ಆ್ಯಪ್ನಗರ

ರೋಟಾ ವೈರಸ್‌ ಲಸಿಕೆಯ ಕುರಿತು ಅರಿವು: ಎಡಿಸಿ ವಿಜಯ್‌

ಜಿಲ್ಲೆಯ ಪ್ರತೀ ಹಳ್ಳಿ ಹಾಗೂ ನಗರ ಪ್ರದೇಶಗಳಲ್ಲಿ ರೋಟಾ ವೈರಸ್‌ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ, 6 ರಿಂದ 16 ವಯಸ್ಸಿನ ಪ್ರತೀ ಮಕ್ಕಳು ಲಸಿಕೆ ಹಾಕಿಸಲು ತಪ್ಪದೇ ಕ್ರಮ ವಹಿಸುವಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ. ವಿಜಯ್‌ ತಿಳಿಸಿದರು.

Vijaya Karnataka 28 Jul 2019, 5:00 am
ರಾಮನಗರ: ಜಿಲ್ಲೆಯ ಪ್ರತೀ ಹಳ್ಳಿ ಹಾಗೂ ನಗರ ಪ್ರದೇಶಗಳಲ್ಲಿ ರೋಟಾ ವೈರಸ್‌ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ, 6 ರಿಂದ 16 ವಯಸ್ಸಿನ ಪ್ರತೀ ಮಕ್ಕಳು ಲಸಿಕೆ ಹಾಕಿಸಲು ತಪ್ಪದೇ ಕ್ರಮ ವಹಿಸುವಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ. ವಿಜಯ್‌ ತಿಳಿಸಿದರು.
Vijaya Karnataka Web awareness on rota virus vaccine adc vijay
ರೋಟಾ ವೈರಸ್‌ ಲಸಿಕೆಯ ಕುರಿತು ಅರಿವು: ಎಡಿಸಿ ವಿಜಯ್‌


ರೋಟಾ ವೈರಸ್‌ ಲಸಿಕೆಯ ಕುರಿತು ಜಿಲ್ಲೆಯ ಪ್ರತೀ ಇಲಾಖೆಗಳು ಯಾವ ರೀತಿಯ ಪಾತ್ರ ವಹಿಸಬೇಕು ಎಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು, ರೋಟಾ ವೈರಸ್‌ ಕುರಿತು ಜಿಲ್ಲೆ, ತಾಲೂಕು ವåಟ್ಟದ ಅಧಿಕಾರಿಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ಒದಗಿಸಿ 5 ವರ್ಷದಲ್ಲಿ 7 ಬಾರಿ ಈ ಲಸಿಕೆಯನ್ನು ಪ್ರತೀ ಪೋಷಕರು ಮಕ್ಕಳಿಗೆ ಹಾಕಿಸುವಂತೆ ಕ್ರಮ ವಹಿಸಿ ಮೌಖಿಕವಾಗಿ ತಿಳಿಸಿದರು.

ಟಿಡಿ ಲಸಿಕೆ ಮತ್ತು ರೋಟಾ ವೈರಸ್‌ ಲಸಿಕೆಯನ್ನು ಹಾಕಿಸಲು ಸಾರ್ವಜನಿಕರ ಮನವೊಲಿಸುವಂತೆ ಆಶಾ ಕಾರ್ಯಕರ್ತೆಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹಿತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಮಕ್ಕಳಲ್ಲಿ ಲಸಿಕೆ ಅರಿವು: ರೋಟಾ ವೈರಸ್‌ ಲಸಿಕೆಯ ಪ್ರಯೋಜನದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಸರಕಾರಿ, ಸರಕಾರೇತರ ಮತ್ತು ಖಾಸಗಿ ಶಾಲೆಯಲ್ಲಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಪೋಷಕರ ಮನವೊಲಿಕೆ: ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯ ಸಭೆಗಳನ್ನು ನಡೆಸಿ ರೋಟಾ ವೈರಸ್‌ ಲಸಿಕೆಯ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಿ, ಯಾವುದೇ ಕುಟುಂಬ ಲಸಿಕೆಯನ್ನು ನಿರಾಕರಿಸದಂತೆ ಪೋಷಕರ ಮನವೊಲಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಗಳಿಗೆ ಸೂಚಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಅಮರ್‌ನಾಥ್‌, ಆಯುಷ್‌ ಇಲಾಖೆಯ ಅಧಿಕಾರಿ ಡಾ.ರಾಜಲಕ್ಷ್ಮೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ದಿಲೀಪ್‌, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಡಾ.ದಕ್ಷಿಣಮೂರ್ತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ