ಆ್ಯಪ್ನಗರ

ಮಹಿಳೆಯ ಬರ್ಬರ ಹತ್ಯೆ; ಆರೋಪಿಗಳು ಪರಾರಿ

ಹಾರೋಹಳ್ಳಿ (ಕನಕಪುರ ತಾ.): ಮನೆಯಲ್ಲಿದ್ದ ಮಹಿಳೆಯೊಬ್ಬರ ಮೇಲೆ ಚಾಕುವಿನಿಂದ ಆರೇಳು ಬಾರಿ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಲಕ್ಷ್ಮಿಪುರದ ಅನ್ನಪೂರ್ಣೇಶ್ವರಿ ಲೇಔಟ್‌ನಲ್ಲಿ ನಡೆದಿದೆ.

Vijaya Karnataka 5 Jul 2019, 5:00 am
ಹಾರೋಹಳ್ಳಿ (ಕನಕಪುರ ತಾ.): ಮನೆಯಲ್ಲಿದ್ದ ಮಹಿಳೆಯೊಬ್ಬರ ಮೇಲೆ ಚಾಕುವಿನಿಂದ ಆರೇಳು ಬಾರಿ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಲಕ್ಷ್ಮಿಪುರದ ಅನ್ನಪೂರ್ಣೇಶ್ವರಿ ಲೇಔಟ್‌ನಲ್ಲಿ ನಡೆದಿದೆ.
Vijaya Karnataka Web barbaras murder of a woman the accused fled
ಮಹಿಳೆಯ ಬರ್ಬರ ಹತ್ಯೆ; ಆರೋಪಿಗಳು ಪರಾರಿ


ವಡೇರಹಳ್ಳಿ ಗ್ರಾಮದ ಗಾಯತ್ರಿ (30) ಹತ್ಯೆಯಾದ ಮಹಿಳೆ. ಕೆಂಗೇರಿ ಸಮೀಪದ ಲಕ್ಷ್ಮಿಪುರದ ಕ್ಯಾಂಟರ್‌ ಚಾಲಕ ದಿನೇಶ್‌ ಎಂಬಾತನೊಂದಿಗೆ ಕಳೆದ 12 ವರ್ಷಗಳ ಹಿಂದೆ ವಿವಾಹವಾಗಿತ್ತು. 4ನೇ ಮತ್ತು 5ನೇ ತರಗತಿ ಕಲಿಯುವ ಎರಡು ಗಂಡು ಮಕ್ಕಳಿದ್ದಾರೆ. ಬುಧವಾರ ಬೆಳಗ್ಗೆ ಎಂದಿನಂತೆ ಗಾಯತ್ರಿಯವರ ಮನೆಯಿಂದ ಗಂಡ ಬೆಳಗ್ಗೆ ಕೆಲಸಕ್ಕೆ ತೆರಳಿದ್ದಾರೆ. ಇಬ್ಬರು ಮಕ್ಕಳೂ ಸಹ ಶಾಲೆಗೆ ಹೋಗಿದ್ದಾರೆ. ಸಂಜೆ ಶಾಲಾಮಕ್ಕಳು ಮನೆಗೆ ಹಿಂದಿರುಗಿ ಬಂದು ನೋಡಿದಾಗ ತಮ್ಮ ತಾಯಿ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡ ಮಕ್ಕಳಿಬ್ಬರು ಕೂಡಲೇ ತಮ್ಮ ತಂದೆಗೆ ವಿಷಯ ತಿಳಿಸುತ್ತಾರೆ.

ತುರ್ತಾಗಿ ಮನೆಗೆ ಬಂದ ಗಂಡ ಘಟನೆಯನ್ನು ಕಂಡು ಕಗ್ಗಲಿಪುರ ಪೊಲೀಸರಿಗೆ ವಿಷಯ ಮುಟ್ಟಿಸುತ್ತಾನೆ. ವಿಷಯ ತಿಳಿದ ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೇತನ್‌ ಸಿಂಗ್‌ ರಾಥೋಡ್‌, ಡಿವೈಎಸ್‌ಪಿ ಪುರುಷೋತ್ತಮ್‌, ಸಹಾಯಕ ಡಿವೈಎಸ್‌ಪಿ ಪವನ್‌, ಸಿಪಿಐ ಪ್ರಕಾಶ್‌, ಎಸ್‌.ಐ. ಗೋವಿಂದ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ತಂಡ ರಚನೆ: ಮಹಿಳೆಯನ್ನು ಚಾಕುವಿನಿಂದ ಆರೇಳು ಬಾರಿ ಚುಚ್ಚಿ ಕೊಲೆಮಾಡಿು ಅನುಮಾನಾಸ್ಪದವಾಗಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿದೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ