ಆ್ಯಪ್ನಗರ

ನಗರಸಭೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ: ಸಚಿವರು, ಸಂಸದರ ಪೋಟೊಕ್ಕಿಲ್ಲ ಕೊಕ್‌

ಲೋಕಸಭೆ ಚುನಾವಣೆ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ದೇಶಾದ್ಯಂತ ನೀತಿ ಸಂಹಿತೆ ಜಾರಿಗೆ ಬಂದಿದೆ. ಕನಕಪುರದೆಲ್ಲೆಡೆ ಇದು ಜಾರಿಗೆ ಬಂದಿದ್ದರೂ ನಗರಸಭೆಗೆ ಇದು ಅನ್ವಯವಾಗದಿರುವುದು ಅಚ್ಚರಿ ಮೂಡಿಸಿದೆ.

Vijaya Karnataka 12 Mar 2019, 5:00 am
ಕನಕಪುರ: ಲೋಕಸಭೆ ಚುನಾವಣೆ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ದೇಶಾದ್ಯಂತ ನೀತಿ ಸಂಹಿತೆ ಜಾರಿಗೆ ಬಂದಿದೆ. ಕನಕಪುರದೆಲ್ಲೆಡೆ ಇದು ಜಾರಿಗೆ ಬಂದಿದ್ದರೂ ನಗರಸಭೆಗೆ ಇದು ಅನ್ವಯವಾಗದಿರುವುದು ಅಚ್ಚರಿ ಮೂಡಿಸಿದೆ.
Vijaya Karnataka Web code of conduct violation in the municipal council ministers mps patokilla coke
ನಗರಸಭೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ: ಸಚಿವರು, ಸಂಸದರ ಪೋಟೊಕ್ಕಿಲ್ಲ ಕೊಕ್‌


ನೀತಿ ಸಂಹಿತೆ ಜಾರಿಗೆ ಬರುತ್ತಿದ್ದಂತೆ ನಗರಸಭೆ ವ್ಯಾಪ್ತಿಯಲ್ಲಿರುವ ರಾಜಕಾರಣಿಗಳ ಬ್ಯಾನರ್‌, ಬಂಟಿಂಗ್ಸ್‌ ಸೇರಿದಂತೆ ಎಲ್ಲ ಪ್ರಚಾರ ಸಾಮಗ್ರಿಗಳನ್ನೂ ತೆರವುಗೊಳಿಸಲಾಗಿದೆ. ಆದರೆ, ಕನಕಪುರ ನಗರಸಭೆಯಲ್ಲಿ ಮಾತ್ರ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌, ವಿಧಾನಪರಿಷತ್‌ ಸದಸ್ಯ ಎಸ್‌.ರವಿ ಅವರ ಚಿತ್ರಗಳು ರಾರಾಜಿಸುತ್ತಿವೆ.

ಅಧ್ಯಕ್ಷರಿಗೆ ಅರಿವಿಲ್ಲವೇ?: ನೀತಿ ಸಂಹಿತೆ ಉಲ್ಲಂಘನೆ ಆಗಿರುವುದು ತಿಳಿವಳಿಕೆ ಇಲ್ಲದವರಿಂದಲ್ಲ. ಚುನಾವಣೆ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಯಾಗುವುದನ್ನು ಖಚಿತಪಡಿಸಿಕೊಳ್ಳಬೇಕಾದ ನಗರಸಭೆಯ ಅಧ್ಯಕ್ಷರ ಕೊಠಡಿಯಲ್ಲೇ ಕಾಂಗ್ರೆಸ್‌ ನಾಯಕರ ಚಿತ್ರಗಳನ್ನು ಹಾಕಿಕೊಳ್ಳಲಾಗಿದೆ.

ಬೇಕೆಂದೇ ಮಾಡಲಾಗಿದೆ: ನಗರಸಭೆ ಅಧ್ಯಕ್ಷರ ಕೊಠಡಿಗೆ ಭಾನುವಾರ ಸಂಜೆಯೇ ಬೀಗ ಜಡಿಯಬೇಕಿತ್ತು. ಕೆಲಸ ಮಾಡುವುದಿದ್ದರೂ ನೀತಿಸಂಹಿತೆಗೆ ಧಕ್ಕೆಯಾಗದಂತೆ ಸಚಿವರು, ಸಂಸದರು ಮತ್ತು ಎಂಎಲ್‌ಸಿ ಚಿತ್ರಗಳನ್ನು ತೆರವುಗೊಳಿಸಬೇಕಿತ್ತು. ಆದರೆ, ಇದೊಂದೂ ಆಗದಿರುವುದನ್ನು ನೋಡಿದರೆ ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಿದಂತಿದೆ ಎಂಬುದು ಸಾರ್ವಜನಿಕರ ಆರೋಪ

ಸ್ಥಳಿಯ ಸಂಸ್ಥೆಗಳು ಹಾಗು ಇನ್ನಿತರ ಸ್ಥಳಗಳಲ್ಲಿ ರಾಜಕಾರಣಿಗಳ ಬ್ಯಾನರ್‌ ಮತ್ತು ಬಂಟಿಗ್ಸ್‌ ಮತ್ತು ಭಾವಚಿತ್ರಗಳನ್ನು ತೆರವುಗೊಳಿಸಲು ಚುನಾವಣೆ ವೇಳಾಪಟ್ಟಿ ಘೋಷಣೆಯಾದ ಕ್ಷಣದಿಂದ 48 ಗಂಟೆಗಳ ಕಾಲಾವಕಾಶವಿದೆ. ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ರಾಜಕಾರಣಿಗಳ ಭಾವಚಿತ್ರ, ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗುವುದು.
- ರಮೇಶ್‌, ಎನ್‌.ಆರ್‌. ಸಹಾಯಕ ಚುನಾವಣಾಧಿಕಾರಿಗಳು ಕನಕಪುರ ವಿಧಾನಸಭಾ ಕ್ಷೇತ್ರ.

ಚುಣಾವಣೆ ಘೋಷಣೆಯಾಗುತ್ತಿದ್ದಂತೆ ನೀತಿ ಸಂಹಿತೆ ಜಾರಿಯಾಗುತ್ತದೆ. ಅದರಂತೆ ನಮ್ಮ ಅಧಿಕಾರಿಗಳಿಗೆ ಈ ಬಗ್ಗೆ ನಿರ್ದೇಶನ ನೀಡಿದ್ದು, ನಗರದ ಎಲ್ಲಾ ಸ್ಥಳಗಳಲ್ಲಿ ಇದ್ದ ಬ್ಯಾನರ್‌ ಮತ್ತು ಬಂಟಿಂಗ್ಸ್‌ ತೆರವುಗೊಳಿಸಲಾಗುತ್ತಿದೆ. ಕಚೇರಿಯಲ್ಲೂ ಸಹ ಮಂತ್ರಿಗಳು ಸೇರಿದಂತೆ ಎಲ್ಲರ ಭಾವಚಿತ್ರ ತೆರವುಗೊಳಿಸುವಂತೆ ಸೂಚಿಸಲಾಗಿತ್ತು, ಅಧಿಕಾರಿಗಳು ಇದನ್ನು ಮರೆತಂತಿದೆ.ತಕ್ಷ ಣ ತೆರವುಗೊಳಿಸಲಾಗುವುದು .
-ರಮಾಮಣಿ ನಗರಸಭೆ ಆಯುಕ್ತೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ