ಆ್ಯಪ್ನಗರ

ಕಾನೂನು ಬಾಹಿರ ಜಲ್ಲಿ ಕ್ರಷರ್‌ಗಳ ಬಂದ್‌

ಕಾನೂನು ಬಾಹಿರ ಜಲ್ಲಿ ಕ್ರಷರ್‌ಗಳನ್ನು ಮುಲಾಜಿಲ್ಲದೆ ಬಂದ್‌ ಮಾಡಲಾಗುವುದು ಹಾಗೂ ಅದರ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ರಾಜಶೇಖರ.ಬಿ ಪಾಟೀಲ ತಿಳಿಸಿದರು.

Vijaya Karnataka 20 Jul 2018, 3:47 pm
ಬಿಡದಿ: ಕಾನೂನು ಬಾಹಿರ ಜಲ್ಲಿ ಕ್ರಷರ್‌ಗಳನ್ನು ಮುಲಾಜಿಲ್ಲದೆ ಬಂದ್‌ ಮಾಡಲಾಗುವುದು ಹಾಗೂ ಅದರ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ರಾಜಶೇಖರ.ಬಿ ಪಾಟೀಲ ತಿಳಿಸಿದರು.
Vijaya Karnataka Web banda de trituradoras de grava ilegal
ಕಾನೂನು ಬಾಹಿರ ಜಲ್ಲಿ ಕ್ರಷರ್‌ಗಳ ಬಂದ್‌


ಬಿಡದಿ ಸಮೀಪದ ಎಂ.ಜಿ.ಪಾಳ್ಯದ ಸಮೀಪ ಇರುವ ರೋಬೊ ಸಿಲಿಕಾನ್‌ ಕ್ರಷರ್‌ಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿ, ''ಕ್ರಷರ್‌ನಲ್ಲಿ ಯಾವ ಪ್ರಮಾಣದಲ್ಲಿ ಕಲ್ಲು ಮತ್ತು ಜಲ್ಲಿಯನ್ನ ತಯಾರು ಮಾಡಲಾಗುತ್ತಿದೆ ಎಂಬ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಲಾಗುತ್ತಿದೆ. ರಾಮನಗರ ಜಿಲ್ಲೆಯಲ್ಲಿ ಒಟ್ಟು 26 ಕ್ರಷರ್‌ಗಳು ಕಾನೂನು ಪ್ರಕಾರವಾಗಿ ನಡೆಯುತ್ತಿದ್ದು, ಈ ನಡುವೆ ಕಾನೂನು ಬಾಹಿರವಾಗಿ ಯಾವುದೇ ಕ್ರಷರ್‌ ಇದ್ದರು ಸಹ ಅಧಿಕಾರಿಗಳಿಂದ ಮಾಹಿತಿ ಪಡೆದು ಅಂತಹವುಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು,'' ಎಂದು ಸ್ಪಷ್ಟಪಡಿಸಿದರು.

''ಸರಕಾರದ ಜತೆಗೆ ಒಪ್ಪಂದ ಮಾಡಿಕೊಂಡಿರುವ ರೋಬೊ ಸಿಲಿಕಾನ್‌ ಕ್ರಷರ್‌ ಸಂಸ್ಥೆಯಲ್ಲಿ ಎಷ್ಟು ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಸ್ಯಾಂಡ್‌ ಯಾವ ರೀತಿಯಿದೆ? ಯಾವ ರೀತಿ ಇರಬೇಕು ಎಂಬುದನ್ನು ಪರಿಶೀಲಿಸಲಾಗಿದೆ. ಮೊದಲ ಹಂತದಲ್ಲಿ ಬರುವ ಸ್ಯಾಂಡ್‌ ಕಟ್ಟಡ ನಿರ್ಮಾಣಕ್ಕೆ ಉಪಯೋಗಿಸಲಾಗುತ್ತಿದೆ. ಮತ್ತೊಂದು ಗುಣಮಟ್ಟದ ಎಂ.ಸ್ಯಾಂಡ್‌ ಪ್ಲಾಸ್ಟರ್‌ ಸಲುವಾಗಿ ಉಪಯೋಗಿಸಲಾಗುತ್ತಿದೆ,'' ಎಂದು ತಿಳಿಸಿದರು.

''ಬಿಡದಿ ಭಾಗದಲ್ಲಿ ಸುಮಾರು 26 ಕ್ರಷರ್‌ಗಳಿದ್ದು, ಉತ್ತಮ ಗುಣಮಟ್ಟದ 8 ಎಂ-ಸ್ಯಾಂಡ್‌ ಘಟಕಗಳಿವೆ. ಬೀದರ್‌ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಇಷ್ಟು ಪ್ರಮಾಣದ ಯುನಿಟ್‌ಗಳಿಲ್ಲ. ಇದರ ಬಗ್ಗೆ ಜನರಿಗೆ ಮಾಹಿತಿ ಅಗತ್ಯವಿದೆ. ಹಳೆಯ ಹಾಗೂ ಹೊಸ ಸ್ಯಾಂಡ್‌ಗಳಲ್ಲಿರುವ ವ್ಯತ್ಯಾಸದ ಬಗ್ಗೆ ಜನರಿಗೆ ತಿಳಿಸಿಕೊಡಬೇಕಾಗಿದೆ. ಹಳೇ ಮೈಸೂರು ಭಾಗದ ಜನರು ಎಂ.ಸ್ಯಾಂಡ್‌ ಉಪಯೋಗಿಸುತ್ತಿದ್ದು, ಸ್ವಲ್ಪ ಜನ ಮಾತ್ರ ಪ್ಲಾಸ್ಟರ್‌ ಸ್ಯಾಂಡ್‌ಗಳನ್ನು ಉಪಯೋಗಿಸುತ್ತಿದ್ದಾರೆ,'' ಎಂದು ಸಚಿವರು ತಿಳಿಸಿದರು.

ಮೈಸೂರು ಮಿನರಲ್ಸ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ನವೀನ್‌ ರಾಜ್‌ ಸಿಂಗ್‌, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಲಕ್ಷ ್ಮಮ್ಮ ಹಾಗೂ ಅಧಿಕಾರಿಗಳು, ಸಿಬ್ಬಂದಿ ಹಾಗೂ ಎಂ.ಎಸ್‌.ಐ.ಎಲ್‌ ಗೊಡೊನ್‌ನ ಸಿಬ್ಬಂದಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ