ಆ್ಯಪ್ನಗರ

ಬಾಲ್ಯ ವಿವಾಹ ಪದ್ಧತಿ: ಜಾಗೃತಿ ಅಭಿಯಾನ

ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಕಂಸಾಗರ ಗ್ರಾಮದ ಅಂಬೇಡ್ಕರ್‌ ಪ್ರೌಢಶಾಲೆ ಆವರಣದಲ್ಲಿ ಬಾಲ್ಯ ವಿವಾಹ ಪದ್ಧತಿ ವಿರುದ್ಧ ಜಾಗೃತಿ ಅಭಿಯಾನವನ್ನು ...

Vijaya Karnataka 6 Jan 2019, 5:00 am
ಸಾತನೂರು: ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಕಂಸಾಗರ ಗ್ರಾಮದ ಅಂಬೇಡ್ಕರ್‌ ಪ್ರೌಢಶಾಲೆ ಆವರಣದಲ್ಲಿ ಬಾಲ್ಯ ವಿವಾಹ ಪದ್ಧತಿ ವಿರುದ್ಧ ಜಾಗೃತಿ ಅಭಿಯಾನವನ್ನು ಶ್ರೀವೀರಾಂಜನೇಯ ಸ್ವಾಮಿ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್‌ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
Vijaya Karnataka Web child marriage system awareness campaign
ಬಾಲ್ಯ ವಿವಾಹ ಪದ್ಧತಿ: ಜಾಗೃತಿ ಅಭಿಯಾನ


ನಗರಸಭೆ ಕಾನೂನು ಸಲಹೆಗಾರ ಮತ್ತು ವಕೀಲ ಕಾಮೇಶ ಅವರು ಮಾತನಾಡಿ, ''ಬಾಲ್ಯವಿವಾಹ ಸಮಾಜದ ಒಂದು ಪಿಡುಗಾಗಿತ್ತು. ಇದನ್ನು ಹೋಗಲಾಡಿಸಲು ಸಮಾಜದ ಎಲ್ಲಾ ವರ್ಗದ ಜನರು ಕೈಜೋಡಿಸಬೇಕು. ಮಕ್ಕಳು ಮತ್ತು ಷೋಷಕರು ಸಹ ಜಾಗೃತರಾಗಬೇಕು. ಬಾಲ್ಯವಿವಾಹಕ್ಕೆ ಕಾನೂನಿನಲ್ಲಿ ಕಠಿಣ ಶಿಕ್ಷೆಗಳಿವೆ,'' ಎಂದು ಎಚ್ಚರಿಸಿದ್ದರು .

ಸಾತನೂರಿನ ಆರಕ್ಷ ಕ ಉಪನೀರಿಕ್ಷ ಕ ಮುರಳಿ ಮಾತನಾಡಿ, ''ಬಾಲ್ಯ ವಿವಾಹವನ್ನು ತಡೆಗಟ್ಟಲು ಜನರ ಸಹಕಾರ ಮುಖ್ಯ ಮತ್ತು ಬಾಲ್ಯ ವಿವಾಹದ ಬಗ್ಗೆ ಮಾಹಿತಿ ಸಿಕ್ಕರೆ ನಮಗೆ ತಿಳಿಸಿ ನಾವು ಕಾನೂನಿನ ಕ್ರಮ ಕೈಗೊಳ್ಳುತ್ತೇವೆ,'' ಎಂದು ಹೇಳಿದರು .

ಕಾರ‍್ಯಕ್ರಮದ ಅಧ್ಯಕ್ಷ ತೆಯನ್ನು ಅಂಬೇಡ್ಕರ್‌ ಪ್ರೌಢಶಾಲೆಯ ಮುಖ್ಯೋಪಾಧ್ಯಯ ಸಿ ಪುಟ್ಟಸ್ವಾಮಿ ಅವರು ಮಾತನಾಡಿ, ''ಗ್ರಾಮೀಣ ಪ್ರದೇಶದಲ್ಲಿ ಬಾಲ್ಯವಿವಾಹಗಳು ಇನ್ನೂ ಜೀವಂತವಾಗಿವೆæ. ಬಾಲ್ಯವಿವಾಹದ ಬಗ್ಗೆ ಜಾಗೃತಿ ಮೂಡಿಸುವ ಇಂತಹ ಕಾರ‍್ಯಕ್ರಮಗಳು ಹೆಚ್ಚಾಗಿ ಜರುಗಬೇಕು,'' ಎಂದು ಹೇಳಿದರು .

ಸಾತನೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕೆಂಪಮ್ಮ ಕಾಳಮಂಚಯ್ಯ, ತಾಲೂಕು ಹಿರಿಯ ಪ್ರಾಥಮಿಕ ಮುಖ್ಯ ಶಿಕ್ಷ ಕಕರ ಸಂಘದ ಅದ್ಯಕ್ಷ ರಾಮು ಮಾತನಾಡಿದರು .

ಆಯೋಜಕ ಗೋವಿಂದರಾಜು ಎಲ್ಲರನ್ನೂ ಸ್ವಾಗತಿಸಿದರು. ಪ್ರಗತಿ ಕ್ರಾಂತಿ ಚಳವಳಿ ವೇದಿಕೆಯ ತಾಲೂಕು ಅಧ್ಯಕ್ಷ ಮಧು ಕುಮಾರ್‌ ಜನಪದ ಗಾಯನವನ್ನು ನಡೆಸಿಕೊಟ್ಟರು. ಆಲ್‌ ಇಂಡಿಯಾ ಟ್ರಕ್‌ ಕಮಿಟಿ ರಾಮನಗರ ಜಿಲ್ಲಾ ಅಧ್ಯಕ್ಷೆ ಸರೋಜಮ್ಮ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಸುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ