿದೆ. ಇವರು ತಮ್ಮ ಕಾರಿನಲ್ಲಿಯಲಿಯೂರು ಗ್ರಾಮಕ್ಕೆ ತೆರಳುವಾಗ ಸಂತೆಮೊಗಳ್ಳಿಯ ಅಡ್ಡರಸ್ತೆಯ ಪಕ್ಕದ ಹಲಗೂರು ರಸ್ತೆಯಲ್ಲಿಮೂರರಿಂದ ನಾಲ್ಕು ಮಂದಿ ಯುವಕರು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿಕೊಂಡು ಇವರ ಕಾರನ್ನು ಅಡ್ಡ ಹಾಕಲು ಯತ್ನಿಸಿ, ಮಾರಕ ಆಯುಧಗಳಿಂದ ಬೀಸಿದ್ದಾರೆ. ಕಾರನ್ನು ಅತಿ ವೇಗವಾಗಿ ಚಾಲನೆ ಮಾಡಿದ್ದರಿಂದ ಮುಂದಾಗುವ ಅನಾಹುತ ತಪ್ಪಿದೆ. ತಕ್ಷಣ ಅಕ್ಕೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಗ್ರಾಮಾಂತರ ವೃತ್ತ ನಿರೀಕ್ಷಕ ವಸಂತ್‌ ಹಾಗೂ ಅಕ್ಕೂರು ಪೊಲೀಸರು, ವಕೀಲರಿಂದ ಮಾಹಿತಿ ಪಡೆದು ಘಟನೆ ನಡೆದ ಸ್ಥಳದಲ್ಲಿದರೋಡೆಕೋರರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.

ದರೋಡೆಕೋರರು ಸುಮಾರು 20 ರಿಂದ 25 ವರ್ಷದ ಒಳಗಿನ ಯುವಕರಾಗಿದ್ದು, ನಿಕ್ಕರ್‌, ಬನಿಯನ್‌ ಹಾಕಿ ಮುಖಕ್ಕೆ ಬಟ್ಟೆಸುತ್ತಿದ್ದರೆನ್ನಲಾಗಿದೆ. ಪ್ರಕರಣದ ಬಗ್ಗೆ ಅಕ್ಕೂರು ಪೊಲೀಸ್‌ ಠಾಣೆಯಲ್ಲಿದೂರು ದಾಖಲಾಗಿದ್ದು, ದರೋಡೆಕೋರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ