ಆ್ಯಪ್ನಗರ

ಬಮೂಲ್‌ ಅಧ್ಯಕ್ಷ ಸ್ಥಾನ, ಸಹೋದರರ ಕಿತ್ತಾಟ

ಮಾಗಡಿ ಕ್ಷೇತ್ರದ ಬಮೂಲ್‌ ನಿರ್ದೇಶಕ ಸ್ಥಾನದ ಪರಾಜಿತ ಅಭ್ಯರ್ಥಿ ಕೆ.ಕೃಷ್ಣಮೂರ್ತಿ ಕುತಂತ್ರಕ್ಕೆ ನನಗೆ ಬಮುಲ್‌ ಅಧ್ಯಕ್ಷ ಸ್ಥಾನ ತಪ್ಪಿದೆ ಎಂದು ನಿರ್ದೇಶಕ ನರಸಿಂಹಮೂರ್ತಿ ಆರೋಪಿಸಿದರು.

Vijaya Karnataka 24 May 2019, 5:00 am
ಮಾಗಡಿ: ಮಾಗಡಿ ಕ್ಷೇತ್ರದ ಬಮೂಲ್‌ ನಿರ್ದೇಶಕ ಸ್ಥಾನದ ಪರಾಜಿತ ಅಭ್ಯರ್ಥಿ ಕೆ.ಕೃಷ್ಣಮೂರ್ತಿ ಕುತಂತ್ರಕ್ಕೆ ನನಗೆ ಬಮುಲ್‌ ಅಧ್ಯಕ್ಷ ಸ್ಥಾನ ತಪ್ಪಿದೆ ಎಂದು ನಿರ್ದೇಶಕ ನರಸಿಂಹಮೂರ್ತಿ ಆರೋಪಿಸಿದರು.
Vijaya Karnataka Web brothers dispute for bamuls presidency seat at magadi taluk
ಬಮೂಲ್‌ ಅಧ್ಯಕ್ಷ ಸ್ಥಾನ, ಸಹೋದರರ ಕಿತ್ತಾಟ


ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೇ 21 ರ ಮಧ್ಯ ರಾತ್ರಿವರೆಗೆ ನನಗೆ ಬಮುಲ್‌ ಅಧ್ಯಕ್ಷ ಸ್ಥಾನ ನೀಡುವುದಾಗಿ ಮೈತ್ರಿ ಸರಕಾರದ ಮುಖಂಡರು ತೀರ್ಮಾನಿಸಿದ್ದರು. ಅದರೆ ಬಮುಲ್‌ ನಿರ್ದೇಶಕ ಸ್ಥಾನದ ಪರಾಜಿತ ಅಭ್ಯರ್ಥಿ ಕೆ.ಕೃಷ್ಣಮೂರ್ತಿ ತನಗೆ ಅಧ್ಯಕ್ಷ ಸ್ಥಾನ ಸಿಗದಂತೆ ಜೆಡಿಎಸ್‌ ವರಿಷ್ಠರೊಂದಿಗೆ ಒತ್ತಡ ಹೇರಿ ಸ್ಥಾನ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೆಡಿಎಸ್‌ ವರಿಷ್ಠ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವುದರಿಂದ ನನಗೆ ಮುಖಭಂಗ ಮಾಡಬೇಕೆಂದು ತಮ್ಮ ಸಹೋದರ ಕೆ.ಕೃಷ್ಣಮೂರ್ತಿ ನಡೆಸಿದ ಕುತಂತ್ರಕ್ಕೆ ಅಧ್ಯಕ್ಷ ಸ್ಥಾನ ವಂಚಿತನಾಗಬೇಕಾಯಿತು. ಜತೆಗೆ ಬಮೂಲ್‌ ನಿರ್ದೇಶಕ ಸ್ಥಾನವನ್ನು ಸಹ ಪ್ರಕರಣ ದಾಖಲಿಸಿ ಸಹಾಯಕ ನಿಬಂಧಕರ ನ್ಯಾಯಾಲಯದ ಮೂಲಕ ಅನರ್ಹಗೊಳಿಸುವಲ್ಲಿಯೂ ಸಹ ಯಶಸ್ವಿಯಾಗಿದ್ದಾರೆ ಎಂದು ಆರೋಪಿಸಿದ ಅವರು, ಈಗ ಅವರದೇ ಸರಕಾರವಿದೆ. ಕೆ.ಕೃಷ್ಣಮೂರ್ತಿ ಅವರನ್ನೇ ಬಮೂಲ್‌ ನಿರ್ದೇಶಕರನ್ನಾಗಿ ಮಾಡಬಹುದು. ಕೆ.ಕೃಷ್ಣಮೂರ್ತಿ ಬಿಡಿಸಿಸಿ ಬ್ಯಾಂಕ್‌ ಮತ್ತು ಒಕ್ಕಲಿಗರ ಸಂಘದಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡೆಸಿ ಮುಳುಗಿಸಿದ್ದಾಗಿದೆ. ಈಗೇನಿದ್ದರೂ ಬಮೂಲ್‌ ಮುಳುಗಿಸಲು ಹೊರಟ್ಟಿದ್ದಾರೆ ಎಂದು ಬಮುಲ್‌ ನಿರ್ದೇಶಕ ನರಸಿಂಹಮೂರ್ತಿ ಆರೋಪಿಸಿದ್ದು, ಬಮೂಲ್‌ ನಿರ್ದೇಶಕ ಸ್ಥಾನಕ್ಕೆ ಅನರ್ಹಗೊಳಿಸಿರುವ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು.

ಸಹೋದರರ ಸವಾಲು:

ಮಾಗಡಿ ಬಮುಲ್‌ ನಿರ್ದೇಶಕ ಚುನಾವಣೆಯಲ್ಲಿ ಕೆ.ಕೃಷ್ಣಮೂರ್ತಿ ಮತ್ತು ನರಸಿಂಹಮೂರ್ತಿ ಸ್ಪರ್ಧಿಸಿದ್ದು, ಅಣ್ಣ ನರಸಿಂಹಮೂರ್ತಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಅಗಲಕೋಟೆ ಡೇರಿ ಕಾರ‍್ಯದರ್ಶಿ ನೇಮಕಾತಿಯಲ್ಲಿ ಆಕ್ರಮ ನಡೆದಿದೆ ಎಂದು ತಮ್ಮ ಕೃಷ್ಣಮೂರ್ತಿ ತಮ್ಮ ಬೆಂಬಲಿಗರೊಬ್ಬರ ಮೂಲಕ ಪ್ರಕರಣದ ದಾಖಲಿಸಿದ್ದು, ಇದರ ಅನ್ವಯ ನರಸಿಂಹಮೂರ್ತಿ ಅವರನ್ನು ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸುವಲ್ಲಿ ಸಹೋದರ ಕೆ.ಕೃಷ್ಣಮೂರ್ತಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ