ಆ್ಯಪ್ನಗರ

ಜನರ ಕೆಲಸ ಬೇಗ ಮಾಡಿಕೊಡಲು ಕಟ್ಟಾಜ್ಞೆ

ಚಿಕ್ಕಪುಟ್ಟ ಕೆಲಸಗಳಿಗೂ ಜನರು ತಾಲೂಕು ಕಚೇರಿಗೆ ಅಲೆಯದಂತೆ ಅವರ ಕೆಲಸ ಗಳನ್ನು ತಕ್ಷಣವೇ ಮಾಡಿಕೊಡಬೇಕು. ಸಾಧ್ಯವಾದಷ್ಟು ಕೆಲಸಗಳನ್ನು ಗ್ರಾಮೀಣ ಭಾಗದಲ್ಲಿಕಂದಾಯ ಇಲಾಖೆ ಮಟ್ಟದಲ್ಲೇ ಮಾಡಿಕೊಡಬೇಕು ಎಂದು ತಹಸೀಲ್ದಾರ್‌ ಸುದರ್ಶನ್‌ ಅಧಿಕಾರಿಗಳಿಗೆ ಆದೇಶಿಸಿದರು.

Vijaya Karnataka 29 Aug 2019, 3:26 pm
ಚನ್ನಪಟ್ಟಣ: ಚಿಕ್ಕಪುಟ್ಟ ಕೆಲಸಗಳಿಗೂ ಜನರು ತಾಲೂಕು ಕಚೇರಿಗೆ ಅಲೆಯದಂತೆ ಅವರ ಕೆಲಸ ಗಳನ್ನು ತಕ್ಷಣವೇ ಮಾಡಿಕೊಡಬೇಕು. ಸಾಧ್ಯವಾದಷ್ಟು ಕೆಲಸಗಳನ್ನು ಗ್ರಾಮೀಣ ಭಾಗದಲ್ಲಿಕಂದಾಯ ಇಲಾಖೆ ಮಟ್ಟದಲ್ಲೇ ಮಾಡಿಕೊಡಬೇಕು ಎಂದು ತಹಸೀಲ್ದಾರ್‌ ಸುದರ್ಶನ್‌ ಅಧಿಕಾರಿಗಳಿಗೆ ಆದೇಶಿಸಿದರು.
Vijaya Karnataka Web command to get peoples work done quickly
ಜನರ ಕೆಲಸ ಬೇಗ ಮಾಡಿಕೊಡಲು ಕಟ್ಟಾಜ್ಞೆ

ತಾಲೂಕಿನ ಮುದಗೆರೆ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿಆಯೋಜಿಸಲಾಗಿದ್ದ ಪಿಂಚಣಿ ಅದಾಲತ್‌ ಹಾಗೂ ವಿವಿಧ ರೀತಿಯ ರೈತರ ಸಮಸ್ಯೆ ಗಳಿಗೆ ಪರಿಹಾರ ಕಾರ್ಯಕ್ರಮದಲ್ಲಿಸಾರ್ವಜನಿಕರಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು. ಒಂದೇ ಸೂರಿನಡಿ ಕೆಲಸ: ರೈತರ ಸಮಸ್ಯೆಗಳಿಗೆ ಹಾಗೂ ವಿವಿಧ ರೀತಿಯಲ್ಲಿಮಾಶಾಸನ ಪಡೆಯದೆ ಇರುವ ಮಂದಿಗೆ ಒಂದೇ ಸೂರಿನಡಿ ಎಲ್ಲಾಕೆಲಸ ಮಾಡಿ ಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸ ಲಾಗುತ್ತದೆ.
ಸಣ್ಣ ಸಮಸ್ಯೆಗಳಿಗೆ ಜನರು ತಮ್ಮ ಕೆಲಸ ಕಾರ‍್ಯ ಬಿಟ್ಟು ವಿನಾಕಾರಣ ತಾಲೂಕು ಕಚೇರಿಗೆ ಅಲೆಯುತ್ತಿರು ವುದನ್ನು ಕೇಳಿ ತುಂಬಾ ಬೇಸರವಾಗುತ್ತಿದೆ. ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರ ಬೇಜಾವಾಬ್ದಾರಿಯಿಂದ ಇಂತಹ ಲೋಪ ಆಗುತ್ತಿದೆ. ಮುಂದಿನ ದಿನಗಳಲ್ಲಿಈ ರೀತಿಯ ಸಮಸ್ಯೆಗಳು ತಲೆದೋರ ದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು. ನೂರಾರು ಮಂದಿ ಹಲವಾರು ಸಮಸ್ಯೆಗಳ ಬಗ್ಗೆ ಮನವಿ ಪತ್ರ ಸಲ್ಲಿಸಿ, ತಾವು ಪಡುತ್ತಿರುವ ಪಾಡನ್ನು ತೋಡಿಕೊಂಡರು. ಇಲಾಖೆ ಅಧಿಧಿಕಾರಿಗಳು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ