ಆ್ಯಪ್ನಗರ

ಕಡವೆ ಬೇಟೆಯಾಡಿದ ಮೂವರ ಸೆರೆ

ಕನಕಪುರ ತಾಲ್ಲೂಕಿನ ಸಾತನೂರು ಹೋಬಳಿ ವ್ಯಾಪ್ತಿಯ ಕಾವೇರಿ ವನ್ಯಜೀವಿ ಧಾಮದ ಬಸವನಬೆಟ್ಟ ಮೀಸಲು ಅರಣ್ಯದಲ್ಲಿಕಡವೆಯನ್ನು ಬೇಟೆಯಾಡಿ ಸಾಗಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

Vijaya Karnataka 19 Sep 2019, 3:29 pm
ಸಾತನೂರು: ಕನಕಪುರ ತಾಲ್ಲೂಕಿನ ಸಾತನೂರು ಹೋಬಳಿ ವ್ಯಾಪ್ತಿಯ ಕಾವೇರಿ ವನ್ಯಜೀವಿ ಧಾಮದ ಬಸವನಬೆಟ್ಟ ಮೀಸಲು ಅರಣ್ಯದಲ್ಲಿಕಡವೆಯನ್ನು ಬೇಟೆಯಾಡಿ ಸಾಗಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.
Vijaya Karnataka Web capture of three hunters
ಕಡವೆ ಬೇಟೆಯಾಡಿದ ಮೂವರ ಸೆರೆ


ಕುರಿಮಂದೆದೊಡ್ಡಿ ಗ್ರಾಮದ ನಾರಾಯಣ ಬಿನ್‌ ಕೊಂಡಯ್ಯ (51), ಪುಟ್ಟಸ್ವಾಮಿ ಬಿನ್‌ ಚಿಕ್ಕಮಾಗಯ್ಯ (48) , ವೆಂಕಟರಾಮು ಬಿನ್‌ ಹೊನ್ನಯ್ಯ (48) ಎಂಬವರು ಸಾಕು ನಾಯಿಗಳನ್ನು ಬಿಟ್ಟು ಕಡವೆಯನ್ನು ಬೇಟೆಯಾಡಿದ್ದರು. ಕಡವೆ ಮಾಂಸವನ್ನು ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದಾಗ ಕಾವೇರಿ ವನ್ಯಜೀವಿ ಸಂಗಮ ವಲಯ ಅರಣ್ಯ ಅಧಿಕಾರಿಯಾದ ಕಿರಣ್‌ ಕುಮಾರ್‌ ಜೆ. ಕರತರಂಗಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ, ಕಡವೆಯ ಮೃತ ದೇಹವನ್ನು ವಶಪಡಿಸಿಕೊಂಡಿತು.

ಆರೋಪಿಗಳನ್ನು ಸಂಗಮ ಅರಣ್ಯ ವಲಯ ಅಧಿಕಾರಿಗಳ ಕಚೇರಿಯಲ್ಲಿವಿಚಾರಣೆಗೊಳಪಡಿಸಿದ ಬಳಿಕ ಕನಕಪುರದ ಪ್ರಥಮ ದರ್ಜೆಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈ ಕಾರ್ಯಚರಣೆಯಲ್ಲಿಉಪವಲಯ ಅರಣ್ಯ ಅಧಿಕಾರಿಗಳಾದ ಅನಿಲ್‌ ಕುಮಾರ್‌, ಶರಣಪ್ಪ , ಅರಣ್ಯ ರಕ್ಷಕ ರವಿ, ಕಾರ್ತಿಕ್‌, ರವಿನಾಯಕ್‌, ಸುದೀಪ್‌ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ