ಆ್ಯಪ್ನಗರ

ಹೋಳಿ ಹುಣ್ಣಿಮೆ ಪ್ರಯುಕ್ತ ಚುಳುಕನಬೆಟ್ಟ ಗಿರಿಪ್ರದಕ್ಷಿಣೆ

ಕನಕಪುರ ಪತಂಜಲಿ ಯೋಗಸಮಿತಿ ಮತ್ತು ಹಾರೋಹಳ್ಳಿ ಟ್ರಕ್ಕಿಂಗ್‌ ಟ್ರೂಪ್‌ ವತಿಯಿಂದ ಹೋಳಿ ಹುಣ್ಣಿಮೆ ಪ್ರಯುಕ್ತ ಚುಳುಕನಬೆಟ್ಟ ಗಿರಿಪ್ರದಕ್ಷಿಣೆ ಕಾರ್ಯಕ್ರಮ ನಡೆಯಿತು.

Vijaya Karnataka 24 Mar 2019, 5:00 am
ಹಾರೋಹಳ್ಳಿ (ಕನಕಪುರ ತಾ.): ಕನಕಪುರ ಪತಂಜಲಿ ಯೋಗಸಮಿತಿ ಮತ್ತು ಹಾರೋಹಳ್ಳಿ ಟ್ರಕ್ಕಿಂಗ್‌ ಟ್ರೂಪ್‌ ವತಿಯಿಂದ ಹೋಳಿ ಹುಣ್ಣಿಮೆ ಪ್ರಯುಕ್ತ ಚುಳುಕನಬೆಟ್ಟ ಗಿರಿಪ್ರದಕ್ಷಿಣೆ ಕಾರ್ಯಕ್ರಮ ನಡೆಯಿತು.
Vijaya Karnataka Web chulukanahill climbing programme in harohalli
ಹೋಳಿ ಹುಣ್ಣಿಮೆ ಪ್ರಯುಕ್ತ ಚುಳುಕನಬೆಟ್ಟ ಗಿರಿಪ್ರದಕ್ಷಿಣೆ


ಟ್ರಕ್ಕಿಂಗ್‌ಟ್ರೂಪ್‌ನ ಮುಖ್ಯಸ್ಥ ಪೊಲೀಸ್‌ ಇಲಾಖೆಯ ಪ್ರಭುಸ್ವಾಮಿ ಮಾತನಾಡಿ, ಹೋಳಿ ಹುಣ್ಣಿಮೆ ಮತ್ತು ಹಾರೋಹಳ್ಳಿ ಗ್ರಾಮದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಜಾತ್ರೆ ಮತ್ತು ಬ್ರಹ್ಮರಥೋತ್ಸವ ಒಟ್ಟೊಟ್ಟಿಗೆ ಆಚರಿಸಲಾಗುತ್ತಿದೆ. ಇಂತಹ ಹಬ್ಬವನ್ನು ಗ್ರಾಮೀಣ ಪ್ರದೇಶದಲ್ಲಿ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಿ ಸುಖಸಂಸಾರದ ಜೀವನ ನಡೆಸಲು ಜನರು ದೇವಿಯ ಹಬ್ಬದಲ್ಲಿ ಮೊರೆ ಹೋಗುತ್ತಾರೆ. ಅದೇರೀತಿಹೋಳಿ ಹಬ್ಬವೂ ಕೂಡ ದೇಶದಾದ್ಯಂತ ಜಗತ್ಪ್ರಸಿದ್ಧಿಯಾಗಿದ್ದು ಯುವಕರು, ಯುವತಿಯರು ಸ್ನೇಹ ಮತ್ತು ಬಾಂಧವ್ಯಕ್ಕೆ ಪರಸ್ಪರ ಬಣ್ಣಹಚ್ಚಿಕೊಂಡು ಸಂಭ್ರಮಿಸುತ್ತಾರೆ. ಇಂತಹ ಹಬ್ಬಗಳು ನಮ್ಮ ಭಾರತೀಯ ಸಂಸ್ಕೃತಿಯ ಸಂಕೇತವಾಗಿವೆ. ಪ್ರತಿ ಹುಣ್ಣಿಮೆಯಂತೆ 20ನೇ ಬಾರಿಯ ಗಿರಿಪ್ರದಕ್ಷಿಣೆ ಇದಾಗಿದೆ. ನಮ್ಮ ನಡಿಗೆ ಪ್ರಕೃತಿ ಎಡೆಗೆ ಎನ್ನುವಂತೆ ಪರಿಸರದ ಉಳಿವಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎನ್ನುವ ಸಂದೇಶ ಸಾರುತ್ತಾ ಈ ಪ್ರದಕ್ಷಿಣೆ ನಡೆಸಲಾಗುತ್ತಿದೆ ಎಂದರು.

ಗ್ರಾ.ಪಂ. ಸದಸ್ಯರಾದ ಹನುಮಂತು, ಬಾಲಾಜಿ, ಪಿರಮಿಡ್‌ ನಾಗಣ್ಣ, ಶ್ರೀನಿವಾಸ್‌, ಮಹೇಶ್‌, ಶಿವರಾಜ್‌, ಶಾಂತಮ್ಮ, ರುಕ್ಷ್ಮಿಣಮ್ಮ, ಸೌಭಾಗ್ಯಮ್ಮ, ವೆಂಕಟೇಶ್‌, ಪ್ರಕಾಶ್‌, ಮಾರಸಂದ್ರ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ