ಆ್ಯಪ್ನಗರ

ರಾಮನಗರ: ನಿಖಿಲ್, ರೇವತಿ ಮದುವೆಗೆ ಸಿದ್ಧತೆ ಜೋರು, ಅದ್ದೂರಿ ಕಲ್ಯಾಣ ಮಂಟಪ ಸೆಟ್‌ ನಿರ್ಮಾಣಕ್ಕೆ ಶುಕ್ರವಾರ ವಾಸ್ತು ಪ್ರಕಾರ ಪೂಜೆ

ರಾಮನಗರ ತಮಗೆ ರಾಜಕೀಯವಾಗಿ ಜನ್ಮ ನೀಡಿದ ಜಿಲ್ಲೆ. ಹೀಗಾಗಿ ಜಿಲ್ಲೆ ಜನರ ಆಶೀರ್ವಾದ ನನ್ನ ಮಗನಿಗೂ ಸಿಗಲಿ ಎಂಬ ಉದ್ದೇಶದಿಂದ ರಾಮನಗರ ಮತ್ತು ಚನ್ನಪಟ್ಟಣ ಮಧ್ಯದಲ್ಲಿ ಪುತ್ರ ನಿಖಿಲ್‌ ಮದುವೆ ಸಮಾರಂಭ ಆಯೋಜನೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿಕೊಂಡಿದ್ದರು.

Vijaya Karnataka Web 20 Feb 2020, 5:48 pm
ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್‌ ಮತ್ತು ರೇವತಿ ಮದುವೆ ಈಗ ಭಾರಿ ಚರ್ಚೆಯಲ್ಲಿದೆ. ಅತ್ಯಂತ ಅದ್ದೂರಿಯಾಗಿ ಈ ವಿವಾಹ ನಡೆಸಲು ದೊಡ್ಡ ಗೌಡರ ಕುಟುಂಬ ಸಜ್ಜಾಗಿದೆ.
Vijaya Karnataka Web ನಿಖಿಲ್, ರೇವತಿ
ನಿಖಿಲ್‌, ರೇವತಿ


ಈಗಾಗಲೇ ನಿಶ್ಚಿತಾರ್ಥ ಪೂರ್ಣಗೊಂಡ ಬಳಿಕ ಮದುವೆಗೆ ಭರಪೂರ ಸಿದ್ಧತೆಗಳು ನಡೆಯುತ್ತಿವೆ.

ರಾಮನಗರದ ಜನಪದ ಲೋಕದ ಸಮೀಪದ 54 ಎಕರೆಯಲ್ಲಿ ಕಲ್ಯಾಣಮಂಟಪದ ಅದ್ದೂರಿ ಸೆಟ್‌ ಹಾಕಲಾಗುತ್ತಿದೆ. ಇದಕ್ಕಾಗಿ ಶಿವರಾತ್ರಿ ದಿನದಂದು ಅಂದರೆ ಶುಕ್ರವಾರ (ಫೆಬ್ರವರಿ ೨೧) ಭೂಮಿ ಪೂಜೆ ನೆರವೇರಿಸಲು ಕುಮಾರಸ್ವಾಮಿ ಕುಟುಂಬ ಸಿದ್ಧತೆ ನಡೆಸಿದೆ.

ಮದುವೆ ನಡೆಯುವ ಸ್ಥಳದಲ್ಲಿ ಶುಕ್ರವಾರ ಭೂಮಿ ಪೂಜೆ, ವಾಸ್ತು ಪೂಜೆ ನಡೆಯಲಿದೆ.

ದೊಡ್ಡ ಗೌಡರ ಕುಟುಂಬ ಇಲ್ಲಿ ಕೂಡ ವಾಸ್ತು ಬಿಟ್ಟಿಲ್ಲ. ಜ್ಯೋತಿಷಿಗಳು, ಕುಟುಂದ ಪುರೋಹಿತರ ಸೂಚನೆ ಮೇರೆಗೆ ಶುಕ್ರವಾರ ಬೆಳಗ್ಗೆ 7.30 ರಿಂದ 9.35ರ ಸಮಯದಲ್ಲಿ ಭೂಮಿ ಪೂಜೆ ನೆರವೇರಿಸಲು ಸಿದ್ಧತೆ ಪೂರ್ಣಗೊಂಡಿದೆ.

ಅದ್ದೂರಿ ಕಲ್ಯಾಣ ಮಂಟಪದ ಸೆಟ್‌ ಹಾಕಲು ಪ್ಲಾನ್‌ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ನಿಪುಣ ಕಲಾಕಾರರನ್ನು ಸಂಪರ್ಕಿಸಲಾಗಿದೆ.

ಈ ಸೆಟ್‌ ನಿರ್ಮಾಣ ಮಾಡಲು ವಾಸ್ತು ಪ್ರಕಾರ ಗುದ್ದಲಿ ಪೂಜೆ ನಡೆಯಲಿದೆ. ವಾಸ್ತು ತಜ್ಞರು, ಜ್ಯೋತಿಷಿಗಳು ಪುರೋಹಿತರು ರಾಮನಗರಕ್ಕೆ ಶುಕ್ರವಾರ ಆಗಮಿಸಲಿದ್ದಾರೆ.

ಕುಮಾರಸ್ವಾಮಿ ಪುತ್ರ ನಿಖಿಲ್‌ ಮತ್ತು ರೇವತಿ ಮದುವೆ ಏಪ್ರಿಲ್‌ 17ಕ್ಕೆ ನಿಶ್ಚಯವಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಎಂಗೇಜ್‌ಮೆಂಟ್‌ ಕೂಡ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ