ಆ್ಯಪ್ನಗರ

ಅಧಿಕಾರಿಗಳ ತಂಡದಿಂದ ಕ್ಯಾಟ್‌ಫಿಶ್‌ ಹೊಂಡ ನಾಶ

ತಹಸೀಲ್ದಾರ್‌ ನೇತೃತ್ವದ ಅಧಿಕಾರಿಗಳ ತಂಡ ನಿಷೇಧಿತ ಕ್ಯಾಟ್‌ ಫಿಶ್‌ ಸಾಕಾಣಿಕೆ ಅಡ್ಡೆ ಮೇಲೆ ದಾಳಿ ನಡೆಸಿ ನಾಶಪಡಿಸಿದೆ...

Vijaya Karnataka 18 May 2019, 5:00 am
ಬಿಡದಿ: ತಹಸೀಲ್ದಾರ್‌ ನೇತೃತ್ವದ ಅಧಿಕಾರಿಗಳ ತಂಡ ನಿಷೇಧಿತ ಕ್ಯಾಟ್‌ ಫಿಶ್‌ ಸಾಕಾಣಿಕೆ ಅಡ್ಡೆ ಮೇಲೆ ದಾಳಿ ನಡೆಸಿ ನಾಶಪಡಿಸಿದೆ.
Vijaya Karnataka Web catfish pits destroyed by team of officials
ಅಧಿಕಾರಿಗಳ ತಂಡದಿಂದ ಕ್ಯಾಟ್‌ಫಿಶ್‌ ಹೊಂಡ ನಾಶ


ಬಿಡದಿ ಹೋಬಳಿ ಕಂಚುಗಾರನಹಳ್ಳಿ ಗ್ರಾಮದ ಹೊರವಲಯದಲ್ಲಿ ಎಸ್‌ ಪಿಆರ್‌ ತಿಮ್ಮೇಗೌಡ ಅವರಿಗೆ ಸೇರಿದ ಜಮೀನಿನಲ್ಲಿ 38 ಹೊಂಡಗಳಲ್ಲಿ ನಿಷೇಧಿತ ಕ್ಯಾಟ್‌ ಫಿಶ್‌ ಸಾಕಾಣಿಕೆ ಮಾಡಲಾಗುತ್ತಿತ್ತು. ಬೆಂಗಳೂರಿನ ರಜಾಕ್‌ ಪಾಳ್ಯದ ನಜೀರ್‌ ಎಂಬುವರು ಜಮೀನನ್ನು ಗುತ್ತಿಗೆ ಪಡೆದು ಕೆಲವು ಸ್ಥಳೀಯ ವ್ಯಕ್ತಿಗಳ ಜತೆ ಸೇರಿ ಹೊಂಡಗಳನ್ನು ನಿರ್ಮಿಸಿ ಕ್ಯಾಟ್‌ ಫಿಶ್‌ ಸಾಕಾಣಿಕೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಗ್ರಾಮಸ್ಥರು ನೀಡಿದ ಖಚಿತ ಸುಳಿವಿನ ಮೇರೆಗೆ ತಹಸೀಲ್ದಾರ್‌ ರಾಜು ಅವರು ಪೊಲೀಸ್‌ ಸಿಬ್ಬಂದಿಯೊಂದಿಗೆ ತೆರಳಿ ಕ್ಯಾಟ್‌ ಫಿಶ್‌ ಹೊಂಡಗಳನ್ನು ನಾಶಪಡಿಸಿದರು. ಜೆಸಿಬಿ ಸಹಾಯದಿಂದ ನೀರನ್ನು ಹೊರ ಹಾಕಿದ ನಂತರ ಹೊಂಡಗಳಲ್ಲಿದ್ದ ಕ್ಯಾಟ್‌ ಫಿಶ್‌ ಗಳ ಮೇಲೆ ಮಣ್ಮು ಹಾಕಿ ನಾಶ ಪಡಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನಿನ ಮಾಲೀಕರು ಮತ್ತು ಕ್ಯಾಟ್‌ ಫಿಶ್‌ ಸಾಕಾಣಿಕೆ ಮಾಡುತ್ತಿದ್ದವರ ವಿರುದ್ಧ ಬಿಡದಿ ಠಾಣೆಯಲ್ಲಿ ಪೊಲೀಸರು ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ