ಆ್ಯಪ್ನಗರ

ಪ್ರತಿ ಪಂಚಾಯಿತಿಯಲ್ಲಿಹತ್ತು ಚೆಕ್‌ ಡ್ಯಾಂ ನಿರ್ಮಾಣ ಕಡ್ಡಾಯ

ನರೇಗಾ ಯೋಜನೆಗೆ ಹೆಚ್ಚು ಒತ್ತನ್ನು ಕೊಟ್ಟು, ಹೆಚ್ಚು ಜನರಿಗೆ ಕೆಲಸ ನೀಡಬೇಕು ಎಂದು ಶಾಸಕ ಎ.ಮಂಜುನಾಥ್‌ ಹೇಳಿದರು.

Vijaya Karnataka 24 Aug 2019, 5:00 am
ಮಾಗಡಿ: ನರೇಗಾ ಯೋಜನೆಗೆ ಹೆಚ್ಚು ಒತ್ತನ್ನು ಕೊಟ್ಟು, ಹೆಚ್ಚು ಜನರಿಗೆ ಕೆಲಸ ನೀಡಬೇಕು ಎಂದು ಶಾಸಕ ಎ.ಮಂಜುನಾಥ್‌ ಹೇಳಿದರು.
Vijaya Karnataka Web construction of a check dam in each panchayat is mandatory
ಪ್ರತಿ ಪಂಚಾಯಿತಿಯಲ್ಲಿಹತ್ತು ಚೆಕ್‌ ಡ್ಯಾಂ ನಿರ್ಮಾಣ ಕಡ್ಡಾಯ


ಪಟ್ಟಣದ ತಾಲೂಕು ಪಂಚಾಯತಿ ಆವರಣದಲ್ಲಿ ನಡೆದ ತಾಲೂಕಿನ ನರೇಗಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನಿಷ್ಟ 10 ಚೆಕ್‌ ಡ್ಯಾಂ ನಿರ್ಮಿಸಿ : ಪ್ರತಿಯೊಂದು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿಕನಿಷ್ಟ 10 ಚೆಕ್‌ ಡ್ಯಾಂ ನಿರ್ಮಿಸಬೇಕು. ತಲಾ ರೂ.10ಲಕ್ಷದಿಂದ 30 ಲಕ್ಷ ವೆಚ್ಚದಲ್ಲಿಮಳೆಯ ನೀರು ಸಂಗ್ರಹಿಸುವ ಚೆಕ್‌ ಡ್ಯಾಂ ನಿರ್ಮಿಸಲೇಬೇಕು. ರೈತರಿಗೆ ಅನುಕೂಲ ಮಾಡಿಕೊಡಲು ದನದ ಕೊಟ್ಟಿಗೆ, ಸಂಜೀವಿನಿ ಶೆಡ್‌, ಆಟದ ಮೈದಾನ, ಶಾಲಾ ಕಾಂಪೌಂಡ್‌, ದನದ ಕೊಟ್ಟಿಗೆ ನಿರ್ಮಿಸಬೇಕು. ಮಧ್ಯವರ್ತಿಗಳನ್ನು ಆಶ್ರಯಿಸದೇ ರೈತರ ಮನೆಯ ಬಾಗಿಲಿಗೆ ನೇರ ತೆರಳಿ ಮಾಹಿತಿ ಸಂಗ್ರಹಿಸಿ ಸವಲತ್ತು ನೀಡಬೇಕು. ಅಭಿವೃದ್ಧಿಗೆ ಸಹಕರಿಸದ ಅಧಿಧಿಕಾರಿಗಳು ಮುಂದಿನ ಮನೆ ನೋಡಿಕೊಳ್ಳ ಬಹುದು ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಸಕಾಲಕ್ಕೆ ಹಣ ನೀಡಿ : ನರೇಗಾ ಯೋಜನೆಯಡಿ ಸಮರ್ಪಕವಾಗಿ ಕೆಲಸ ಮಾಡಿಸಿ, ಜಾಬ್‌ ಕಾರ್ಡದಾರರಿಗೆ ಸಮಯಕ್ಕೆ ಸರಿಯಾಗಿ ಹಣ ನೀಡಬೇಕು. ಕನಕಪುರ ತಾಲೂಕಿನಲ್ಲಿಪಂಚಾಯಿತಿ ಅಭಿವೃದ್ಧಿ ಅಧಿಧಿಕಾರಿ, ನರೇಗಾ ಎಂಜಿನಿಯರ್‌ಗಳು, ಡಟಾಎಂಟ್ರಿ ಆಫರೇಟರ್ಸ್, ಪಂಚಾಯಿತಿ ಅಧ್ಯಕ್ಷರ ಜತೆ ಸೇರಿ, ಹಗಲು ರಾತ್ರಿ ಕಂಪ್ಯೂಟರ್‌ ಮುಂದೆ ಕುಳಿತು ನರೇಗಾ ಯೋಜನೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ತಾಲೂಕಿನ ಅಧಿಧಿಕಾರಿಗಳು, ಸೋಮಾರಿತನ ಕೈಬಿಟ್ಟು, ನರೇಗಾ ಟಾರ್ಗೆಟ್‌ ತಲುಪಲೇಬೇಕು ಎಂದರು. ಸಭೆಯಲ್ಲಿಮಾಹಿತಿ ನೀಡಲು ತಡಕಾಡಿದ ಕೆಲವು ಅಧಿಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.

ಗುರಿ ಸಾಧನೆಗೆ ಪ್ರಯತ್ನ: ತಾಲೂಕು ಪಂಚಾಯಿತಿ ಇಒ ಪ್ರದೀಪ್‌ ಮಾತನಾಡಿ, ನರೇಗಾ ಯೋಜನೆಯಡಿ 12 ಲಕ್ಷ ಮಾನವ ದಿನಗಳ ವಾರ್ಷಿಕ ಗುರಿ ತಲುಪಬೇಕಿತ್ತು. ಆಗಸ್ಟ್‌ ತಿಂಗಳಲ್ಲಿ4ಲಕ್ಷದ 32 ಸಾವಿರ 725 ಮಾನವ ದಿನಗಳ ಕೆಲಸ ಮಾಡಿಸಬೇಕಿತ್ತು. ಅದರಲ್ಲಿ4,14, 934 ಮಾನವ ದಿನಗಳ ಗುರಿ ಸಾಧಿಧಿಸಿದ್ದೇವೆ. ಆರ್ಥಿಕ ವರ್ಷದಲ್ಲಿ49.80 ಕೋಟಿ ಹಣ ಖರ್ಚುಮಾಡುವ ವಾರ್ಷಿಕ ಗುರಿಯನ್ನು ನಿಗಧಿದಿಗೊಳಿಸಲಾಗಿತ್ತು. ಅದರಲ್ಲಿ20.80 ಕೋಟಿ ವೆಚ್ಚದ ಕಾಮಗಾರಿಗಳನ್ನು ಮಾಡಿಸಿ, ಗುರಿ ಸಾಧಿಧಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಅಂಬಿಕಾ ನರಸಿಂಹಮೂರ್ತಿ, ತಾಲೂಕು ಪಂಚಾಯಿತಿ ಸದಸ್ಯರಾದ ಎಂ.ಎಚ್‌. ಸುರೇಶ್‌, ಎಂ.ಜಿ.ನರಸಿಂಹಮೂರ್ತಿ, ಶಿವಮ್ಮ, ಸುಗುಣ, ನಾರಾಯಣಪ್ಪ, ಗಂಗಮ್ಮ, ಮಾದಿಗೊಂಡನಹಳ್ಳಿ ಗ್ರಾ.ಪಂ,ಅಧ್ಯಕ್ಷ ಮಾರುತಿಗೌಡ, ಕಲ್ಯ ಗ್ರಾ.ಪಂ.ಅಧ್ಯಕ್ಷ ಸಿದ್ದರಾಜು, ಸಾತನೂರು ಗ್ರಾ.ಪಂ.ಅಧ್ಯಕ್ಷ ಗಿರಿಯಪ್ಪ, ಕುದೂರು ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಟಿ.ವೆಂಕಟೇಶ್‌ 32 ಗ್ರಾಮಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ನರೇಗಾ ಎಂಜಿನಿಯರ್‌ಗಳು, ತಾಲೂಕು ಮಟ್ಟದ ಅಧಿಧಿಕಾರಿಗಳು ಭಾಗವಹಿಸಿದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ