ಆ್ಯಪ್ನಗರ

ಪೊಲೀಸರಿಗೆ ಸವಾಲು, ಜೈಲು ಪಾಲು

ಇದೊಂದು ವಿಚಿತ್ರ ಪ್ರಕರಣ. ಹೆಲ್ಮೆಟ್‌ ಧರಿಸಿ ಸುರಕ್ಷಿತ ಪ್ರಯಾಣ ಮಾಡಿ ಎಂದ ಪೊಲೀÓ Üರನ್ನೇ ವಾಚಾಮಗೋಚರ ಬೈದು ಜೈಲು ಪಾಲಾದ ಯುವಕರಿಬ್ಬರ ಕತೆಯಿದು.

Vijaya Karnataka 18 Oct 2019, 5:00 am
ರಾಮನಗರ: ಇದೊಂದು ವಿಚಿತ್ರ ಪ್ರಕರಣ. ಹೆಲ್ಮೆಟ್‌ ಧರಿಸಿ ಸುರಕ್ಷಿತ ಪ್ರಯಾಣ ಮಾಡಿ ಎಂದ ಪೊಲೀÓ Üರನ್ನೇ ವಾಚಾಮಗೋಚರ ಬೈದು ಜೈಲು ಪಾಲಾದ ಯುವಕರಿಬ್ಬರ ಕತೆಯಿದು.
Vijaya Karnataka Web challenge to police jail share
ಪೊಲೀಸರಿಗೆ ಸವಾಲು, ಜೈಲು ಪಾಲು

ಅಷ್ಟೇ ಅಲ್ಲ, ಬಹುಶಃ ಹೆಲ್ಮೆಟ್‌ ಧರಿಸದ ಚಿಕ್ಕ ವಿಷಯ ಕ್ಕೆ ಜೈಲು ಪಾಲಾಗಿರುವ ರಾಜ್ಯದ ಮೊದಲ ಪ್ರಕರಣ ಇದು ಇದ್ದರೂ ಇರಬಹುದು. ಫೇಸ್‌ಬುಕ್‌ನಲ್ಲಿಪೌರುಷ: ಕುದೂರಿನ ಬೈಪಾಸ್‌ ರಸ್ತೆಯಲ್ಲಿಮಂಗಳವಾರ ಮಧ್ಯಾಹ್ನ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ಹೆಲ್ಮೆಟ್‌ ಧರಿಸದೇ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸೋಲೂರಿನ ಕಿರಣ್‌ಕುಮಾರ್‌ ಅಲಿಯಾಸ್‌ ಮೈಕಲ್‌ (35) ಕಂಡಿದ್ದಾರೆ. ಅವರನ್ನು ತಡೆದ ಪೊಲೀಸರು, ಹೆಲ್ಮೆಟ್‌ ಹಾಕದ್ದಕ್ಕಾಗಿ 500 ರೂ. ದಂಡ ವಿಧಿಸಿದ್ದಾರೆ.
ಇದರಿಂದ ಕೋಪಗೊಂಡಿದ್ದ ಕಿರಣ್‌ಕುಮಾರ್‌, ಫೇಸ್‌ಬುಕ್‌ ಲೈವ್‌ನಲ್ಲಿಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ''ನಾನು ಲೋಕಲ್‌, ನಿತ್ಯ ಈ ರಸ್ತೆಯಲ್ಲೇ ಓಡಾಡುತ್ತೇನೆ, ಸ್ಥಳೀಯರಾರ‍ಯರು ಹೆಲ್ಮೆಟ್‌ ಹಾಕಬೇಕಿಲ್ಲ. ಇದು ಪೊಲೀಸರ ಹಗಲು ದರೋಡೆ. ಫೈನ್‌ ಹಣವನ್ನು ಪೊಲೀಸರು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಇದನ್ನು ಖಜಾನೆಯಲ್ಲಿವಿಚಾರಿಸಬೇಕು,'' ಎಂದೆಲ್ಲಬಡಬಡಾಯಿಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೇ ಕೆಲವು ಪುಂಡರನ್ನು ಕಟ್ಟಿಕೊಂಡು ಪಿಎಸ್‌ಐಗೆ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಈತನ ಪುಂಡಾಟದಿಂದ ರೋಶಿ ಹೋದ ಪೊಲೀಸರು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿಕಿರಣ್‌ ಕುಮಾರ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ರಾಮನಗರದಲ್ಲಿಯೂ ರಂಪಾಟ: ರಾಮನಗರದಲ್ಲಿಬುಧವಾರ ಮಧ್ಯಾಹ್ನ ನಡೆದಿದ್ದು ಇನ್ನೂ ವಿಚಿತ್ರ ಪ್ರಕರಣ. ರಾಮನಗರದ ಸಂಚಾರಿ ಪೊಲೀಸ್‌ ಠಾಣೆ ಮುಂಭಾಗ ಹೆಲ್ಮೆಟ್‌ ಧರಿಸದೇ ಸಂಚರಿಸುತ್ತಿದ್ದ ರೆಹ್ಮನಿಯ ನಗರದ ನದೀಮ್‌ ಪಾಶ (29), ಪ್ರಶ್ನಿಸಿದ ಪೊಲೀಸರಿಗೆ ಆವಾಜ್‌ ಹಾಕಿದ್ದಲ್ಲದೇ ಅವರು ನೀಡಿದ 500 ರೂ. ದಂಡದ ರಶೀದಿಯನ್ನು ಪೊಲೀಸರ ಎದುರೇ ಹರಿದು ಬಿಸಾಡಿದ್ದಾನೆ. ''ಅದೇನು ಮಾಡ್ಕೊತ್ತಿರಾ ಮಾಡ್ಕೊಳಿ,'' ಎಂದು ಆವಾಜ್‌ ಹಾಕಿ ಬೈಕ್‌ ಸ್ಟಾರ್ಟ್‌ ಮಾಡಿದ ಪಾಶನನ್ನು ಬಂಧಿಸಿದ ಪೊಲೀಸರು, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಲಾಕಪ್‌ಗೆ ತಳ್ಳಿದ್ದಾರೆ. ಈ ಇಬ್ಬರೂ ಆರೋಪಿಗಳನ್ನು ಕೋರ್ಟ್‌ ಮುಂದೆ ಹಾಜರುಪಡಿಸಲಾಗಿದ್ದು, ಇವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ