ಆ್ಯಪ್ನಗರ

ಪೌರಕಾರ್ಮಿಕರ ಸೇವೆ ಅನನ್ಯ

ತಮ್ಮ ಆರೋಗ್ಯ ಕಡೆಗಣಿಸಿ, ಸಾರ್ವಜನಿಕರ ಆರೋಗ್ಯ ಕಾಪಾಡುವ ಪೌರಕಾರ್ಮಿಕರು ಸಮಾಜದ ಆಸ್ತಿ ಎಂದು ನಗರಸಭೆ ಆಯುಕ್ತ ಪುಟ್ಟಸ್ವಾಮಿ ಹೇಳಿದರು...

Vijaya Karnataka 20 Dec 2018, 5:00 am
ಚನ್ನಪಟ್ಟಣ: ತಮ್ಮ ಆರೋಗ್ಯ ಕಡೆಗಣಿಸಿ, ಸಾರ್ವಜನಿಕರ ಆರೋಗ್ಯ ಕಾಪಾಡುವ ಪೌರಕಾರ್ಮಿಕರು ಸಮಾಜದ ಆಸ್ತಿ ಎಂದು ನಗರಸಭೆ ಆಯುಕ್ತ ಪುಟ್ಟಸ್ವಾಮಿ ಹೇಳಿದರು.
Vijaya Karnataka Web civilian service is unique
ಪೌರಕಾರ್ಮಿಕರ ಸೇವೆ ಅನನ್ಯ


ಪಟ್ಟಣದ ಪುರಭವನದ ಆವರಣದಲ್ಲಿ ಆಯೋಜಿಸಲಾಗಿದ್ದ ನಗರಸಭೆ ಮತ್ತು ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ಆಶ್ರಯದಲ್ಲಿ ಪೌರಕಾರ್ಮಿಕರ ದಿನಾಚರಣೆ ಉದ್ಘಾಟನೆ ಮಾಡಿ ಮಾತನಾಡಿದರು. ಪೌರಕಾರ್ಮಿಕರನ್ನು ಸಮಾಜ ನೋಡುವ ದೃಷ್ಟಿಕೋನ ಬದಲಾಯಿಸಿಕೊಳ್ಳಬೇಕು. ಪ್ರತಿನಿತ್ಯ ತಮ್ಮ ಜೀವನವನ್ನು ಬದಿಗೊತ್ತಿ ಸ್ವಚ್ಛತಾ ಕಾರ್ಯದಲ್ಲಿ ಮಗ್ನರಾಗಿ, ನಿತ್ಯದ ಕರ್ತವ್ಯವನ್ನು ಮುಗಿಸುವ ಅವರನ್ನು ಗೌರವದಿಂದ ಕಾಣಬೇಕು. ಎಂದರು.

ಪೌರಕಾರ್ಮಿಕರು ಮುಂಜಾನೆ ಜನರೇಳುವ ಮೊದಲೇ ಮಳೆ, ಗಾಳಿ, ನಡುಗುವ ಚಳಿಯಲ್ಲಿ ರಸ್ತೆ, ಚರಂಡಿ ಎನ್ನದೆ ಪ್ರತಿಯೊಂದು ಮನೆಯ ಮುಂದಿನ ಸ್ವಚ್ಛತೆ ಮಾಡುವ ಪೌರಕಾರ್ಮಿಕರು ತಮ್ಮ ಕುಟುಂಬದ ಸುರಕ್ಷತೆ ಬಗ್ಗೆಯೂ ಯೋಚನೆ ಮಾಡಬೇಕು. ತಮ್ಮ ಕುಟುಂಬದ ರಕ್ಷ ಣೆಗಾದರೂ ಕುಡಿತದ ಚಟ ಬಿಡಬೇಕು. ಜತೆಗೆ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡಬೇಕು. ಪೌರಕಾರ್ಮಿಕರ ಮಕ್ಕಳು ಪೌರಕಾರ್ಮಿಕರೇ ಆಗಬೇಕು ಎಂಬ ಧೋರಣೆ ಸರಿಯಲ್ಲ. ಕಾರ್ಮಿಕರಿಗೆ ಸರಕಾರ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ವಿಶೇಷವಾದ ಯೋಜನೆಗಳನ್ನು ರೂಪಿಸುತ್ತಿದೆ. ಹಂತಹಂತವಾಗಿ ಯೋಜನೆಗಳು ಫಲಪ್ರದವಾಗುತ್ತವೆ ಎಂದು ತಿಳಿಸಿದರು.

ಪೌರಸೇವಾ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜು ಮಾತನಾಡಿ, ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ ನೀಡಿರುವ ಸಂವಿಧಾನದಲ್ಲಿ ಹಿಂದುಳಿದ ವರ್ಗದವರಿಗೆ ದೊರೆಯಬೇಕಾದ ಸೌಲಭ್ಯಗಳು ಇನ್ನು ದೊರೆಯದಿರುವುದು ವಿಷಾದದ ಸಂಗತಿಯಾಗಿದೆ ಎಂದು ತಿಳಿಸಿದರು.

ಪೌರಕಾರ್ಮಿಕರಿಗೆ ಸರಕಾರ ಅವರ ಕರ್ತವ್ಯಕ್ಕೆ ತಕ್ಕಂತೆ ಸೇವಾವಧಿಯ ಆಧಾರದ ಮೇಲೆ ನಿವೇಶನಗಳ ಹಂಚಿಕೆ ಮಾಡಬೇಕು. ಜತೆಗೆ ಪೌರಕಾರ್ಮಿಕರಿಗಾಗಿ ಸರಕಾರ ವಿವಿಧ ಮೂಲಭೂತ ಸೌಕರ್ಯಗಳನ್ನು ನೀಡಬೇಕು ಎಂದರು.

ನಗರಸಭೆ ಸದಸ್ಯ ಮುದ್ದುಕೃಷ್ಣೇಗೌಡ, ಎಸ್‌. ಉಮಾಶಂಕರ್‌, ಅಮೀದ್‌ ಮುನ್ನಾವರ್‌, ಲೋಕೇಶ್‌, ವೆಂಕಟೇಶ್‌, ಉಜ್ಮಾಇಶ್ರತ್‌, ರಾಮು ಮಾತನಾಡಿದರು. ನಗರಸಭೆ ಅಧ್ಯಕ್ಷೆ ನಜ್ಮುನ್ನಿಸಾ ಉಪಾಧ್ಯಕ್ಷೆ ಸರಳ, ನಗರಸಭೆ ಸದಸ್ಯ ನಂದೀಶ್‌, ಲಿಯಾಕತ್‌ ಆಲಿಖಾನ್‌, ಜಕೀಯಾ ಮಹಮ್ಮದ್‌, ಮಂಜುನಾಥ್‌ ,ಶಂಕರ್‌, ಖಮ್ಮರ್‌ ನಿಜಾಮಿ, ಸನ್ನಾಉಲ್ಲಾಖಾನ್‌, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಶ್‌, ಉಪಾಧ್ಯಕ್ಷ ಎಂ.ಟಿ.ವೆಂಕಟೇಶ್‌ ಹಾಗೂ ಹಲವಾರು ಮಂದಿ ಹಾಜರಿದ್ದರು.

ಈ ಸಂದರ್ಭದಲ್ಲಿ ನಗರಸಭೆ ಪೌರಕಾರ್ಮಿಕ ವಿಭಾಗದಲ್ಲಿ ಉತ್ತಮ ಸೇವೆ ಸಲ್ಲಿಸಿದ ನಾಲ್ಕು ಮಂದಿಗೆ ಸನ್ಮಾನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ