ಆ್ಯಪ್ನಗರ

ನಾಡಪ್ರಭು ಕೆಂಪೇಗೌಡ ಸ್ಮಾರಕ ಅಭಿವೃದ್ಧಿಗೆ ಡಿಸಿಎಂ ಪಣ: ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವತ್ಥ್ ನಾರಾಯಣ್

ಕೆಂಪೇಗೌಡರು ಕೇವಲ ಬಿಬಿಎಂಪಿಗೆ ಮಾತ್ರ ಸೀಮಿತಗೊಳಿಸಬಾರದು. ನಾಡಪ್ರಭುವಿನ ನೆನಪನ್ನು ಮುಂದಿನ ಪೀಳಿಗೆಗೆ ಉಳಿಸಲು ಅವರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ಅಗತ್ಯವಿದೆ - ಅಶ್ವತ್ಥ್ ನಾರಾಯಣ್, ಡಿಸಿಎಂ

Vijaya Karnataka 20 Oct 2019, 6:00 pm
ಮಾಗಡಿ (ಬೆಂಗಳೂರು ಗ್ರಾಮಾಂತರ) : ನಾಡಪ್ರಭು ಕೆಂಪೇಗೌಡರ ಸ್ಮಾರಕವನ್ನು ದೇಶಕ್ಕೆ ಮಾದರಿಯೆನಿಸುವ ರೀತಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್‌ ಭರವಸೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಮಾಗಡಿಯ ತಿಪ್ಪಸಂದ್ರ ಹೋಬಳಿಯ ಕೆಂಪಾಪುರ ಗ್ರಾಮಕ್ಕೆ ಭೇಟಿ ನೀಡಿದ್ದ ಅಶ್ವತ್ಥ್ ನಾರಾಯಣ್‌, ನಾಡಪ್ರಭುವಿನ ಸಮಾಧಿ ಬಗ್ಗೆ ಸರಕಾರದ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆಗೆ ಮುಂದಾಗಿದ್ದ ಕೆಂಪಾಪುರದ ಜನತೆಗೆ ಆಶ್ವಾಸನೆ ನೀಡಿದರು.
Vijaya Karnataka Web kempe gowda


ವೈರಲ್ ವಿಡಿಯೋ: 'ಪುಟಾಣಿ ಫಿಟ್ನೆಸ್ ಗುರು' ಸ್ಟೈಲ್‌ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ..!

ಕೆಂಪೇಗೌಡರ ಹೆಸರೇ ಒಂದು ಚೈತನ್ಯ ಶಕ್ತಿ. ಕಲೆ, ಸಾಹಿತ್ಯ, ಜನಪದ ಹಾಗೂ ಈ ನಾಡಿನ ನೀರಾವರಿ ಯೋಜನೆಗಳಿಗೆ ಕೆಂಪೇಗೌಡರು ನೀಡಿರುವ ಕಾಣಿಕೆ ಅವಿಸ್ಮರಣೀಯ. ಆದ್ದರಿಂದ ಕೆಂಪೇಗೌಡರ ಸ್ಮಾರಕದ ಅಭಿವೃದ್ಧಿ ಕುರಿತು ಸರಕಾರ ಹಾಗೂ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಜತೆ ಮಾತನಾಡಿ ಯೋಜನೆಯ ನೀಲನಕ್ಷೆ ಸಿದ್ದಪಡಿಸುವುದಾಗಿ ತಿಳಿಸಿದರು.

ಕುತಂತ್ರಿ ಪಾಕ್ ವಿರುದ್ಧ ಗುಂಡಿನ ಮಳೆಗರೆದ ಭಾರತ! ಗಡಿಯಲ್ಲಿದ್ದ ಉಗ್ರರ ಕ್ಯಾಂಪ್‌ ಉಡೀಸ್

ಬಿಬಿಎಂಪಿಗೆ ಸೀಮಿತವಲ್ಲ:

ಕೆಂಪೇಗೌಡರು ಕೇವಲ ಬೆಂಗಳೂರಿನ ಮಹಾನಗರ ಪಾಲಿಕೆ (ಬಿಬಿಎಂಪಿಗೆ) ಮಾತ್ರ ಸೀಮಿತಗೊಳಿಸಬಾರದು. ಕೆಂಪೇಗೌಡರು ಈ ನಾಡಿನ ಆಸ್ತಿ, ಕೆಂಪೇಗೌಡರ ಜಯಂತಿಯನ್ನು ಬಿಬಿಎಂಪಿ ಮಾತ್ರವಲ್ಲದೇ, ರಾಜ್ಯ ಸರಕಾರವೂ ಆಚರಿಸಲು ನಿರ್ಧರಿಸಿದೆ. ಆದ್ದರಿಂದ, ನಾಡಪ್ರಭುವಿನ ನೆನಪನ್ನು ಮುಂದಿನ ಪೀಳಿಗೆಗೆ ಉಳಿಸಲು ಅವರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ಅಗತ್ಯವಿದೆ ಎಂದರು.

ಕಂಗೊಳಿಸಿದ ಸ್ಮಾರಕ:

ಡಿಸಿಎಂ ಭೇಟಿ ಹಿನ್ನೆಲೆಯಲ್ಲಿ ಕೆಂಪೇಗೌಡರ ಸಮಾಧಿಯನ್ನು ಲಕಲಕ ಹೊಳೆಯುವಂತೆ ತೊಳೆದು, ನಾನಾ ರೀತಿಯ ಹೂವುಗಳಿಂದ ಅಲಂಕರಿಸಲಾಗಿತ್ತು. ಈ ಮೊದಲು ಕೆಂಪೇಗೌಡರ ಜಯಂತಿಯಂದು ಮಾತ್ರ ಸಮಾಧಿಯನ್ನು ಸಿಂಗರಿಸಲಾಗುತ್ತಿತ್ತು. ಸ್ಮಾರಕಕ್ಕೆ ಡಿಸಿಎಂ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿ ಜೈಕಾರ ಮೊಳಗಿಸಿದರು.

ಪಾಕಿಸ್ತಾನ ಸೇನೆಯ ಹೇಡಿ ಕೃತ್ಯ! ರಾತ್ರೋರಾತ್ರಿ ಜನವಸತಿ ಪ್ರದೇಶಗಳ ಮೇಲೆ ಗುಂಡಿನ ದಾಳಿ

ತಣ್ಣಗಾದ ಪ್ರತಿಭಟನೆ

ಕೆಂಪೇಗೌಡರ ಸಮಾಧಿಯನ್ನು ನಿರ್ಲಕ್ಷಿಸಲಾಗುತ್ತಿರುವ ಬಗ್ಗೆ ಡಿಸಿಎಂಗೆ ಪ್ರತಿಭಟನೆ ಬಿಸಿ ಮುಟ್ಟಿಸಲು ಗ್ರಾಮಸ್ಥರು ಸಿದ್ದತೆ ಮಾಡಿಕೊಂಡಿದ್ದರು. ಸಮಾಧಿಗೆ ಭೇಟಿ ನೀಡದಂತೆ ಅಶ್ವತ್ಥ್ ನಾರಾಯಣ್‌ ಅವರನ್ನು ತಡೆಯಲೂ ಉದ್ದೇಶಿಸಲಾಗಿತ್ತು. ಈ ಸುದ್ದಿ ತಿಳಿದು ಜಾಗೃತರಾದ ಪೊಲೀಸರು, ಸ್ಮಾರಕದ ಮುಂದೆ ಹಾಗೂ ಡಿಸಿಎಂ ಸಾಗುವ ಹಾದಿಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದಲ್ಲದೇ, ಗ್ರಾಮದ ಮುಖಂಡರೊಂದಿಗೆ ಮಾತುಕತೆ ನಡೆಸಿ, ಅವರ ಸಿಟ್ಟನ್ನು ತಣ್ಣಗಾಗಿಸುವಲ್ಲಿ ಯಶಸ್ವಿಯಾದರು.

ದೊಡ್ಡ ಮಟ್ಟದ ಸಮರಾಭ್ಯಾಸಕ್ಕೆ ಸಜ್ಜಾಗಿದೆ ನೌಕಾಪಡೆ: ಅರಬ್ಬಿ ಸಮುದ್ರದಲ್ಲಿ ಯುದ್ಧ ನೌಕೆಗಳ ಆರ್ಭಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ