ರಾಮನಗರ: ಜಿಲ್ಲೆಯಲ್ಲಿ ಸರಗಳ್ಳರ ಆರ್ಭಟ ತೀವ್ರಗೊಂಡಿದೆ. ಇಲ್ಲಿನ ಗುಂಗರ ಹಳ್ಳಿಯಲ್ಲಿ ಹಾಡಹಗಲೇ ಮಹಿಳೆಯರ ಕತ್ತಿಗೆ ಕೈ ಹಾಕಿ ಸರಗಳ್ಳರು ಅಟ್ಟಹಾಸ ಮೆರೆಯುತ್ತಿದ್ದಾರೆ. ಸಾತನೂರು ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳನ ಬಂಧನ ಪ್ರಕರಣ ಜನ ಮಾನಸದಿಂದ ಮರೆಯಾಗುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ವಿಳಾಸ ಕೇಳುವ ನೆಪದಲ್ಲಿ ಮಾಂಗಲ್ಯ ಸರಕ್ಕೆ ಕೈ ಹಾಕಿದ್ದ ಇಬ್ಬರು ಕಳ್ಳರ ಪೈಕಿ ಓರ್ವ ಸರ ಕದ್ದು ಎಸ್ಕೇಪ್ ಆಗುತ್ತಿದ್ದ ಈ ವೇಳೆ ಆತನನ್ನು ಸೆರೆ ಹಿಡಿಯಲಾಗಿದೆ. ಮತ್ತೊಬ್ಬ ಪರಾರಿಯಾಗಿದ್ದಾನೆ. ರಾಮನಗರ ತಾಲ್ಲೂಕಿನ ಗುಂಗರಹಳ್ಳಿ ಬಳಿ ರಾಧಮ್ಮ (45) ಎಂಬ ಮಹಿಳೆಯ ಚಿನ್ನದ ಸರ ಕಿತ್ತು ಎಸ್ಕೇಪ್ ಆಗಲು ಈ ವಿಫಲ ಯತ್ನ ನಡೆದಿದೆ.
ಸರ ಕದ್ದು ಎಸ್ಕೇಪ್ ಆಗುತ್ತಿದ್ದ ವೇಳೆ ಸರಗಳ್ಳನ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಪರಿಣಾಮ ಇಬ್ಬರು ಸರಗಳ್ಳರ ಪೈಕಿ ಓರ್ವ ಎಸ್ಕೇಪ್ ಆಗಿದ್ದು, ಮತ್ತೊಬ್ಬ ಸೆರೆ ಸಿಕ್ಕಿದ್ದಾನೆ. ಕಳ್ಳನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸರಗಳ್ಳರಿಗೆ ಕೊರೊನಾ ದೃಢ: ಹಿಡಿದುಕೊಟ್ಟ ಗ್ರಾಮಸ್ಥರು, ಪೊಲೀಸರಿಗೆ ಢವಢವ..!
ಸರ ಕಿತ್ತು ಎಸ್ಕೇಪ್ ಆಗುವ ಭರದಲ್ಲಿ ಸರಗಳ್ಳರು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದೂ ಆರೋಪಿಸಲಾಗಿದೆ. ಪ್ರಕರಣ ಸಂಬಂಧ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಲಾಕ್ಡೌನ್ ಸಡಿಲಿಕೆ ಬಳಿಕ ಗ್ರಾಮೀಣ ಭಾಗದಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಕಳೆದ ಎರಡು ದಿನಗಳ ಹಿಂದೆ ರಾಮನಗರ - ಮಾಗಡಿ ಹೆದ್ದಾರಿಯಲ್ಲಿ ಸರಗಳ್ಳತನ ನಡೆದಿತ್ತು. ಮೂರು ದಿನಗಳ ಹಿಂದೆಯಷ್ಟೇ ಕನಕಪುರ ತಾ. ಕಬ್ಬಾಳು ಬಳಿ ಇಬ್ಬರು ಸರಗಳ್ಳರು ಸೆರೆ ಸಿಕ್ಕಿದ್ದರು. ಕುರಿಗಾಹಿ ಮಹಿಳೆಯ ಸರ ಕಿತ್ತು ಎಸ್ಕೇಪ್ ಆಗಲು ಯತ್ನಿಸುತ್ತಿದ್ದ ವೇಳೆ ಸಾರ್ವಜನಿಕರ ಕೈಗೆ ಖದೀಮರು ಸಿಕ್ಕಿಬಿದ್ದಿದ್ದರು.
Viral Video : ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಸರ ಎಳೆದು ಎಸ್ಕೇಪ್!
ಗ್ರಾಮೀಣ ಭಾಗದ ಒಂಟಿ ರೈತ ಮಹಿಳೆಯರೇ ಸರಗಳ್ಳರ ಟಾರ್ಗೆಟ್ ಆಗುತ್ತಿದ್ದಾರೆ. ಆರೋಪಿಗಳೆಲ್ಲರೂ ರಾಮನಗರ ಜಿಲ್ಲೆಗೆ ಸೇರಿದವರೇ ಅನ್ನೋದು ವಿಶೇಷ. ಹೀಗಾಗಿ, ಪೊಲೀಸರ ಜೊತೆಗೆ ಸಾರ್ವಜನಿಕರು ಸಹಕರಿಸಬೇಕಾದ್ದು, ಎಚ್ಚರಿಕೆಯಿಂದ ಇರಬೇಕಾದ್ದು ಅನಿವಾರ್ಯವಾಗಿದೆ.
ಸಿಗರೇಟ್ ಸೇದುತ್ತಿದ್ದ ವ್ಯಕ್ತಿಯ ಸರಗಳವು..! ಮೈಸೂರಿನ ಕ್ರೈಂ ನ್ಯೂಸ್ ರೌಂಡ್ ಅಪ್..
ಸರ ಕದ್ದು ಎಸ್ಕೇಪ್ ಆಗುತ್ತಿದ್ದ ವೇಳೆ ಸರಗಳ್ಳನ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಪರಿಣಾಮ ಇಬ್ಬರು ಸರಗಳ್ಳರ ಪೈಕಿ ಓರ್ವ ಎಸ್ಕೇಪ್ ಆಗಿದ್ದು, ಮತ್ತೊಬ್ಬ ಸೆರೆ ಸಿಕ್ಕಿದ್ದಾನೆ. ಕಳ್ಳನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸರಗಳ್ಳರಿಗೆ ಕೊರೊನಾ ದೃಢ: ಹಿಡಿದುಕೊಟ್ಟ ಗ್ರಾಮಸ್ಥರು, ಪೊಲೀಸರಿಗೆ ಢವಢವ..!
ಸರ ಕಿತ್ತು ಎಸ್ಕೇಪ್ ಆಗುವ ಭರದಲ್ಲಿ ಸರಗಳ್ಳರು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದೂ ಆರೋಪಿಸಲಾಗಿದೆ. ಪ್ರಕರಣ ಸಂಬಂಧ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಲಾಕ್ಡೌನ್ ಸಡಿಲಿಕೆ ಬಳಿಕ ಗ್ರಾಮೀಣ ಭಾಗದಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಕಳೆದ ಎರಡು ದಿನಗಳ ಹಿಂದೆ ರಾಮನಗರ - ಮಾಗಡಿ ಹೆದ್ದಾರಿಯಲ್ಲಿ ಸರಗಳ್ಳತನ ನಡೆದಿತ್ತು. ಮೂರು ದಿನಗಳ ಹಿಂದೆಯಷ್ಟೇ ಕನಕಪುರ ತಾ. ಕಬ್ಬಾಳು ಬಳಿ ಇಬ್ಬರು ಸರಗಳ್ಳರು ಸೆರೆ ಸಿಕ್ಕಿದ್ದರು. ಕುರಿಗಾಹಿ ಮಹಿಳೆಯ ಸರ ಕಿತ್ತು ಎಸ್ಕೇಪ್ ಆಗಲು ಯತ್ನಿಸುತ್ತಿದ್ದ ವೇಳೆ ಸಾರ್ವಜನಿಕರ ಕೈಗೆ ಖದೀಮರು ಸಿಕ್ಕಿಬಿದ್ದಿದ್ದರು.
Viral Video : ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಸರ ಎಳೆದು ಎಸ್ಕೇಪ್!
ಗ್ರಾಮೀಣ ಭಾಗದ ಒಂಟಿ ರೈತ ಮಹಿಳೆಯರೇ ಸರಗಳ್ಳರ ಟಾರ್ಗೆಟ್ ಆಗುತ್ತಿದ್ದಾರೆ. ಆರೋಪಿಗಳೆಲ್ಲರೂ ರಾಮನಗರ ಜಿಲ್ಲೆಗೆ ಸೇರಿದವರೇ ಅನ್ನೋದು ವಿಶೇಷ. ಹೀಗಾಗಿ, ಪೊಲೀಸರ ಜೊತೆಗೆ ಸಾರ್ವಜನಿಕರು ಸಹಕರಿಸಬೇಕಾದ್ದು, ಎಚ್ಚರಿಕೆಯಿಂದ ಇರಬೇಕಾದ್ದು ಅನಿವಾರ್ಯವಾಗಿದೆ.
ಸಿಗರೇಟ್ ಸೇದುತ್ತಿದ್ದ ವ್ಯಕ್ತಿಯ ಸರಗಳವು..! ಮೈಸೂರಿನ ಕ್ರೈಂ ನ್ಯೂಸ್ ರೌಂಡ್ ಅಪ್..