ಆ್ಯಪ್ನಗರ

ಫಿಲ್ಮ್‌ ಸಿಟಿ ವಿಚಾರದಲ್ಲಿಬಿಜೆಪಿ-ಜೆಡಿಎಸ್‌ ಜಂಗೀಕುಸ್ತಿ

ರಾಮನಗರದಲ್ಲಿಸ್ಥಾಪಿಸಲು ಉದ್ದೇಶಿಸಿದ್ದ ಫಿಲ್ಮ್‌ಸಿಟಿ(ಚಿತ್ರನಗರಿ)ಯನ್ನು ಕನಕಪುರ ರಸ್ತೆಯ ತಾತಗುಣಿ ಸಮೀಪ ಇರುವ ರೋರಿಚ್‌ ಮತ್ತು ದೇವಿಕಾರಾಣಿ ರೋರಿಚ್‌ ಎಸ್ಟೇಟ್‌ನಲ್ಲಿಸ್ಥಾಪಿಸುವ ಬಿಜೆಪಿ ಸರಕಾರದ ನಿರ್ಧಾರ ಈಗ ಬಿಜೆಪಿ-ಜೆಡಿಎಸ್‌ ನಡುವೆ ಜಂಗೀಕುಸ್ತಿಗೆ ವೇದಿಕೆ ಕಲ್ಪಿಸಿದೆ. ಇದೇ ವಿಚಾರವಾಗಿ ಮಾಜಿ-ಹಾಲಿ ಮುಖ್ಯಮಂತ್ರಿಗಳ ನಡುವೆ ಟ್ವೀಟ್‌ ವಾರ್‌ ಶುರುವಾಗಿದೆ.

Vijaya Karnataka 20 Sep 2019, 3:25 pm
ರಾಮನಗರ: ರಾಮನಗರದಲ್ಲಿಸ್ಥಾಪಿಸಲು ಉದ್ದೇಶಿಸಿದ್ದ ಫಿಲ್ಮ್‌ಸಿಟಿ(ಚಿತ್ರನಗರಿ)ಯನ್ನು ಕನಕಪುರ ರಸ್ತೆಯ ತಾತಗುಣಿ ಸಮೀಪ ಇರುವ ರೋರಿಚ್‌ ಮತ್ತು ದೇವಿಕಾರಾಣಿ ರೋರಿಚ್‌ ಎಸ್ಟೇಟ್‌ನಲ್ಲಿಸ್ಥಾಪಿಸುವ ಬಿಜೆಪಿ ಸರಕಾರದ ನಿರ್ಧಾರ ಈಗ ಬಿಜೆಪಿ-ಜೆಡಿಎಸ್‌ ನಡುವೆ ಜಂಗೀಕುಸ್ತಿಗೆ ವೇದಿಕೆ ಕಲ್ಪಿಸಿದೆ. ಇದೇ ವಿಚಾರವಾಗಿ ಮಾಜಿ-ಹಾಲಿ ಮುಖ್ಯಮಂತ್ರಿಗಳ ನಡುವೆ ಟ್ವೀಟ್‌ ವಾರ್‌ ಶುರುವಾಗಿದೆ.
Vijaya Karnataka Web bjp jds jungkusti on film city
ಫಿಲ್ಮ್‌ ಸಿಟಿ ವಿಚಾರದಲ್ಲಿಬಿಜೆಪಿ-ಜೆಡಿಎಸ್‌ ಜಂಗೀಕುಸ್ತಿ


ಫಿಲ್ಮ್‌ಸಿಟಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುವುದಾಗಿ ಭಾನುವಾರ ಸಿಎಂ ಯಡಿಯೂರಪ್ಪ ಹೇಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಬುಧವಾರ ಸರಣಿ ಟ್ವೀಟ್‌ ಮಾಡಿದ್ದರು.

ಗುರುವಾರ ಇದೇ ವಿಚಾರ ಪ್ರಸ್ತಾಪಿಸಿದ ಪ್ರವಾಸೋದ್ಯಮ ಮತ್ತು ಕನ್ನಡ, ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು, ರೋರಿಚ್‌ ಎಸ್ಟೇಟ್‌ ರಾಜ್ಯದಿಂದ ಹೊರಗಿಲ್ಲ, ಕನಕಪುರಕ್ಕೆ ಸಮೀಪದಲ್ಲೇ ಇದೆ. ಕುಮಾರಸ್ವಾಮಿ ಅವರು ರಾಜ್ಯ ಮಟ್ಟದ ನಾಯಕರಾಗಿದ್ದು, ರಾಮನಗರ ಜಿಲ್ಲೆಗೆ ಸೀಮಿತರಾದವರಲ್ಲ, ಅವರು ಸ್ವಲ್ಪ ವಿಶಾಲವಾಗಿ ಯೋಚಿಸಬೇಕು ಎಂದು ಕುಟುಕಿದ್ದಾರೆ.

ಎಚ್‌ಡಿಕೆ ಕನಸು ಭಗ್ನ: ಎಚ್‌.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ 2018ರ ಜುಲೈ 5ರಂದು ಮಂಡಿಸಿದ್ದ ಸಮ್ಮಿಶ್ರ ಸರಕಾರದ ಚೊಚ್ಚಲ ಬಜೆಟ್‌ನಲ್ಲಿರಾಮನಗರ ಜಿಲ್ಲೆಯಲ್ಲಿಚಿತ್ರನಗರಿ ಆರಂಭದ ಘೋಷಣೆ ಮಾಡಿದ್ದರು. ಇದಕ್ಕಾಗಿ 40 ಕೋಟಿ ಅನುದಾನ ಮೀಸಲಿಟ್ಟಿದ್ದರು. ಛಾಯಾಚಿತ್ರ, ಸಂಕಲನ, ರೆಕಾರ್ಡಿಂಗ್‌ ಸಂಸ್ಥೆಗಳು ಹಾಗೂ ಅನಿಮೇಷನ್‌, ಕಂಪ್ಯೂಟರ್‌ ಗ್ರಾಫಿಕ್ಸ್‌ ಗೆ ಅನುಕೂಲವಾಗುವ ಸ್ಟುಡಿಯೋಗಳು ಮೊದಲಾದ ಸೇವೆಗಳನ್ನು ಇಲ್ಲಿಕಲ್ಪಿಸಲು ಉದ್ದೇಶಿಸಲಾಗಿತ್ತು. ಜತೆಗೆ ತಂತ್ರಜ್ಞರಿಗೆ ವಸತಿ ಇನ್ನಿತರೆ ಮೂಲ ಸೌಕರ್ಯಗಳ ನಿರ್ಮಾಣಕ್ಕಾಗಿ 20 ಕೋಟಿ ರೂ., ಪ್ರತ್ಯೇಕ ಅನುದಾನದ ಭರವಸೆ ಸಹ ನೀಡಿದ್ದರು. ಇದಲ್ಲದೆ ರಾಮನಗರದಲ್ಲಿಖಾಸಗಿ ಸಹಭಾಗಿತ್ವದಲ್ಲಿಚಲನಚಿತ್ರ ವಿಶ್ವವಿದ್ಯಾಲಯವನ್ನು ತೆರೆಯುವುದಾಗಿಯೂ ಅವರು ಬಜೆಟ್‌ನಲ್ಲಿಘೋಷಿಸಿದ್ದರು. ಇದಕ್ಕೆ ಪ್ರತ್ಯೇಕವಾಗಿ 30 ಕೋಟಿ ಘೋಷಿಸಲಾಗಿತ್ತು. ನಂತರ ಫಿಲ್ಮ್‌ಸಿಟಿಯನ್ನು ಮೈಸೂರಿಗೆ ಸ್ಥಳಾಂತರಿಸುವ ಮಾತುಗಳೂ ಕೇಳಿ ಬಂದಿದ್ದವು. ಈಗ ಅದು ಬೆಂಗಳೂರಿನಲ್ಲಿರುವ ರೋರಿಚ್‌ ಎಸ್ಟೇಟ್‌ಗೆ ಸ್ಥಳಾಂತರಗೊಳ್ಳುವ ಮಾತುಗಳು ಕೇಳಿಬಂದಿದೆ.

ದ್ವೇಷ ರಾಜಕಾರಣದ ಆರೋಪ: ಚಿತ್ರನಗರಿಯನ್ನು ಸ್ಥಳಾಂತರಿಸುವುದರ ಹಿಂದೆ ದ್ವೇಷ ರಾಜಕಾರಣವಿದೆ ಎಂಬುದು ಎಚ್‌ಡಿಕೆ ಆರೋಪ. 460 ಎಕರೆ ಪ್ರದೇಶದಲ್ಲಿಇರುವ ರೋರಿಚ್‌ ಎಸ್ಟೇಟ್‌ ಜೀವ ವೈವಿಧ್ಯತೆಯ ತಾಣ. ಇದೊಂದು ಆನೆ ಕಾರಿಡಾರ್‌ ಆಗಿದ್ದು, ಬೆಂಗಳೂರಿನ ಬನ್ನೇರುಘಟ್ಟ ಪ್ರದೇಶದಿಂದ ಮಾಗಡಿಯ ಸಾವನದುರ್ಗ ಅರಣ್ಯ ಪ್ರದೇಶಕ್ಕೆ ಆನೆಗಳು ಇದೇ ಮಾರ್ಗದಲ್ಲಿಓಡಾಡುತ್ತವೆ. ಇಲ್ಲಿನ 100 ಎಕರೆಗೂ ಹೆಚ್ಚು ಪ್ರದೇಶ ಅರಣ್ಯ ಇಲಾಖೆಯ ಅಧೀನದಲ್ಲಿಇದೆ. ಆದರೆ ಯೋಜನೆಯ ಕುರಿತು ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ಇಲ್ಲ. ಎಸ್ಟೇಟ್‌ನಲ್ಲಿಪ್ರಾಣಿಗಳಿಗೆ ಆಹಾರ ಹಾಗೂ ನೀರಿನ ಲಭ್ಯತೆ ಉತ್ತಮವಾಗಿದೆ. ಹೀಗಾಗಿ ಆನೆಗಳು ಇಲ್ಲಿಆಗಾಗ್ಗೆ ಬೀಡುಬಿಡುತ್ತವೆ. ಜತೆಗೆ ಚಿರತೆ, ಜಿಂಕೆ, ನವಿಲುಗಳಿಗೂ ಆಶ್ರಯ ತಾಣ. ಇಂತಹ ಜೀವವೈವಿಧ್ಯ ತಾಣದಲ್ಲಿಚಿತ್ರನಗರಿ ಸ್ಥಾಪನೆ ಸಾಧುವಲ್ಲಎಂಬುದು ಎಚ್‌ಡಿಕೆ ವಾದ.

ಜಾಲ ತಾಣಗಳಲ್ಲಿಸಂಘರ್ಷ: ಇದೇ ವಿಚಾರವಾಗಿ ಈಗ ಜಾಲ ತಾಣಗಳಲ್ಲಿಬಿಜೆಪಿ-ಜೆಡಿಎಸ್‌ ಬೆಂಬಲಿಗರ ನಡುವೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ರೋರಿಚ್‌ ಎಸ್ಟೇಟ್‌ ಚಿತ್ರನಗರಿಗೆ ಸೂಕ್ತವಾದ ಪ್ರದೇಶ ಅಲ್ಲ. ಇದರಿಂದ ಮಾನವ-ವನ್ಯಜೀವಿ ಸಂಘರ್ಷಕ್ಕೆ ದಾರಿಮಾಡಿಕೊಟ್ಟಂತೆ ಆಗುತ್ತದೆ. ಫಿಲ್ಮ್‌ ಸಿಟಿಯನ್ನು ರಾಮನಗರದಲ್ಲಿಕಟ್ಟಬೇಕು ಎನ್ನುವುದು ನಮ್ಮ ಸರಕಾರದ ನಿರ್ಧಾರ ಆಗಿತ್ತು. ಅದನ್ನು ಸ್ಥಳಾಂತರಿಸುವ ಮೂಲಕ ಬಿಎಸ್‌ವೈ ರಾಮನಗರದ ವಿಚಾರದಲ್ಲಿದ್ವೇಷದ ರಾಜಕಾರಣ ಮಾಡುತ್ತಿದ್ದಾರೆ.

-ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

(ಟ್ವೀಟರ್‌ನಲ್ಲಿಹೇಳಿದ್ದು)

ಕುಮಾರಸ್ವಾಮಿ ಅವರು ಕೇವಲ ರಾಮನಗರ ತಾಲೂಕಿಗೆ ಮಾತ್ರ ನಾಯಕರಲ್ಲ. ಅವರು ರಾಜ್ಯದ ನಾಯಕರು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಚಿತ್ರನಗರಿ ರಾಮನಗರ ತಾಲೂಕಿನಿಂದ ಕನಕಪುರ ತಾಲೂಕಿಗೆ ವರ್ಗಾವಣೆ ಆಗಿದೆ ಅಷ್ಟೆ. ಅದು ಸಹ ರಾಮನಗರ ಜಿಲ್ಲೆಯಲ್ಲಿಯೇ ಇದೆ ಎಂಬುದು ಗಮನಕ್ಕಿರಲಿ.

-ಸಿ.ಟಿ.ರವಿ, ಪ್ರವಾಸೋಧ್ಯಮ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ